<p>ಮರಿಯಮ್ಮನಹಳ್ಳಿ: ಹೊಲಕ್ಕೆ ನೀರು ಕಟ್ಟಲು ತೆರಳಿದ್ದ ರೈತನೊಬ್ಬನಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಸಮೀಪದ ಕಟ್ಟೆಹೊಲ ತಾಂಡಾದಲ್ಲಿ ಮಂಗಳವಾರ ಜರುಗಿದೆ.<br /> <br /> ಮೃತಪಟ್ಟವನನ್ನು ಕಟ್ಟೆಹೊಲ ತಾಂಡಾದ ಶಂಕರ್ ನಾಯ್ಕ(55) ಎಂದು ಗುರುತಿಸಲಾಗಿದೆ.<br /> ಹೊಲದಲ್ಲಿ ನೀರು ಕಟ್ಟಿದ ಬಳಿಕ ಅಲ್ಲಿಯೇ ಮಲಗಿದ್ದಾಗ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> <br /> <strong>ಬಾಲಕಿ ಸಾವು: </strong>ಟ್ರ್ಯಾಕ್ಟರ್ರೊಂದು ಹಿಮ್ಮುಖವಾಗಿ ಚಲಿಸುವ ಸಂದರ್ಭ ದಲ್ಲಿ ಬಾಲಕಿಯೊಬ್ಬಳ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ ಲೋಕಪ್ಪನಹೊಲದ ಬಳಿಯ ವಿಎಸ್ಎಲ್ ಆಗ್ರೊಟೆಕ್ ಕಂಪೆನಿಯ ಗ್ರೀನ್ಹೌಸ್ನಲ್ಲಿ ಮಂಗಳವಾರ ಜರುಗಿದೆ.<br /> <br /> ಮೃತಪಟ್ಟ ಬಾಲಕಿಯನ್ನು ಮುಂಡ್ರಿಗಿ ಬಳಿಯ ದೋನಿಗ್ರಾಮದ ದ್ಯಾಮವ್ವ (13) ಎಂದು ಗುರುತಿಸಲಾಗಿದೆ.<br /> ಈಕೆ ಸಮೀಪದ ಸೊನ್ನ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದು, ಸಂಬಂಧಿಕರೊಬ್ಬರು ವಿಎಸ್ಎಲ್ ಆಗ್ರೊಟೆಕ್ನಲ್ಲಿ ಕೆಲಸದಲ್ಲಿ ತೊಡಗಿದ್ದು, ಮಂಗಳವಾರ ಆ ಸಂಬಂಧಿಕ ಮಹಿಳೆಯ ಜತೆಗೆ ವಿಎಸ್ಎಲ್ ಗ್ರೀನ್ಹೌಸ್ ನೋಡಲು ತೆರಳಿದ್ದಾಳೆ. ಮಧ್ಯಾಹ್ನದ ಸಮಯದಲ್ಲಿ ಮರದ ನೆರಳಲ್ಲಿ ಕುಳಿತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ರೊಂದು ಹಿಮ್ಮುಖವಾಗಿ ಚಲಿಸಲು ಹಿಂದೆ ತೆಗೆದುಕೊಳ್ಳವ ಸಮಯದಲ್ಲಿ ಬಾಲಕಿಯ ಮೇಲೆ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿ ಸಾವು: ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಸಮೀಪದ ಡಣಾಪುರ ಬಳಿಯ ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಸೋಮವಾರ ಜರುಗಿದೆ.<br /> ಮೃತಪಟ್ಟವನನ್ನು ಪಟ್ಟಣದ 6ನೇ ವಾರ್ಡ್ನ ಎಲ್.ಪಾಂಡುರಂಗ (45) ಎಂದು ಗುರುತಿಸಲಾಗಿದೆ.<br /> <br /> ಪಾಂಡುರಂಗ ಮತ್ತು ಇತರರು ಟ್ರ್ಯಾಕ್ಟರ್ನಲ್ಲಿ ಮಣ್ಣು ತುಂಬಲು ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಹಾಕಿರುವ ಮಣ್ಣಿನ ಗುಡ್ಡೆಯಲ್ಲಿ ಮಣ್ಣು ತುಂಬಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಾಂಡುರಂಗ ಮಣ್ಣು ತುಂಬುತ್ತಿದ್ದಾಗ ಚಾಲಕ ಟ್ರ್ಯಾಕ್ಟರ್ನ್ನು ಹಿಮ್ಮುಖವಾಗಿ ಚಲಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ. <br /> <br /> ಡಿಕ್ಕಿ ಹೊಡೆದ ರಭಸಕ್ಕೆ ಮಣ್ಣಿನ ಗುಡ್ಡೆ ಪಾಂಡುರಂಗನ ಮೇಲೆ ಬಿದ್ದಿದ್ದೆ. ತೀವ್ರ ಆಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮರಿಯಮ್ಮನಹಳ್ಳಿ: ಹೊಲಕ್ಕೆ ನೀರು ಕಟ್ಟಲು ತೆರಳಿದ್ದ ರೈತನೊಬ್ಬನಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಸಮೀಪದ ಕಟ್ಟೆಹೊಲ ತಾಂಡಾದಲ್ಲಿ ಮಂಗಳವಾರ ಜರುಗಿದೆ.