<p><strong>ಚಿತ್ರದುರ್ಗ:</strong> ಪುರಾಣ ಕಾಲದಿಂದಲೂ ಬಹುಪಾಲು ಜನ ಸಂಸಾರಸ್ಥರಾಗಿಯೇ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಅಂಥವರ ಸಾಲಿನಲ್ಲಿ ಕೆಂಚಾವಧೂತರೂ ಪ್ರಮುಖರು’ ಎಂದು ಕುಂಚಿಟಿಗ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> <br /> ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿ ಹಠ ರಾಜಯೋಗಿ ಕೆಂಚಾವಧೂತರ ಕಾರ್ತಿಕ ದೀಪೋತ್ಸವ, ಧ್ವನಿ ಸುರುಳಿ ಬಿಡುಗಡೆ, ಸಮುದಾಯ ಭವನ ಹಾಗೂ ಮಹಾದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಮೂಢ ನಂಬಿಕೆಗಳು ಬದುಕನ್ನು ಕೆಡಿಸುತ್ತವೆ. ನಮಗೆ ನಂಬಿಕೆಗಳು ಬೇಕು, ಅವು ಮನುಷ್ಯನಿಗೆ ದಾರಿ ದೀಪವಾಗಬೇಕು’ ಎಂದರು.<br /> <br /> ಜಾನಪದ ತಜ್ಞ ಡಾ.ಮೀರ ಸಾಬೀಹಳ್ಳಿ ಶಿವಣ್ಣ ಮಾತನಾಡಿ, ವಿಜ್ಞಾನಕ್ಕೆ ಪವಾಡ ರಹಸ್ಯ ಅರ್ಥವಾಗುವುದಿಲ್ಲ. ಪವಾಡದ ಹಿಂದೆ ನಿಗೂಢ ಅರ್ಥಗಳಿರುತ್ತವೆ. ಅದು ಜಾದುವಿನಂತೆ ಕಂಡರೂ, ಅರ್ಥೈಸಿಕೊಳ್ಳುವ ರೀತಿ ಬೇರೆಯಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.<br /> ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿದರು.<br /> <br /> ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಕಾಂತರಾಜ್, ಕವಿತಾ, ತಿಪ್ಪೇಸ್ವಾಮಿ, ಕೆ.ಟಿ. ಹಳ್ಳಿ ನಾಗರಾಜ್, ಸ್ನೇಹಾ ನನ್ನಿವಾಳ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಪುರಾಣ ಕಾಲದಿಂದಲೂ ಬಹುಪಾಲು ಜನ ಸಂಸಾರಸ್ಥರಾಗಿಯೇ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಅಂಥವರ ಸಾಲಿನಲ್ಲಿ ಕೆಂಚಾವಧೂತರೂ ಪ್ರಮುಖರು’ ಎಂದು ಕುಂಚಿಟಿಗ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> <br /> ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದಲ್ಲಿ ಹಠ ರಾಜಯೋಗಿ ಕೆಂಚಾವಧೂತರ ಕಾರ್ತಿಕ ದೀಪೋತ್ಸವ, ಧ್ವನಿ ಸುರುಳಿ ಬಿಡುಗಡೆ, ಸಮುದಾಯ ಭವನ ಹಾಗೂ ಮಹಾದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಮೂಢ ನಂಬಿಕೆಗಳು ಬದುಕನ್ನು ಕೆಡಿಸುತ್ತವೆ. ನಮಗೆ ನಂಬಿಕೆಗಳು ಬೇಕು, ಅವು ಮನುಷ್ಯನಿಗೆ ದಾರಿ ದೀಪವಾಗಬೇಕು’ ಎಂದರು.<br /> <br /> ಜಾನಪದ ತಜ್ಞ ಡಾ.ಮೀರ ಸಾಬೀಹಳ್ಳಿ ಶಿವಣ್ಣ ಮಾತನಾಡಿ, ವಿಜ್ಞಾನಕ್ಕೆ ಪವಾಡ ರಹಸ್ಯ ಅರ್ಥವಾಗುವುದಿಲ್ಲ. ಪವಾಡದ ಹಿಂದೆ ನಿಗೂಢ ಅರ್ಥಗಳಿರುತ್ತವೆ. ಅದು ಜಾದುವಿನಂತೆ ಕಂಡರೂ, ಅರ್ಥೈಸಿಕೊಳ್ಳುವ ರೀತಿ ಬೇರೆಯಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.<br /> ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿದರು.<br /> <br /> ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಕಾಂತರಾಜ್, ಕವಿತಾ, ತಿಪ್ಪೇಸ್ವಾಮಿ, ಕೆ.ಟಿ. ಹಳ್ಳಿ ನಾಗರಾಜ್, ಸ್ನೇಹಾ ನನ್ನಿವಾಳ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>