<p><strong>ಬೀದರ್: </strong>‘ಅಂಗವಿಕಲತೆಯ ಪ್ರಮಾಣ ಆಧರಿಸಿ ಮಾಸಾಶನದ ಮೊತ್ತ ನಿಗದಿಯಾಗುತ್ತದೆ. ಎಲ್ಲರೂ ಹೆಚ್ಚಿನ ಮಾಸಾಶನವನ್ನೇ ಬಯಸುತ್ತಾರೆ. ಸಾಮಾನ್ಯವಾಗಿ ಅಸಮಾಧಾನದ ಮಾತು ಕೇಳಿ ಬರಲು ಇದೇ ಕಾರಣ’.<br /> <br /> ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳಿಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಬನ್ಸಿ ಪವಾರ್ ಅವರ ಪ್ರತಿಕ್ರಿಯೆ ಇದು. <br /> <br /> ನಿಯಮದ ಪ್ರಕಾರ ಶೇ 40ರಷ್ಟು ಅಂಗ ವೈಕಲ್ಯತೆ ಇದ್ದಲ್ಲಿ ಮಾಸಿಕ ರೂ. 500, ಶೇ 75ಕ್ಕೂ ಹೆಚ್ಚು ಅಂಗವೈಕಲ್ಯತೆ ಇದ್ದರೆ ಮಾಸಿಕ ರೂ. 1,200 ಮಾಸಾಶನ ಇರುತ್ತದೆ. ಆದರೆ ಎಲ್ಲರೂ ಹೆಚ್ಚಿನ ಮೊತ್ತವನ್ನೇ ಬಯಸುತ್ತಾರೆ. ಅದಕ್ಕಾಗಿ ಪ್ರಮಾಣಪತ್ರ ಬೇಕು ಎನ್ನುತ್ತಾರೆ.<br /> <br /> ಆಧಾರ್ ಯೋಜನೆಯಡಿ ಜಿಲ್ಲೆಗೆ ವಾರ್ಷಿಕ ಎಂಟು ಮಂದಿಗೆ ನೆರವು ನೀಡುವ ಅವಕಾಶ ಮಂಜೂರಾಗುತ್ತದೆ. ಇದರ ಪ್ರಕಾರ, ₨ 20 ಸಾವಿರ ಸಾಲ, ₨ 15 ಸಾವಿರ ನೆರವು ಸಿಗಲಿದೆ. ₨ 20 ಸಾವಿರ ಸಾಲವನ್ನು ಮರು ಪಾವತಿಸಬೇಕು. ಈ ಯೋಜನೆ 1995ರಲ್ಲಿ ಆರಂಭಿಸಲಾಗಿದ್ದು, ಇದುವರೆಗೂ ಸಾಲದ ಮೊತ್ತ ಒಂದು ಪೈಸೆಯೂ ವಾಪಸು ಬಂದಿಲ್ಲ. ಇದು ಜಿಲ್ಲೆಯಲ್ಲಿನ ವಾಸ್ತವ ಸ್ಥಿತಿ. ಒಬ್ಬ ಫಲಾನುಭವಿ ಸ್ವಾವಲಂಬಿಯಾಗಿ ನೆಲೆಯೂರಿದ ನಂತರ ಪಡೆದ ಸಾಲ ಮರುಪಾವತಿಸಿದರೆ, ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ನೆರವು ತಲುಪುತ್ತದೆ. ಆದರೂ, ಆದಷ್ಟು ಹೆಚ್ಚು ಜನರಿಗೆ ಸೌಲಭ್ಯ ತಲುಪಿಸಲು ಯತ್ನಿಸಲಾಗುತ್ತಿದೆ ಎನ್ನುತ್ತಾರೆ ಅವರು.<br /> <br /> ಇಲಾಖೆ ದಾಖಲೆಗಳ ಪ್ರಕಾರ, ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ 35,312. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಖಚಿತ ಮಾಹಿತಿ ಲಭ್ಯವಿಲ್ಲ.<br /> <br /> 2012–13ನೇ ಸಾಲಿನಲ್ಲಿ 3,475 ಅಂಗವಿಕಲರಿಗೆ ರಿಯಾಯಿತಿ ದರದ ಬಸ್ ಪಾಸ್, ಗ್ರಾಮೀಣ ಪುನರ್ವಸತಿ ಯೋಜನೆಯಡಿ 175 ಜನರಿಗೆ ಗೌರವಧನವಾಗಿ ₨ 5.23 ಲಕ್ಷ ನೆರವು, ಸ್ವಸಹಾಯಸಂಘ ಯೋಜನೆಯಡಿ 4 ತಾಲ್ಲೂಕಿನಲ್ಲಿ ತಲಾ ₨ 1 ಲಕ್ಷ ನೆರವು, ಸಾಧನ ಸಲಕರಣೆ ಯೋಜನೆಯಡಿ ಶ್ರವಣ ಸಾಧನಗಳ ವಿತರಣೆ ಆಗಿದೆ.<br /> <br /> <strong>‘ಸಹಾಯವಾಣಿ ಬೇಕು’</strong><br /> ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಸಹಾಯವಾಣಿ ಆರಂಭಿಸಬೇಕು. ಆದರೆ ಜಿಲ್ಲಾಡಳಿತದಿಂದ ಇದಕ್ಕೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬರುವ ಸಚಿವರು, ಅಧಿಕಾರಿಗಳಿಗೆಲ್ಲಾ ಮನವಿ ಸಲ್ಲಿಸುತ್ತಿದ್ದೇನೆ. ಆದರೂ ಪ್ರಯೋಜನ ಆಗಿಲ್ಲ.ಸಹಾಯವಾಣಿ ಆದರೆ ಅರ್ಹರು ಕಷ್ಟದಲ್ಲಿದ್ದಾಗ ನೆರವು ಪಡೆಯಲು ಸಹಾಯಕ’.</p>.<p><strong>–ಸಂತೋಷ ಎಂ ಭಾಲ್ಕೆ, ಜಿಲ್ಲಾ ಅಂಗವಿಕಲರ ರಕ್ಷಣಾ ಸಮಿತಿ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>‘ಅಂಗವಿಕಲತೆಯ ಪ್ರಮಾಣ ಆಧರಿಸಿ ಮಾಸಾಶನದ ಮೊತ್ತ ನಿಗದಿಯಾಗುತ್ತದೆ. ಎಲ್ಲರೂ ಹೆಚ್ಚಿನ ಮಾಸಾಶನವನ್ನೇ ಬಯಸುತ್ತಾರೆ. ಸಾಮಾನ್ಯವಾಗಿ ಅಸಮಾಧಾನದ ಮಾತು ಕೇಳಿ ಬರಲು ಇದೇ ಕಾರಣ’.<br /> <br /> ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳಿಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಬನ್ಸಿ ಪವಾರ್ ಅವರ ಪ್ರತಿಕ್ರಿಯೆ ಇದು. <br /> <br /> ನಿಯಮದ ಪ್ರಕಾರ ಶೇ 40ರಷ್ಟು ಅಂಗ ವೈಕಲ್ಯತೆ ಇದ್ದಲ್ಲಿ ಮಾಸಿಕ ರೂ. 500, ಶೇ 75ಕ್ಕೂ ಹೆಚ್ಚು ಅಂಗವೈಕಲ್ಯತೆ ಇದ್ದರೆ ಮಾಸಿಕ ರೂ. 1,200 ಮಾಸಾಶನ ಇರುತ್ತದೆ. ಆದರೆ ಎಲ್ಲರೂ ಹೆಚ್ಚಿನ ಮೊತ್ತವನ್ನೇ ಬಯಸುತ್ತಾರೆ. ಅದಕ್ಕಾಗಿ ಪ್ರಮಾಣಪತ್ರ ಬೇಕು ಎನ್ನುತ್ತಾರೆ.