<br /> <br /> ಮೃತಪಟ್ಟವನನ್ನು ಕಟ್ಟೆಹೊಲ ತಾಂಡಾದ ಶಂಕರ್ ನಾಯ್ಕ(55) ಎಂದು ಗುರುತಿಸಲಾಗಿದೆ.<br /> ಹೊಲದಲ್ಲಿ ನೀರು ಕಟ್ಟಿದ ಬಳಿಕ ಅಲ್ಲಿಯೇ ಮಲಗಿದ್ದಾಗ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> <br /> <strong>ಬಾಲಕಿ ಸಾವು: </strong>ಟ್ರ್ಯಾಕ್ಟರ್ರೊಂದು ಹಿಮ್ಮುಖವಾಗಿ ಚಲಿಸುವ ಸಂದರ್ಭ ದಲ್ಲಿ ಬಾಲಕಿಯೊಬ್ಬಳ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ ಲೋಕಪ್ಪನಹೊಲದ ಬಳಿಯ ವಿಎಸ್ಎಲ್ ಆಗ್ರೊಟೆಕ್ ಕಂಪೆನಿಯ ಗ್ರೀನ್ಹೌಸ್ನಲ್ಲಿ ಮಂಗಳವಾರ ಜರುಗಿದೆ.<br /> <br /> ಮೃತಪಟ್ಟ ಬಾಲಕಿಯನ್ನು ಮುಂಡ್ರಿಗಿ ಬಳಿಯ ದೋನಿಗ್ರಾಮದ ದ್ಯಾಮವ್ವ (13) ಎಂದು ಗುರುತಿಸಲಾಗಿದೆ.<br /> ಈಕೆ ಸಮೀಪದ ಸೊನ್ನ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದು, ಸಂಬಂಧಿಕರೊಬ್ಬರು ವಿಎಸ್ಎಲ್ ಆಗ್ರೊಟೆಕ್ನಲ್ಲಿ ಕೆಲಸದಲ್ಲಿ ತೊಡಗಿದ್ದು, ಮಂಗಳವಾರ ಆ ಸಂಬಂಧಿಕ ಮಹಿಳೆಯ ಜತೆಗೆ ವಿಎಸ್ಎಲ್ ಗ್ರೀನ್ಹೌಸ್ ನೋಡಲು ತೆರಳಿದ್ದಾಳೆ. ಮಧ್ಯಾಹ್ನದ ಸಮಯದಲ್ಲಿ ಮರದ ನೆರಳಲ್ಲಿ ಕುಳಿತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ರೊಂದು ಹಿಮ್ಮುಖವಾಗಿ ಚಲಿಸಲು ಹಿಂದೆ ತೆಗೆದುಕೊಳ್ಳವ ಸಮಯದಲ್ಲಿ ಬಾಲಕಿಯ ಮೇಲೆ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br /> ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿ ಸಾವು: ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಸಮೀಪದ ಡಣಾಪುರ ಬಳಿಯ ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಸೋಮವಾರ ಜರುಗಿದೆ.<br /> ಮೃತಪಟ್ಟವನನ್ನು ಪಟ್ಟಣದ 6ನೇ ವಾರ್ಡ್ನ ಎಲ್.ಪಾಂಡುರಂಗ (45) ಎಂದು ಗುರುತಿಸಲಾಗಿದೆ.<br /> <br /> ಪಾಂಡುರಂಗ ಮತ್ತು ಇತರರು ಟ್ರ್ಯಾಕ್ಟರ್ನಲ್ಲಿ ಮಣ್ಣು ತುಂಬಲು ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಹಾಕಿರುವ ಮಣ್ಣಿನ ಗುಡ್ಡೆಯಲ್ಲಿ ಮಣ್ಣು ತುಂಬಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಾಂಡುರಂಗ ಮಣ್ಣು ತುಂಬುತ್ತಿದ್ದಾಗ ಚಾಲಕ ಟ್ರ್ಯಾಕ್ಟರ್ನ್ನು ಹಿಮ್ಮುಖವಾಗಿ ಚಲಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ. <br /> <br /> ಡಿಕ್ಕಿ ಹೊಡೆದ ರಭಸಕ್ಕೆ ಮಣ್ಣಿನ ಗುಡ್ಡೆ ಪಾಂಡುರಂಗನ ಮೇಲೆ ಬಿದ್ದಿದ್ದೆ. ತೀವ್ರ ಆಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>