<p><strong>ಬೆಂಗಳೂರು: </strong>‘ಕವಿ, ಲೇಖಕನನ್ನು ಸೃಷ್ಟಿಸುವುದು ಜನಮಾನಸ. ಜನಮಾನಸದ ದನಿಯನ್ನು ಕವಿ ಕಾವ್ಯವಾಗಿಸುತ್ತಾನೆ. ಹೀಗಾಗಿ, ಕನ್ನಡ ಸಾಹಿತಿಗಳಿಗೆ ಸಂದಿರುವ ಜ್ಞಾನಪೀಠ ಪ್ರಶಸ್ತಿಯ ಗೌರವ ನಿಜವಾಗಿ ಕನ್ನಡ ಜನಮಾನಸಕ್ಕೆ ಸಂದ ಗೌರವ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.<br /> <br /> ಕನ್ನಡ ಸಾಹಿತ್ಯ ಪರಿಷತ್ತು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಮೂರು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಜನಮಾನಸ ಸಾಹಿತ್ಯಕವಾಗಿ ಶ್ರೀಮಂತವಾದುದು. ಜನವಾಣಿ ಬೇರು, ಕವಿವಾಣಿ ಹೂವು ಎಂದು ಬಿಎಂಶ್ರೀ ಬಹಳ ಹಿಂದೆಯೇ ಹೇಳಿದ್ದಾರೆ. ಕನ್ನಡಕ್ಕೆ ಸಿಕ್ಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಿಗರಿಗೆ ಸಂದಿರುವ ಗೌರವ’ ಎಂದು ಹೇಳಿದರು.<br /> <br /> ‘ಕನ್ನಡ ಭಾಷೆ ಸಾಕಷ್ಟು ಬೆಳೆದಿದೆ. ಆದರೆ, ಶಾಸ್ತ್ರಭಾಷೆಯಾಗಿ ಕನ್ನಡ ಬಳಕೆಯಾಗುತ್ತಿಲ್ಲ. ಶಾಸ್ತ್ರಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದೇವೆ. ಶಾಸ್ತ್ರಭಾಷೆಯಾಗುವ ಅರ್ಹತೆಯಿದ್ದರೂ ಕನ್ನಡವನ್ನು ಬಳಸುತ್ತಿಲ್ಲ. ಶಾಸ್ತ್ರಭಾಷೆಯಾಗಿ ಬಳಕೆಯಾಗದೇ ಹೋದರೆ ಕನ್ನಡ ಸಮಗ್ರವಾದ ಭಾಷೆಯಾಗಿ ಬೆಳೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದರು.<br /> <br /> ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಜ್ಞಾನಪೀಠ ಪ್ರಶಸ್ತಿಗೆ ತನ್ನದೇ ಆದ ಘನತೆಯಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರಬಹುದು. ಆದರೆ, ಈ ಪ್ರಶಸ್ತಿಯನ್ನು ಪಡೆಯುವ ಅರ್ಹತೆಯುಳ್ಳ ಹಲವು ಸಾಹಿತಿಗಳಿದ್ದಾರೆ. ಪ್ರಶಸ್ತಿ ಎಂಬುದು ಸಾಂಕೇತಿಕವಾದುದು’ ಎಂದು ಹೇಳಿದರು.<br /> <br /> ‘ಕುವೆಂಪು ಆದಿಯಾಗಿ ಇತ್ತೀಚೆಗೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ನಾಡು ಸಂಭ್ರಮಿಸಿತು. ಪ್ರಶಸ್ತಿಗಳಿವೆ ಎಚ್ಚರಿಕೆ ಎಂಬಂಥ ಕಾಲದಲ್ಲೂ ಜ್ಞಾನಪೀಠ ಪ್ರಶಸ್ತಿ ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಆರಂಭದಿಂದಲೂ ಈ ಪ್ರಶಸ್ತಿ ಆಯ್ಕೆಯ ಪ್ರಕ್ರಿಯೆ ಪ್ರಶಸ್ತಿಯ ಬಗ್ಗೆ ಗೌರವ ಮೂಡಿಸುವಂತಿದೆ’ ಎಂದರು.<br /> <br /> ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ಸ್ಥಾನದ ಕಾರಣಕ್ಕೆ ಈ ಗೌರವಕ್ಕೆ ಭಾಜನರಾದವರಲ್ಲ. ತಮ್ಮ ಸಾಹಿತ್ಯ ಕೃಷಿಯಿಂದಾಗಿ ಪ್ರಶಸ್ತಿಗೆ ಆಯ್ಕೆಯಾದವರು. ಕನ್ನಡದ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರು ತಮಗೆ ತಾವೇ ಚಳವಳಿಗಳಿದ್ದಂತೆ. ಪಕ್ಷ ರಾಜಕೀಯವನ್ನು ಮೀರಿದ ರಾಜಕೀಯ ಪ್ರಜ್ಞೆ ಈ ಸಾಹಿತಿಗಳಲ್ಲಿದೆ’ ಎಂದು ತಿಳಿಸಿದರು.