<p><strong>ಚಿಟಗುಪ್ಪಾ:</strong> ಮಧ್ಯಪ್ರದೇಶ್,ರಾಜಸ್ತಾನ, ಛತ್ತೀಸಗಡ, ದೆಹಲಿಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಫಲಿತಾಂಶದಿಂದ, ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ನಡೆಯುವಂತೆ ಸಂದೇಶ ಸಿಕ್ಕಿದೆ ಎಂದು ಸಂಸದ ಎನ್.ಧರ್ಮಸಿಂಗ್ ನುಡಿದರು.<br /> <br /> ಭಾನುವಾರ ಹತ್ತಿರದ ಬೇಮಳಖೇಡಾ ಗ್ರಾಮದಲ್ಲಿ ಬೀದರ್ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಫಹೀಮ್ ಪಟೇಲ್ ಅವರ ಅಧಿಕಾರ ಸ್ವೀಕಾರ, ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br /> <br /> ಕಾಂಗ್ರೆಸ್ ಪಕ್ಷಕ್ಕೆ ಸೋಲು ಗೆಲುವಿನ ಚಿಂತೆ ಕಾಡುವುದಿಲ್ಲ, ನಿರಂತರವಾಗಿ ದೇಶದ ಭದ್ರತೆ, ಪ್ರಗತಿಗಾಗಿ ದುಡಿಯವ ಕಾರ್ಯ ನಮ್ಮದಾಗಿದೆ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಪಕ್ಷ ನಡೆಸುತ್ತಿರುತ್ತದೆ ಎಂದು ಹೇಳಿದರು.<br /> <br /> ಬಸವರಾಜ್ ಸಿಂಧೋಲ್, ತಾ. ಪಂ. ಮಾಜಿ ಅಧ್ಯಕ್ಷ ಮಸ್ತಾನ ನೂರೋದ್ದೀನ್, ಬಸಿರೋದ್ದೀನ್ ಹಾಲ ಹಿಪ್ಪರಗಾ, ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿದರು. ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಅಧ್ಯಕ್ಷತೆ ವಹಿಸಿದ್ದರು.<br /> ಚಂದ್ರಸೇನ್, ರಾಜಕುಮಾರ ಹಜಾರಿ, ಶಿರೋಮಣಿ, ಬಸವರಾಜ್ ಹೆಡೆ, ಶಮಿ, ನಿಸಾರ್, ವಿಜಯ ಲಕ್ಷ್ಮಿ, ಕಾಶಿನಾಥ ಬುದ್ಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರೆಮ್ಮ ಇತರರು ಇದ್ದರು.<br /> <br /> ವಿವಿಧ ಪಕ್ಷದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಪ್ರಭು ಸಾವಳಗಿ ಸ್ವಾಗತಿಸಿದರು. ಎಕ್ಬಾಲ್ ಶರೀಫ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪಾ:</strong> ಮಧ್ಯಪ್ರದೇಶ್,ರಾಜಸ್ತಾನ, ಛತ್ತೀಸಗಡ, ದೆಹಲಿಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಫಲಿತಾಂಶದಿಂದ, ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ನಡೆಯುವಂತೆ ಸಂದೇಶ ಸಿಕ್ಕಿದೆ ಎಂದು ಸಂಸದ ಎನ್.ಧರ್ಮಸಿಂಗ್ ನುಡಿದರು.<br /> <br /> ಭಾನುವಾರ ಹತ್ತಿರದ ಬೇಮಳಖೇಡಾ ಗ್ರಾಮದಲ್ಲಿ ಬೀದರ್ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಫಹೀಮ್ ಪಟೇಲ್ ಅವರ ಅಧಿಕಾರ ಸ್ವೀಕಾರ, ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br /> <br /> ಕಾಂಗ್ರೆಸ್ ಪಕ್ಷಕ್ಕೆ ಸೋಲು ಗೆಲುವಿನ ಚಿಂತೆ ಕಾಡುವುದಿಲ್ಲ, ನಿರಂತರವಾಗಿ ದೇಶದ ಭದ್ರತೆ, ಪ್ರಗತಿಗಾಗಿ ದುಡಿಯವ ಕಾರ್ಯ ನಮ್ಮದಾಗಿದೆ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಪಕ್ಷ ನಡೆಸುತ್ತಿರುತ್ತದೆ ಎಂದು ಹೇಳಿದರು.<br /> <br /> ಬಸವರಾಜ್ ಸಿಂಧೋಲ್, ತಾ. ಪಂ. ಮಾಜಿ ಅಧ್ಯಕ್ಷ ಮಸ್ತಾನ ನೂರೋದ್ದೀನ್, ಬಸಿರೋದ್ದೀನ್ ಹಾಲ ಹಿಪ್ಪರಗಾ, ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿದರು. ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಅಧ್ಯಕ್ಷತೆ ವಹಿಸಿದ್ದರು.<br /> ಚಂದ್ರಸೇನ್, ರಾಜಕುಮಾರ ಹಜಾರಿ, ಶಿರೋಮಣಿ, ಬಸವರಾಜ್ ಹೆಡೆ, ಶಮಿ, ನಿಸಾರ್, ವಿಜಯ ಲಕ್ಷ್ಮಿ, ಕಾಶಿನಾಥ ಬುದ್ಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರೆಮ್ಮ ಇತರರು ಇದ್ದರು.<br /> <br /> ವಿವಿಧ ಪಕ್ಷದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಪ್ರಭು ಸಾವಳಗಿ ಸ್ವಾಗತಿಸಿದರು. ಎಕ್ಬಾಲ್ ಶರೀಫ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>