<p><strong>ಕನಕಗಿರಿ: </strong>ಜಿಲ್ಲಾ ಪಂಚಾಯಿತಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಒಳ್ಳೆಯದು, ಆದರೆ ಉದ್ಯೋಗ ಖಾತರಿ ಯೋಜನೆಯ ₨ 4500 ಮೊತ್ತವನ್ನು ವಿಳಂಬವಾಗಿ ನೀಡಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಇಲ್ಲಿನ ಫಲಾನುಭವಿಗಳು ತಿಳಿಸಿದ ಘಟನೆ ನಡೆಯಿತು.<br /> <br /> ಮಂಗಳವಾರ ವೈಯಕ್ತಿಕ ಶೌಚಾಲಯಗಳ ಭೌತಿಕ ಮಟ್ಟ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿಯ ಗ್ರಾಮ ಸಂಪನ್ಮೂಲ ಸಂಯೋಜಕರಿಗೆ ಸಾಕಷ್ಟು ಜನ ದೂರಿದರು.<br /> <br /> ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಪರಿಶಿಷ್ಟ ಜಾತಿ, ಜನಾಂಗದವರಿಗೆ ₨ 15, 000 ಸಾವಿರ, ಇತರೆ ಜನಾಂಗದವರಿಗೆ ₨ 9200 ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಯವರು ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ ₨ 4700 ಚೆಕ್ ನೀಡಿದ್ದಾರೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ₨ 4500 ಹಣ ಖಾತೆಗೆ ಜಮಾವಣೆಗೊಂಡಿಲ್ಲ ಎಂದು ಫಲಾನುಭವಿ ಹುಸೇನಸಾಬ ಲೈನದಾರ ಹೇಳಿದರೆ, ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನ ₨ 5000 ಸಾವಿರ ಇನ್ನೂ ಮಂಜೂರಿಯಾಗಿಲ್ಲ ಎಂದು ಫಲಾನುಭವಿ ರಂಗಪ್ಪ ದೂರಿದರು.<br /> <br /> ಚುನಾವಣೆಯ ನೀತಿ ಸಂಹಿತೆ ಸಹ ಈಗ ಖಾತರಿ ಹಣ ನೀಡಲು ಬ್ರೇಕ್ ಹಾಕಿದೆ, ಕಳೆದ ಎರಡು ತಿಂಗಳ ಹಿಂದೆ ಕಟ್ಟಿಸಿಕೊಂಡ ಶೌಚಾಲಯಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಫಲಾನುಭವಿ ಅವರು ದೂರಿದರು.<br /> <br /> ಇಲ್ಲಿನ ಗ್ರಾಮ ಪಂಚಾಯಿತಿ ಒಟ್ಟು 900 ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು 300ಕ್ಕೂ ಹೆಚ್ಚು ಗುರಿ ಸಾಧಿಸಿದೆ ಎಂದು ಸಂಯೋಜಕ ಕರಿಯಣ್ಣ ಕಾಟಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ: </strong>ಜಿಲ್ಲಾ ಪಂಚಾಯಿತಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಒಳ್ಳೆಯದು, ಆದರೆ ಉದ್ಯೋಗ ಖಾತರಿ ಯೋಜನೆಯ ₨ 4500 ಮೊತ್ತವನ್ನು ವಿಳಂಬವಾಗಿ ನೀಡಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಇಲ್ಲಿನ ಫಲಾನುಭವಿಗಳು ತಿಳಿಸಿದ ಘಟನೆ ನಡೆಯಿತು.<br /> <br /> ಮಂಗಳವಾರ ವೈಯಕ್ತಿಕ ಶೌಚಾಲಯಗಳ ಭೌತಿಕ ಮಟ್ಟ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿಯ ಗ್ರಾಮ ಸಂಪನ್ಮೂಲ ಸಂಯೋಜಕರಿಗೆ ಸಾಕಷ್ಟು ಜನ ದೂರಿದರು.<br /> <br /> ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಪರಿಶಿಷ್ಟ ಜಾತಿ, ಜನಾಂಗದವರಿಗೆ ₨ 15, 000 ಸಾವಿರ, ಇತರೆ ಜನಾಂಗದವರಿಗೆ ₨ 9200 ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಯವರು ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ ₨ 4700 ಚೆಕ್ ನೀಡಿದ್ದಾರೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ₨ 4500 ಹಣ ಖಾತೆಗೆ ಜಮಾವಣೆಗೊಂಡಿಲ್ಲ ಎಂದು ಫಲಾನುಭವಿ ಹುಸೇನಸಾಬ ಲೈನದಾರ ಹೇಳಿದರೆ, ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನ ₨ 5000 ಸಾವಿರ ಇನ್ನೂ ಮಂಜೂರಿಯಾಗಿಲ್ಲ ಎಂದು ಫಲಾನುಭವಿ ರಂಗಪ್ಪ ದೂರಿದರು.<br /> <br /> ಚುನಾವಣೆಯ ನೀತಿ ಸಂಹಿತೆ ಸಹ ಈಗ ಖಾತರಿ ಹಣ ನೀಡಲು ಬ್ರೇಕ್ ಹಾಕಿದೆ, ಕಳೆದ ಎರಡು ತಿಂಗಳ ಹಿಂದೆ ಕಟ್ಟಿಸಿಕೊಂಡ ಶೌಚಾಲಯಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಫಲಾನುಭವಿ ಅವರು ದೂರಿದರು.<br /> <br /> ಇಲ್ಲಿನ ಗ್ರಾಮ ಪಂಚಾಯಿತಿ ಒಟ್ಟು 900 ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು 300ಕ್ಕೂ ಹೆಚ್ಚು ಗುರಿ ಸಾಧಿಸಿದೆ ಎಂದು ಸಂಯೋಜಕ ಕರಿಯಣ್ಣ ಕಾಟಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>