<br /> <br /> ‘ಜನರೇ ಒಬ್ಬ ಸಾಹಿತಿಯನ್ನು ವಿಮರ್ಶೆ ಮಾಡುವುದು ಜನಮೂಲ ವಿಮರ್ಶೆ. ಸಾಹಿತಿಯ ಜನ್ಮಮೂಲವನ್ನು ಆಧಾರವಾಗಿಟ್ಟುಕೊಂಡು ವಿಮರ್ಶೆ ಮಾಡುವುದು ಜನ್ಮಮೂಲ ವಿಮರ್ಶೆ. ಜನ್ಮಮೂಲ ವಿಮರ್ಶೆಯ ಮೊದಲ ಬಲಿಪಶು ಕುವೆಂಪು. ಕುವೆಂಪು ಮಹಾಕವಿಯೇ ಅಲ್ಲ ಎಂದು ಸಾಧಿಸುವ ಹುನ್ನಾರಗಳೂ ಬಹಳ ನಡೆದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ‘ಮಹಾಕಾವ್ಯಗಳಿಗೆ ಕುಟುಂಬ ಯೋಜನೆ ತರಬೇಕೇನೋ ಎನ್ನುವಷ್ಟು ಮಹಾಕಾವ್ಯಗಳು ಇಂದು ಬರುತ್ತಿವೆ. ಆದರೆ, ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿದ ಸಂದರ್ಭದಲ್ಲಿ ಅದೊಂದು ಪ್ರಯೋಗವಾಗಿತ್ತು. ಹೊಟ್ಟೆಯ ಕಿಚ್ಚೇ ವಿಮರ್ಶೆ ಎಂದಾದಾಗ ಪ್ರಾಮಾಣಿಕ ವಿಮರ್ಶೆಯೂ ಹಲವು ಬಾರಿ ಹಿನ್ನೆಲೆಗೆ ಬಂದು ಬಿಡಬಹುದು’ ಎಂದು ಹೇಳಿದರು.<br /> <br /> ಅನಾರೋಗ್ಯದ ಕಾರಣದಿಂದಾಗಿ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಅವರ ಪರವಾಗಿ ಅವರ ಪತ್ನಿ ಎಸ್ತರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಕವಿ, ಲೇಖಕನನ್ನು ಸೃಷ್ಟಿಸುವುದು ಜನಮಾನಸ. ಜನಮಾನಸದ ದನಿಯನ್ನು ಕವಿ ಕಾವ್ಯವಾಗಿಸುತ್ತಾನೆ. ಹೀಗಾಗಿ, ಕನ್ನಡ ಸಾಹಿತಿಗಳಿಗೆ ಸಂದಿರುವ ಜ್ಞಾನಪೀಠ ಪ್ರಶಸ್ತಿಯ ಗೌರವ ನಿಜವಾಗಿ ಕನ್ನಡ ಜನಮಾನಸಕ್ಕೆ ಸಂದ ಗೌರವ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.<br /> <br /> ಕನ್ನಡ ಸಾಹಿತ್ಯ ಪರಿಷತ್ತು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಮೂರು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಜನಮಾನಸ ಸಾಹಿತ್ಯಕವಾಗಿ ಶ್ರೀಮಂತವಾದುದು. ಜನವಾಣಿ ಬೇರು, ಕವಿವಾಣಿ ಹೂವು ಎಂದು ಬಿಎಂಶ್ರೀ ಬಹಳ ಹಿಂದೆಯೇ ಹೇಳಿದ್ದಾರೆ. ಕನ್ನಡಕ್ಕೆ ಸಿಕ್ಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಿಗರಿಗೆ ಸಂದಿರುವ ಗೌರವ’ ಎಂದು ಹೇಳಿದರು.<br /> <br /> ‘ಕನ್ನಡ ಭಾಷೆ ಸಾಕಷ್ಟು ಬೆಳೆದಿದೆ. ಆದರೆ, ಶಾಸ್ತ್ರಭಾಷೆಯಾಗಿ ಕನ್ನಡ ಬಳಕೆಯಾಗುತ್ತಿಲ್ಲ. ಶಾಸ್ತ್ರಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದೇವೆ. ಶಾಸ್ತ್ರಭಾಷೆಯಾಗುವ ಅರ್ಹತೆಯಿದ್ದರೂ ಕನ್ನಡವನ್ನು ಬಳಸುತ್ತಿಲ್ಲ. ಶಾಸ್ತ್ರಭಾಷೆಯಾಗಿ ಬಳಕೆಯಾಗದೇ ಹೋದರೆ ಕನ್ನಡ ಸಮಗ್ರವಾದ ಭಾಷೆಯಾಗಿ ಬೆಳೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದರು.