<p><strong>ಗಾಜಿಯಾಬಾದ್ (ಐಎಎನ್ಎಸ್): </strong>ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕಮಾತ್ರ ‘ರಾಷ್ಟ್ರೀಯವಾದಿ’ ಪಕ್ಷವಾಗಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ‘ರಾಷ್ಟ್ರವಿರೋಧಿ’ ಪಕ್ಷವಾಗಿದೆ ಎಂದು ಗಾಜಿಯಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸೇನೆಯ ಮಾಜಿ ಮುಖಸ್ಥ ವಿ.ಕೆ.ಸಿಂಗ್ ಗುರುವಾರ ಟೀಕಿಸಿದ್ದಾರೆ.</p>.<p>‘ಎಎಪಿ ರಾಷ್ಟ್ರ ವಿರೋಧಿಯಾಗಿದ್ದು, ಅವರು ಗಡಿನಿಯಂತ್ರಣ ರೇಖೆಯನ್ನು (ಎಲ್ಒಸಿ) ಅಂತರರಾಷ್ಟ್ರೀಯ ಸೀಮೆಯನ್ನಾಗಿಸಬೇಕು ಎಂದು ವಾದಿಸುತ್ತಾರೆ.ಕಾಶ್ಮೀರ್ದಲ್ಲಿ ಜನಮತಗಣನೆ ಪರವಾಗಿ ನಿಲ್ಲುತ್ತಾರೆ’ ಎಂದು ಜರಿದ ಸಿಂಗ್, ‘ಬಿಜೆಪಿ ಏಕಮಾತ್ರ ರಾಷ್ಟ್ರೀಯವಾದಿ ಪಕ್ಷ’ ಎಂದು ಬಣ್ಣಿಸಿದರು.</p>.<p>ಎಎಪಿ ಅಭ್ಯರ್ಥಿ ಶಾಜಿಯಾ ಇಲ್ಮಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ ಸಿಂಗ್, ‘ಓರ್ವ ದೇಶಭಕ್ತ ಹಾಗೂ ಶಿಸ್ತಿನ ಸಿಪಾಯಿ’ಯಾಗಿ ಗಾಜಿಯಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವೆ. ನನಗೆ ಯಾರು ಪ್ರತಿಸ್ಪರ್ಧಿಗಳಲ್ಲ. ಬಡತನ, ಸಾಮಾಜಿಕ ಅಸಮಾನತೆ ಹಾಗೂ ಈ ನಗರದೊಂದಿಗೆ ಅನುಸರಿಸಿದ ಮಲತಾಯಿ ಧೋರಣೆಯ ವಿರುದ್ಧ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ನುಡಿದರು.</p>.<p>ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದ ಸಿಂಗ್, ‘ಸೇನೆಯ ಅಗತ್ಯಗಳಿಗೆ ಕಾಂಗ್ರೆಸ್ ಸರ್ಕಾರ ‘ಹೆಚ್ಚಿನ ಪ್ರಾಶಸ್ತ್ಯ’ ನೀಡಿರಲಿಲ್ಲ. ರಕ್ಷಣೆ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಅವರಿಗೆ ಸಶಸ್ತ್ರಪಡೆಗಳ ಬಗ್ಗೆ ಅಆಇಈಯೂ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಜಿಯಾಬಾದ್ (ಐಎಎನ್ಎಸ್): </strong>ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕಮಾತ್ರ ‘ರಾಷ್ಟ್ರೀಯವಾದಿ’ ಪಕ್ಷವಾಗಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ‘ರಾಷ್ಟ್ರವಿರೋಧಿ’ ಪಕ್ಷವಾಗಿದೆ ಎಂದು ಗಾಜಿಯಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸೇನೆಯ ಮಾಜಿ ಮುಖಸ್ಥ ವಿ.ಕೆ.ಸಿಂಗ್ ಗುರುವಾರ ಟೀಕಿಸಿದ್ದಾರೆ.</p>.<p>‘ಎಎಪಿ ರಾಷ್ಟ್ರ ವಿರೋಧಿಯಾಗಿದ್ದು, ಅವರು ಗಡಿನಿಯಂತ್ರಣ ರೇಖೆಯನ್ನು (ಎಲ್ಒಸಿ) ಅಂತರರಾಷ್ಟ್ರೀಯ ಸೀಮೆಯನ್ನಾಗಿಸಬೇಕು ಎಂದು ವಾದಿಸುತ್ತಾರೆ.ಕಾಶ್ಮೀರ್ದಲ್ಲಿ ಜನಮತಗಣನೆ ಪರವಾಗಿ ನಿಲ್ಲುತ್ತಾರೆ’ ಎಂದು ಜರಿದ ಸಿಂಗ್, ‘ಬಿಜೆಪಿ ಏಕಮಾತ್ರ ರಾಷ್ಟ್ರೀಯವಾದಿ ಪಕ್ಷ’ ಎಂದು ಬಣ್ಣಿಸಿದರು.</p>.<p>ಎಎಪಿ ಅಭ್ಯರ್ಥಿ ಶಾಜಿಯಾ ಇಲ್ಮಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದ ಸಿಂಗ್, ‘ಓರ್ವ ದೇಶಭಕ್ತ ಹಾಗೂ ಶಿಸ್ತಿನ ಸಿಪಾಯಿ’ಯಾಗಿ ಗಾಜಿಯಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವೆ. ನನಗೆ ಯಾರು ಪ್ರತಿಸ್ಪರ್ಧಿಗಳಲ್ಲ. ಬಡತನ, ಸಾಮಾಜಿಕ ಅಸಮಾನತೆ ಹಾಗೂ ಈ ನಗರದೊಂದಿಗೆ ಅನುಸರಿಸಿದ ಮಲತಾಯಿ ಧೋರಣೆಯ ವಿರುದ್ಧ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ನುಡಿದರು.</p>.<p>ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದ ಸಿಂಗ್, ‘ಸೇನೆಯ ಅಗತ್ಯಗಳಿಗೆ ಕಾಂಗ್ರೆಸ್ ಸರ್ಕಾರ ‘ಹೆಚ್ಚಿನ ಪ್ರಾಶಸ್ತ್ಯ’ ನೀಡಿರಲಿಲ್ಲ. ರಕ್ಷಣೆ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಅವರಿಗೆ ಸಶಸ್ತ್ರಪಡೆಗಳ ಬಗ್ಗೆ ಅಆಇಈಯೂ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>