<p>ವಿಜಾಪುರ: ‘ಉತ್ತರ ಕರ್ನಾಟಕದ ಜನರು ಜಾನಪದಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜ ಸಾಕಷ್ಟು ಬದಲಾವಣೆಯಾದರೂ ಜನಪದ ತಮ್ಮ ಮೌಲ್ಯ ಕಳೆದುಕೊಂಡಿಲ್ಲ’ ಎಂದು ಗುಲ್ಬರ್ಗದ ತಿಂಥಣಿಯ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.<br /> <br /> ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಸಂಜೆ ಇಲ್ಲಿಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜನಪದ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಬುರಣಾಪೂರ ಸಿದ್ಧಾರೂಢ ಆಶ್ರಮದ ಯೋಗೇಶ್ವರಿ, ಗೀಗೀ ಪದ, ಹಂತಿಪದ, ಚೌಡಕಿ, ಬೀಸುವ ಕಲ್ಲು, ಭಜನೆ ಮುಂತಾದವುಗಳಿಂದ ಜನ ಶತ ಶತಮಾನಗಳಿಂದ ಮನರಂಜನೆ ಪಡೆಯುತ್ತಿದ್ದಾರೆ. ಜನಪದ ನಮಗೆಲ್ಲರಿಗೂ ಅತ್ಯಅವಶ್ಯ ಎಂದರು.<br /> <br /> ಬಿಎಲ್ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ, ನಾವೆಲ್ಲರೂ ಜನಪದ ಪರಂಪರೆಯಲ್ಲಿಯೇ ಬೆಳೆದು ಬಂದವರು. ಜಾನಪದವು ಸುಂದರ ಸಮಾಜದ ರಚನೆಗೆ ಬುನಾದಿಯಾಗಿದೆ ಎಂದು ಹೇಳಿದರು. ಡಾ. ಸೋಮಶೇಖರ ವಾಲಿ, ಮಹಾದೇವ ರೆಬಿನಾಳ ಮಾತನಾಡಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಶಾಸಕ ರಾಜು ಅಲಗೂರ, ಜನಪದ ಕಲೆ ಅತ್ಯಂತ ಶ್ರೀಮಂತವಾದದ್ದು. ಅದು ಎಂದೂ ನಶಿಸುವುದಿಲ್ಲ. ರೈತಾಪಿ ಕುಟುಂಬಗಳ ಮನರಂಜನೆಯ ಜೀವ ನಾಡಿಯಾಗಿರುವ ಜನಪದ ಕ್ಷೇತ್ರದ ವಿಸ್ತಾರ ದೊಡ್ಡದು ಎಂದು ಹೇಳಿದರು.<br /> <br /> ಜಾವೀದ್ ಜಮಾದಾರ, ಡಾ.ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಪ್ರಭುಗೌಡ ಪಾಟೀಲ, ಶ್ರೀನಿವಾಸ ಗುರ್ಜಾಲ್, ಯಾಕೂಬ್ ಜತ್ತಿ, ಡಾ.ರಮೇಶ ಸೋನಕಾಂಬಳೆ ವೇದಿಕೆಯಲ್ಲಿದ್ದರು. ಮಹಾಲಕ್ಷ್ಮಿ ದೇವಸ್ಥಾನದ ಅಧ್ಯಕ್ಷ ಅಶೋಕ ಬಗಲಿ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ‘ಉತ್ತರ ಕರ್ನಾಟಕದ ಜನರು ಜಾನಪದಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜ ಸಾಕಷ್ಟು ಬದಲಾವಣೆಯಾದರೂ ಜನಪದ ತಮ್ಮ ಮೌಲ್ಯ ಕಳೆದುಕೊಂಡಿಲ್ಲ’ ಎಂದು ಗುಲ್ಬರ್ಗದ ತಿಂಥಣಿಯ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.<br /> <br /> ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಸಂಜೆ ಇಲ್ಲಿಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜನಪದ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಬುರಣಾಪೂರ ಸಿದ್ಧಾರೂಢ ಆಶ್ರಮದ ಯೋಗೇಶ್ವರಿ, ಗೀಗೀ ಪದ, ಹಂತಿಪದ, ಚೌಡಕಿ, ಬೀಸುವ ಕಲ್ಲು, ಭಜನೆ ಮುಂತಾದವುಗಳಿಂದ ಜನ ಶತ ಶತಮಾನಗಳಿಂದ ಮನರಂಜನೆ ಪಡೆಯುತ್ತಿದ್ದಾರೆ. ಜನಪದ ನಮಗೆಲ್ಲರಿಗೂ ಅತ್ಯಅವಶ್ಯ ಎಂದರು.<br /> <br /> ಬಿಎಲ್ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ, ನಾವೆಲ್ಲರೂ ಜನಪದ ಪರಂಪರೆಯಲ್ಲಿಯೇ ಬೆಳೆದು ಬಂದವರು. ಜಾನಪದವು ಸುಂದರ ಸಮಾಜದ ರಚನೆಗೆ ಬುನಾದಿಯಾಗಿದೆ ಎಂದು ಹೇಳಿದರು. ಡಾ. ಸೋಮಶೇಖರ ವಾಲಿ, ಮಹಾದೇವ ರೆಬಿನಾಳ ಮಾತನಾಡಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಶಾಸಕ ರಾಜು ಅಲಗೂರ, ಜನಪದ ಕಲೆ ಅತ್ಯಂತ ಶ್ರೀಮಂತವಾದದ್ದು. ಅದು ಎಂದೂ ನಶಿಸುವುದಿಲ್ಲ. ರೈತಾಪಿ ಕುಟುಂಬಗಳ ಮನರಂಜನೆಯ ಜೀವ ನಾಡಿಯಾಗಿರುವ ಜನಪದ ಕ್ಷೇತ್ರದ ವಿಸ್ತಾರ ದೊಡ್ಡದು ಎಂದು ಹೇಳಿದರು.<br /> <br /> ಜಾವೀದ್ ಜಮಾದಾರ, ಡಾ.ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಪ್ರಭುಗೌಡ ಪಾಟೀಲ, ಶ್ರೀನಿವಾಸ ಗುರ್ಜಾಲ್, ಯಾಕೂಬ್ ಜತ್ತಿ, ಡಾ.ರಮೇಶ ಸೋನಕಾಂಬಳೆ ವೇದಿಕೆಯಲ್ಲಿದ್ದರು. ಮಹಾಲಕ್ಷ್ಮಿ ದೇವಸ್ಥಾನದ ಅಧ್ಯಕ್ಷ ಅಶೋಕ ಬಗಲಿ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>