<br /> <br /> ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಜ್ಞಾನಪೀಠ ಪ್ರಶಸ್ತಿಗೆ ತನ್ನದೇ ಆದ ಘನತೆಯಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರಬಹುದು. ಆದರೆ, ಈ ಪ್ರಶಸ್ತಿಯನ್ನು ಪಡೆಯುವ ಅರ್ಹತೆಯುಳ್ಳ ಹಲವು ಸಾಹಿತಿಗಳಿದ್ದಾರೆ. ಪ್ರಶಸ್ತಿ ಎಂಬುದು ಸಾಂಕೇತಿಕವಾದುದು’ ಎಂದು ಹೇಳಿದರು.<br /> <br /> ‘ಕುವೆಂಪು ಆದಿಯಾಗಿ ಇತ್ತೀಚೆಗೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ನಾಡು ಸಂಭ್ರಮಿಸಿತು. ಪ್ರಶಸ್ತಿಗಳಿವೆ ಎಚ್ಚರಿಕೆ ಎಂಬಂಥ ಕಾಲದಲ್ಲೂ ಜ್ಞಾನಪೀಠ ಪ್ರಶಸ್ತಿ ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಆರಂಭದಿಂದಲೂ ಈ ಪ್ರಶಸ್ತಿ ಆಯ್ಕೆಯ ಪ್ರಕ್ರಿಯೆ ಪ್ರಶಸ್ತಿಯ ಬಗ್ಗೆ ಗೌರವ ಮೂಡಿಸುವಂತಿದೆ’ ಎಂದರು.<br /> <br /> ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ಸ್ಥಾನದ ಕಾರಣಕ್ಕೆ ಈ ಗೌರವಕ್ಕೆ ಭಾಜನರಾದವರಲ್ಲ. ತಮ್ಮ ಸಾಹಿತ್ಯ ಕೃಷಿಯಿಂದಾಗಿ ಪ್ರಶಸ್ತಿಗೆ ಆಯ್ಕೆಯಾದವರು. ಕನ್ನಡದ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರು ತಮಗೆ ತಾವೇ ಚಳವಳಿಗಳಿದ್ದಂತೆ. ಪಕ್ಷ ರಾಜಕೀಯವನ್ನು ಮೀರಿದ ರಾಜಕೀಯ ಪ್ರಜ್ಞೆ ಈ ಸಾಹಿತಿಗಳಲ್ಲಿದೆ’ ಎಂದು ತಿಳಿಸಿದರು.<br /> <br /> ‘ಜನರೇ ಒಬ್ಬ ಸಾಹಿತಿಯನ್ನು ವಿಮರ್ಶೆ ಮಾಡುವುದು ಜನಮೂಲ ವಿಮರ್ಶೆ. ಸಾಹಿತಿಯ ಜನ್ಮಮೂಲವನ್ನು ಆಧಾರವಾಗಿಟ್ಟುಕೊಂಡು ವಿಮರ್ಶೆ ಮಾಡುವುದು ಜನ್ಮಮೂಲ ವಿಮರ್ಶೆ. ಜನ್ಮಮೂಲ ವಿಮರ್ಶೆಯ ಮೊದಲ ಬಲಿಪಶು ಕುವೆಂಪು. ಕುವೆಂಪು ಮಹಾಕವಿಯೇ ಅಲ್ಲ ಎಂದು ಸಾಧಿಸುವ ಹುನ್ನಾರಗಳೂ ಬಹಳ ನಡೆದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ‘ಮಹಾಕಾವ್ಯಗಳಿಗೆ ಕುಟುಂಬ ಯೋಜನೆ ತರಬೇಕೇನೋ ಎನ್ನುವಷ್ಟು ಮಹಾಕಾವ್ಯಗಳು ಇಂದು ಬರುತ್ತಿವೆ. ಆದರೆ, ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿದ ಸಂದರ್ಭದಲ್ಲಿ ಅದೊಂದು ಪ್ರಯೋಗವಾಗಿತ್ತು. ಹೊಟ್ಟೆಯ ಕಿಚ್ಚೇ ವಿಮರ್ಶೆ ಎಂದಾದಾಗ ಪ್ರಾಮಾಣಿಕ ವಿಮರ್ಶೆಯೂ ಹಲವು ಬಾರಿ ಹಿನ್ನೆಲೆಗೆ ಬಂದು ಬಿಡಬಹುದು’ ಎಂದು ಹೇಳಿದರು.<br /> <br /> ಅನಾರೋಗ್ಯದ ಕಾರಣದಿಂದಾಗಿ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಅವರ ಪರವಾಗಿ ಅವರ ಪತ್ನಿ ಎಸ್ತರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>