<p><strong>ಶ್ರೀರಂಗಪಟ್ಟಣ: </strong>ಮೊದಲ ಬಾರಿ ಎಂಬಂತೆ ಟಿಪ್ಪು ಸುಲ್ತಾನ್ ಅವರ 219ನೇ ಉರುಸ್ ಆನೆ, ಕುದುರೆ, ಸಾರೋಟು, ಕವ್ವಾಲಿ ಸಹಿತ ಗುರುವಾರ ಸಡಗರ, ಸಂಭ್ರಮದಿಂದ ನಡೆಯಿತು.<br /> <br /> ಸಂದಲ್ (ಪವಿತ್ರ ಗಂಧ) ಸಹಿತ ಉರುಸ್ ಮೆರವಣಿಗೆಗಾಗಿ ಮಹಾರಾಷ್ಟ್ರದಿಂದಲೂ ಆನೆಗಳನ್ನು ತರಿಸಲಾಗಿತ್ತು. ಮಹಾರಾಷ್ಟ್ರದ ಮಾಧವಿ, ಬೆಳಗಾಂನ ಪದ್ಮ, ಹುಬ್ಬಳ್ಳಿಯ ಝಾನ್ಸಿರಾಣಿ ಸೇರಿ 7 ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. 40ಕ್ಕೂ ಹೆಚ್ಚು ಕುದುರೆಗಳು ಪಾಲ್ಗೊಂಡಿದ್ದವು. ಪಟ್ಟಣದ ಮಸ್ಜಿದ್-ಎ-ಅಲಾ (ದೊಡ್ಡ ಮಸೀದಿ)ಯಿಂದ ಗುಂಬಸ್ವರೆಗೆ ಆನೆಗಳೂ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಮೂರು ಸಾರೋಟುಗಳು ಮೆರವಣಿಗೆಯಲ್ಲಿದ್ದವು. <br /> <br /> ಟಿಪ್ಪು ಜನ್ಮಸ್ಥಳ ದೇವನಹಳ್ಳಿ, ಬೆಂಗಳೂರು, ಮೈಸೂರಿನಿಂದ ಪವಿತ್ರ ಗಂಧವನ್ನು ತರಲಾಗಿತ್ತು. <br /> ಗಂಜಾಂ ಹಾಗೂ ಶ್ರೀರಂಗಪಟ್ಟಣದಿಂದ ಪ್ರತ್ಯೇಕ ಗಂಧದ ಮೆರವಣಿಗೆ ನಡೆಯಿತು. ಬೆಂಗಳೂರಿನ ವಾರ್ಸಿಯಾ ತಂಡದ ಸೂಫಿ ಪಂಥದ ಮಹಿಳೆಯರು ಉರುಸ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. <br /> <br /> ಇಸ್ಮಾಯಿಲ್ ಷರೀಫ್ ತಂಡ ಸೇರಿದಂತೆ 10ಕ್ಕೂ ಹೆಚ್ಚು ತಂಡಗಳು ಟಿಪ್ಪುವಿನ ಲಾವಣಿ ಹಾಡುತ್ತಾ 3 ಕಿ.ಮೀ. ದೂರದ ಟಿಪ್ಪು ಸಮಾಧಿ ಸ್ಥಳ ಗುಂಬಸ್ವರೆಗೆ ಸಾಗಿದವು. ಕವ್ವಾಲಿ ಹಾಡುಗಾರರು ತನ್ಮಯತೆಯಿಂದ ಕನ್ನಡ ಮತ್ತು ಉರ್ದು ಗಾಯನ ಪ್ರಸ್ತುತ ಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ: </strong>ಮೊದಲ ಬಾರಿ ಎಂಬಂತೆ ಟಿಪ್ಪು ಸುಲ್ತಾನ್ ಅವರ 219ನೇ ಉರುಸ್ ಆನೆ, ಕುದುರೆ, ಸಾರೋಟು, ಕವ್ವಾಲಿ ಸಹಿತ ಗುರುವಾರ ಸಡಗರ, ಸಂಭ್ರಮದಿಂದ ನಡೆಯಿತು.<br /> <br /> ಸಂದಲ್ (ಪವಿತ್ರ ಗಂಧ) ಸಹಿತ ಉರುಸ್ ಮೆರವಣಿಗೆಗಾಗಿ ಮಹಾರಾಷ್ಟ್ರದಿಂದಲೂ ಆನೆಗಳನ್ನು ತರಿಸಲಾಗಿತ್ತು. ಮಹಾರಾಷ್ಟ್ರದ ಮಾಧವಿ, ಬೆಳಗಾಂನ ಪದ್ಮ, ಹುಬ್ಬಳ್ಳಿಯ ಝಾನ್ಸಿರಾಣಿ ಸೇರಿ 7 ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. 40ಕ್ಕೂ ಹೆಚ್ಚು ಕುದುರೆಗಳು ಪಾಲ್ಗೊಂಡಿದ್ದವು. ಪಟ್ಟಣದ ಮಸ್ಜಿದ್-ಎ-ಅಲಾ (ದೊಡ್ಡ ಮಸೀದಿ)ಯಿಂದ ಗುಂಬಸ್ವರೆಗೆ ಆನೆಗಳೂ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಮೂರು ಸಾರೋಟುಗಳು ಮೆರವಣಿಗೆಯಲ್ಲಿದ್ದವು. <br /> <br /> ಟಿಪ್ಪು ಜನ್ಮಸ್ಥಳ ದೇವನಹಳ್ಳಿ, ಬೆಂಗಳೂರು, ಮೈಸೂರಿನಿಂದ ಪವಿತ್ರ ಗಂಧವನ್ನು ತರಲಾಗಿತ್ತು. <br /> ಗಂಜಾಂ ಹಾಗೂ ಶ್ರೀರಂಗಪಟ್ಟಣದಿಂದ ಪ್ರತ್ಯೇಕ ಗಂಧದ ಮೆರವಣಿಗೆ ನಡೆಯಿತು. ಬೆಂಗಳೂರಿನ ವಾರ್ಸಿಯಾ ತಂಡದ ಸೂಫಿ ಪಂಥದ ಮಹಿಳೆಯರು ಉರುಸ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. <br /> <br /> ಇಸ್ಮಾಯಿಲ್ ಷರೀಫ್ ತಂಡ ಸೇರಿದಂತೆ 10ಕ್ಕೂ ಹೆಚ್ಚು ತಂಡಗಳು ಟಿಪ್ಪುವಿನ ಲಾವಣಿ ಹಾಡುತ್ತಾ 3 ಕಿ.ಮೀ. ದೂರದ ಟಿಪ್ಪು ಸಮಾಧಿ ಸ್ಥಳ ಗುಂಬಸ್ವರೆಗೆ ಸಾಗಿದವು. ಕವ್ವಾಲಿ ಹಾಡುಗಾರರು ತನ್ಮಯತೆಯಿಂದ ಕನ್ನಡ ಮತ್ತು ಉರ್ದು ಗಾಯನ ಪ್ರಸ್ತುತ ಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>