<p><strong>ನವದೆಹಲಿ (ಪಿಟಿಐ):</strong> ‘ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ‘ಝೆಡ್’ ಶ್ರೇಣಿಯ ಭದ್ರತೆ ಪಡೆಯಲು ಸಮ್ಮತಿ ಸೂಚಿಸಿದ್ದಾರೆ’ ಎಂಬ ಮಾಧ್ಯಮಗಳ ವರದಿಯಿಂದ ಕೇಜ್ರಿವಾಲ್ ತೀವ್ರ ಸಿಡಿಮಿಡಿಗೊಂಡಿದ್ದಾರೆ.<br /> <br /> ಝೆಡ್ ಶ್ರೇಣಿಯ ಭದ್ರತೆ ಬಗ್ಗೆ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿರುವ ಅವರು, ‘ನನಗೆ ಯಾವ ರೀತಿಯ ಭದ್ರತೆಯೂ ಬೇಕಾಗಿಲ್ಲ‘ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.<br /> <br /> ‘ಈ ಮೊದಲೇ ಅನೇಕ ಬಾರಿ ನಾನು ಭದ್ರತೆ ತಿರಸ್ಕರಿಸಿದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಆದರೂ, ಮಾಧ್ಯಮಗಳು ಪದೇ ಪದೇ ನಾನು ಝೆಡ್ ಶ್ರೇಣಿಯ ಭದ್ರತೆ ಪಡೆದಿರುವುದಾಗಿ ವರದಿ ಮಾಡುತ್ತಿವೆ. ಇದು ಸಂಪೂರ್ಣ ಸುಳ್ಳು. ಅವರ ಬಳಿ ಈ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ತಂದು ತೋರಿಸಲಿ’ ಎಂದು ಕೇಜ್ರಿವಾಲ್ ಸವಾಲು ಹಾಕಿದರು.<br /> <br /> ‘ನನಗೆ ಯಾವುದೇ ರೀತಿಯ ಭದ್ರತೆಯ ಅಗತ್ಯವಿಲ್ಲ. ದೇವರೇ ನನ್ನ ಬಹು ದೊಡ್ಡ ರಕ್ಷಕ’ ಎಂದು ಅವರು ಟ್ವೀಟ್ ಮಾಡಿದ್ದಾರೆ.<br /> <br /> ‘ನನಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ಮಾಧ್ಯಮದ ಒಂದು ಗುಂಪು ಸದಾ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಕೇಜ್ರಿವಾಲ್ ಆರೋಪಿಸಿದರು.<br /> <br /> <strong>ಪ್ರತಿಭಟನೆ: </strong>ಭಾನುವಾರ ಕೇಜ್ರಿವಾಲ್ ಅವರ ತಿಲಕ್ ಲೇನ್ ನಿವಾಸದ ಎದುರು ಪಕ್ಷದ ಅತೃಪ್ತ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿತು.<br /> <br /> ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತಮ್ಮ ಅಸಮಾಧಾನ ತಿಳಿಸಲು ತಾವು ಇಲ್ಲಿಗೆ ಬಂದಿದ್ದು, ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕಾರ್ಯಕರ್ತರು ತಿಳಿಸಿದರು.<br /> <br /> <strong>ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?</strong><br /> <span style="font-size: 26px;">ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?</span></p>.<p>–ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ದಾಖಲೆಗಳು ಈ ಬಗ್ಗೆ ಮಾಹಿತಿ ನೀಡಿವೆ.<br /> ರಾಮ್ಲೀಲಾ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ₨ 6.33 ಲಕ್ಷ ಮತ್ತು ಅದರ ಪ್ರಚಾರಕ್ಕೆ ₨ 6.7 ಲಕ್ಷ ಸೇರಿದಂತೆ ದೆಹಲಿ ಸರ್ಕಾರ ಒಟ್ಟು ಈ ಸಮಾರಂಭಕ್ಕಾಗಿ ₨ 13.41 ಲಕ್ಷ ಖರ್ಚು ಮಾಡಿದೆ.