<br /> <br /> ಆಧಾರ್ ಯೋಜನೆಯಡಿ ಜಿಲ್ಲೆಗೆ ವಾರ್ಷಿಕ ಎಂಟು ಮಂದಿಗೆ ನೆರವು ನೀಡುವ ಅವಕಾಶ ಮಂಜೂರಾಗುತ್ತದೆ. ಇದರ ಪ್ರಕಾರ, ₨ 20 ಸಾವಿರ ಸಾಲ, ₨ 15 ಸಾವಿರ ನೆರವು ಸಿಗಲಿದೆ. ₨ 20 ಸಾವಿರ ಸಾಲವನ್ನು ಮರು ಪಾವತಿಸಬೇಕು. ಈ ಯೋಜನೆ 1995ರಲ್ಲಿ ಆರಂಭಿಸಲಾಗಿದ್ದು, ಇದುವರೆಗೂ ಸಾಲದ ಮೊತ್ತ ಒಂದು ಪೈಸೆಯೂ ವಾಪಸು ಬಂದಿಲ್ಲ. ಇದು ಜಿಲ್ಲೆಯಲ್ಲಿನ ವಾಸ್ತವ ಸ್ಥಿತಿ. ಒಬ್ಬ ಫಲಾನುಭವಿ ಸ್ವಾವಲಂಬಿಯಾಗಿ ನೆಲೆಯೂರಿದ ನಂತರ ಪಡೆದ ಸಾಲ ಮರುಪಾವತಿಸಿದರೆ, ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ನೆರವು ತಲುಪುತ್ತದೆ. ಆದರೂ, ಆದಷ್ಟು ಹೆಚ್ಚು ಜನರಿಗೆ ಸೌಲಭ್ಯ ತಲುಪಿಸಲು ಯತ್ನಿಸಲಾಗುತ್ತಿದೆ ಎನ್ನುತ್ತಾರೆ ಅವರು.<br /> <br /> ಇಲಾಖೆ ದಾಖಲೆಗಳ ಪ್ರಕಾರ, ಜಿಲ್ಲೆಯಲ್ಲಿರುವ ಅಂಗವಿಕಲರ ಸಂಖ್ಯೆ 35,312. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಖಚಿತ ಮಾಹಿತಿ ಲಭ್ಯವಿಲ್ಲ.<br /> <br /> 2012–13ನೇ ಸಾಲಿನಲ್ಲಿ 3,475 ಅಂಗವಿಕಲರಿಗೆ ರಿಯಾಯಿತಿ ದರದ ಬಸ್ ಪಾಸ್, ಗ್ರಾಮೀಣ ಪುನರ್ವಸತಿ ಯೋಜನೆಯಡಿ 175 ಜನರಿಗೆ ಗೌರವಧನವಾಗಿ ₨ 5.23 ಲಕ್ಷ ನೆರವು, ಸ್ವಸಹಾಯಸಂಘ ಯೋಜನೆಯಡಿ 4 ತಾಲ್ಲೂಕಿನಲ್ಲಿ ತಲಾ ₨ 1 ಲಕ್ಷ ನೆರವು, ಸಾಧನ ಸಲಕರಣೆ ಯೋಜನೆಯಡಿ ಶ್ರವಣ ಸಾಧನಗಳ ವಿತರಣೆ ಆಗಿದೆ.<br /> <br /> <strong>‘ಸಹಾಯವಾಣಿ ಬೇಕು’</strong><br /> ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಸಹಾಯವಾಣಿ ಆರಂಭಿಸಬೇಕು. ಆದರೆ ಜಿಲ್ಲಾಡಳಿತದಿಂದ ಇದಕ್ಕೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬರುವ ಸಚಿವರು, ಅಧಿಕಾರಿಗಳಿಗೆಲ್ಲಾ ಮನವಿ ಸಲ್ಲಿಸುತ್ತಿದ್ದೇನೆ. ಆದರೂ ಪ್ರಯೋಜನ ಆಗಿಲ್ಲ.ಸಹಾಯವಾಣಿ ಆದರೆ ಅರ್ಹರು ಕಷ್ಟದಲ್ಲಿದ್ದಾಗ ನೆರವು ಪಡೆಯಲು ಸಹಾಯಕ’.</p>.<p><strong>–ಸಂತೋಷ ಎಂ ಭಾಲ್ಕೆ, ಜಿಲ್ಲಾ ಅಂಗವಿಕಲರ ರಕ್ಷಣಾ ಸಮಿತಿ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>