<p><strong>ಬೆಂಗಳೂರು:</strong> ‘ಹಿಂದೆಯೂ ಹಲವು ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೆ. ಪ್ರತಿ ಬಾರಿಯೂ ನಿರಾಸೆ ಎದುರಾಗುತ್ತಿತ್ತು. ಆದ್ದರಿಂದ ಈ ಸಲ ಪ್ರಶಸ್ತಿ ಗೆಲ್ಲುತ್ತೇನೆ ಎನ್ನುವ ಭರವಸೆ ಇರಲಿಲ್ಲ. ಆದರೆ, ಜರ್ಮನಿಯಲ್ಲಿ ಪ್ರಶಸ್ತಿ ಗೆದ್ದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಕೆಲ ಹೊತ್ತು ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ನಿರೀಕ್ಷೆಗೂ ಮೀರಿದ ಸಾಧನೆ ಸಾಕಷ್ಟು ಖುಷಿ ಕೊಟ್ಟಿದೆ...’<br /> –ಜರ್ಮನಿಯ ಮುಲ್ಹೈಮ್ ಆ್ಯನ್ಡೆರೊವ್ನಲ್ಲಿ ನಡೆದ ಜರ್ಮನ್ ಓಪನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಅರವಿಂದ್ ಭಟ್ ಹೇಳಿದ ಮಾತಿದು.<br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅರವಿಂದ್ ಅವರನ್ನು ಸನ್ಮಾನಿಸಿ ರೂ.1 ಲಕ್ಷ ಬಹುಮಾನ ನೀಡಿತು.<br /> <br /> ಕೆಬಿಎ ಗೌರವ ಚೇರ್ಮನ್ ಎನ್.ಸಿ. ಸುಧೀರ್, ಖಚಾಂಚಿ ಬಿ.ವಿ. ಶ್ರೀನಿವಾಸ್ ಅವರು ಅರವಿಂದ್ ಸಾಧನೆಯನ್ನು ಪ್ರಶಂಸಿಸಿದರು. ಅರವಿಂದ್ ತಂದೆ ಪ್ರಭಾಕರ್ ಭಟ್್, ತಾಯಿ ಸರಸ್ವತಿ ಹಾಗೂ ಪತ್ನಿ ಪಲ್ಲವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.<br /> <br /> ‘ಮಗ ಪ್ರಶಸ್ತಿ ಗೆಲ್ಲುತ್ತಾನೆ ಎನ್ನುವ ಭರವಸೆ ನಮಗೂ ಇರಲಿಲ್ಲ. ಆದರೆ, ನಮ್ಮ ಹಾರೈಕೆಯಂತೂ ಇತ್ತು. ಆತ ಪ್ರಶಸ್ತಿ ಗೆದ್ದ ವಿಷಯ ಗೊತ್ತಾಗುತ್ತಿದ್ದಂತೆಯೇ ನಮ್ಮ ಮನೆಯಲ್ಲಿ ಎಲ್ಲರೂ ಕುಣಿದಾಡಿ ಸಂಭ್ರಮಿಸಿದೆವು. ನಮ್ಮ ಮನೆಯಲ್ಲಂತೂ ಆ ದಿನ ಹಬ್ಬದ ವಾತಾವರಣ ಇತ್ತು’ ಎಂದು ಅರವಿಂದ್ ತಂದೆ ಪ್ರಭಾಕರ್ ಅವರು ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.<br /> <br /> <strong>ಪಡುಕೋಣೆ ಮೆಚ್ಚುಗೆ</strong><br /> ‘34ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ಪ್ರಶಸ್ತಿ ಗೆದ್ದಿರುವ ಅರವಿಂದ್ ಸಾಧನೆ ಶ್ಲಾಘನೀಯ’ ಎಂದು ಮಾಜಿ ಆಟಗಾರ ಪ್ರಕಾಶ್ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ‘ಕಠಿಣ ಪರಿಶ್ರಮದ ಜೊತೆಗೆ ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎನ್ನುವುದಕ್ಕೆ ಅರವಿಂದ್ ಗೆದ್ದ ಪ್ರಶಸ್ತಿಯೇ ಸಾಕ್ಷಿ’ ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹಿಂದೆಯೂ ಹಲವು ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೆ. ಪ್ರತಿ ಬಾರಿಯೂ ನಿರಾಸೆ ಎದುರಾಗುತ್ತಿತ್ತು. ಆದ್ದರಿಂದ ಈ ಸಲ ಪ್ರಶಸ್ತಿ ಗೆಲ್ಲುತ್ತೇನೆ ಎನ್ನುವ ಭರವಸೆ ಇರಲಿಲ್ಲ. ಆದರೆ, ಜರ್ಮನಿಯಲ್ಲಿ ಪ್ರಶಸ್ತಿ ಗೆದ್ದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಕೆಲ ಹೊತ್ತು ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ನಿರೀಕ್ಷೆಗೂ ಮೀರಿದ ಸಾಧನೆ ಸಾಕಷ್ಟು ಖುಷಿ ಕೊಟ್ಟಿದೆ...’<br /> –ಜರ್ಮನಿಯ ಮುಲ್ಹೈಮ್ ಆ್ಯನ್ಡೆರೊವ್ನಲ್ಲಿ ನಡೆದ ಜರ್ಮನ್ ಓಪನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಅರವಿಂದ್ ಭಟ್ ಹೇಳಿದ ಮಾತಿದು.<br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅರವಿಂದ್ ಅವರನ್ನು ಸನ್ಮಾನಿಸಿ ರೂ.1 ಲಕ್ಷ ಬಹುಮಾನ ನೀಡಿತು.<br /> <br /> ಕೆಬಿಎ ಗೌರವ ಚೇರ್ಮನ್ ಎನ್.ಸಿ. ಸುಧೀರ್, ಖಚಾಂಚಿ ಬಿ.ವಿ. ಶ್ರೀನಿವಾಸ್ ಅವರು ಅರವಿಂದ್ ಸಾಧನೆಯನ್ನು ಪ್ರಶಂಸಿಸಿದರು. ಅರವಿಂದ್ ತಂದೆ ಪ್ರಭಾಕರ್ ಭಟ್್, ತಾಯಿ ಸರಸ್ವತಿ ಹಾಗೂ ಪತ್ನಿ ಪಲ್ಲವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.<br /> <br /> ‘ಮಗ ಪ್ರಶಸ್ತಿ ಗೆಲ್ಲುತ್ತಾನೆ ಎನ್ನುವ ಭರವಸೆ ನಮಗೂ ಇರಲಿಲ್ಲ. ಆದರೆ, ನಮ್ಮ ಹಾರೈಕೆಯಂತೂ ಇತ್ತು. ಆತ ಪ್ರಶಸ್ತಿ ಗೆದ್ದ ವಿಷಯ ಗೊತ್ತಾಗುತ್ತಿದ್ದಂತೆಯೇ ನಮ್ಮ ಮನೆಯಲ್ಲಿ ಎಲ್ಲರೂ ಕುಣಿದಾಡಿ ಸಂಭ್ರಮಿಸಿದೆವು. ನಮ್ಮ ಮನೆಯಲ್ಲಂತೂ ಆ ದಿನ ಹಬ್ಬದ ವಾತಾವರಣ ಇತ್ತು’ ಎಂದು ಅರವಿಂದ್ ತಂದೆ ಪ್ರಭಾಕರ್ ಅವರು ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.<br /> <br /> <strong>ಪಡುಕೋಣೆ ಮೆಚ್ಚುಗೆ</strong><br /> ‘34ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ಪ್ರಶಸ್ತಿ ಗೆದ್ದಿರುವ ಅರವಿಂದ್ ಸಾಧನೆ ಶ್ಲಾಘನೀಯ’ ಎಂದು ಮಾಜಿ ಆಟಗಾರ ಪ್ರಕಾಶ್ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ‘ಕಠಿಣ ಪರಿಶ್ರಮದ ಜೊತೆಗೆ ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎನ್ನುವುದಕ್ಕೆ ಅರವಿಂದ್ ಗೆದ್ದ ಪ್ರಶಸ್ತಿಯೇ ಸಾಕ್ಷಿ’ ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>