<br /> <br /> ಸಾರಿಗೆ, ನೀರು ಪೂರೈಕೆ ಸೇರಿದಂತೆ ಇನ್ನಿತರ ಖರ್ಚು, ವೆಚ್ಚಗಳನ್ನು ಇದು ಒಳಗೊಂಡಿಲ್ಲ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ‘ಝೆಡ್’ ಶ್ರೇಣಿಯ ಭದ್ರತೆ ಪಡೆಯಲು ಸಮ್ಮತಿ ಸೂಚಿಸಿದ್ದಾರೆ’ ಎಂಬ ಮಾಧ್ಯಮಗಳ ವರದಿಯಿಂದ ಕೇಜ್ರಿವಾಲ್ ತೀವ್ರ ಸಿಡಿಮಿಡಿಗೊಂಡಿದ್ದಾರೆ.<br /> <br /> ಝೆಡ್ ಶ್ರೇಣಿಯ ಭದ್ರತೆ ಬಗ್ಗೆ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿರುವ ಅವರು, ‘ನನಗೆ ಯಾವ ರೀತಿಯ ಭದ್ರತೆಯೂ ಬೇಕಾಗಿಲ್ಲ‘ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.<br /> <br /> ‘ಈ ಮೊದಲೇ ಅನೇಕ ಬಾರಿ ನಾನು ಭದ್ರತೆ ತಿರಸ್ಕರಿಸಿದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಆದರೂ, ಮಾಧ್ಯಮಗಳು ಪದೇ ಪದೇ ನಾನು ಝೆಡ್ ಶ್ರೇಣಿಯ ಭದ್ರತೆ ಪಡೆದಿರುವುದಾಗಿ ವರದಿ ಮಾಡುತ್ತಿವೆ. ಇದು ಸಂಪೂರ್ಣ ಸುಳ್ಳು. ಅವರ ಬಳಿ ಈ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ತಂದು ತೋರಿಸಲಿ’ ಎಂದು ಕೇಜ್ರಿವಾಲ್ ಸವಾಲು ಹಾಕಿದರು.<br /> <br /> ‘ನನಗೆ ಯಾವುದೇ ರೀತಿಯ ಭದ್ರತೆಯ ಅಗತ್ಯವಿಲ್ಲ. ದೇವರೇ ನನ್ನ ಬಹು ದೊಡ್ಡ ರಕ್ಷಕ’ ಎಂದು ಅವರು ಟ್ವೀಟ್ ಮಾಡಿದ್ದಾರೆ.<br /> <br /> ‘ನನಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ಮಾಧ್ಯಮದ ಒಂದು ಗುಂಪು ಸದಾ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಕೇಜ್ರಿವಾಲ್ ಆರೋಪಿಸಿದರು.<br /> <br /> <strong>ಪ್ರತಿಭಟನೆ: </strong>ಭಾನುವಾರ ಕೇಜ್ರಿವಾಲ್ ಅವರ ತಿಲಕ್ ಲೇನ್ ನಿವಾಸದ ಎದುರು ಪಕ್ಷದ ಅತೃಪ್ತ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿತು.<br /> <br /> ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತಮ್ಮ ಅಸಮಾಧಾನ ತಿಳಿಸಲು ತಾವು ಇಲ್ಲಿಗೆ ಬಂದಿದ್ದು, ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕಾರ್ಯಕರ್ತರು ತಿಳಿಸಿದರು.<br /> <br /> <strong>ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?</strong><br /> <span style="font-size: 26px;">ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿದ ವೆಚ್ಚವೆಷ್ಟು?</span></p>.<p>–ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ದಾಖಲೆಗಳು ಈ ಬಗ್ಗೆ ಮಾಹಿತಿ ನೀಡಿವೆ.<br /> ರಾಮ್ಲೀಲಾ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ₨ 6.33 ಲಕ್ಷ ಮತ್ತು ಅದರ ಪ್ರಚಾರಕ್ಕೆ ₨ 6.7 ಲಕ್ಷ ಸೇರಿದಂತೆ ದೆಹಲಿ ಸರ್ಕಾರ ಒಟ್ಟು ಈ ಸಮಾರಂಭಕ್ಕಾಗಿ ₨ 13.41 ಲಕ್ಷ ಖರ್ಚು ಮಾಡಿದೆ.<br /> <br /> ಸಾರಿಗೆ, ನೀರು ಪೂರೈಕೆ ಸೇರಿದಂತೆ ಇನ್ನಿತರ ಖರ್ಚು, ವೆಚ್ಚಗಳನ್ನು ಇದು ಒಳಗೊಂಡಿಲ್ಲ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>