<p>ಕನಕಪುರ: ಕಲೆ ಎಂಬುದು ಕಠಿಣ ಪರಿಶ್ರಮದಿಂದ ಒಲಿಸಿಕೊಳ್ಳಬೇಕಾಗದ ವಿದ್ಯೆ. ಅದಕ್ಕೆ ನಿರಂತರ ಅಭ್ಯಾಸ ಅವಶ್ಯ ಎಂದು ಸಂಗೀತ ಶಿಕ್ಷಕಿ ಶ್ರೀದೇವಿ ಹೇಳಿದರು.<br /> <br /> ರೋಟರಿ ಭವನದಲ್ಲಿ ಶಾರದಾ ನೃತ್ಯ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, <br /> ‘ಕಲೆಯೆಂಬುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಗುರುತಿಸಿ ಹೊರಹೊಮ್ಮಿಸಲು ಕಠಿಣ ಶ್ರಮ ಹಾಕಿದರೆ ನಿಜವಾಗಿಯೂ ಒಬ್ಬ ಪ್ರತಿಭಾವಂತ ಕಲೆಗಾರನಾಗಬಹುದು ಎಂದರು. <br /> <br /> ಯೋಜನ ಸಂಯೋಜಕ ಸಿದ್ದೇಗೌಡ ಮಾತನಾಡಿ,‘ನಿರಂತರ ಅಭ್ಯಾಸದಿಂದ ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ. ಯಾವುದೇ ರಂಗದಲ್ಲಿ ಪರಿಶ್ರಮವಿಲ್ಲದೆ ಹೆಸರು ಗಳಿಸಲು ಸಾಧ್ಯವಿಲ್ಲ’ ಎಂದರು.<br /> <br /> ಸಂಗೀತ ಮನುಷ್ಯನಿಗೆ ಆರೋಗ್ಯವನ್ನು ನೀಡುತ್ತದೆ. ಮನಷ್ಯನ ಮನಸ್ಸು ಪ್ರಫುಲ್ಲವಾಗಿರಲು ಸಂಗೀತ ಒಂದು ಸಾಧನ ಎಂದು ಹೇಳಿದರು.<br /> <br /> ರಂಗಕಲಾ ಶಿಕ್ಷಕ ಜಗದೀಶ್ವರಾಚಾರ್ಯ ಮಾತನಾಡಿ, ‘ಕಲೆ ಎಂಬುದು ಪ್ರತಿಯೊಬ್ಬರಲ್ಲೂ ಇರುವ ಒಂದು ಗುಪ್ತ ಪ್ರತಿಭೆ. ಅದನ್ನು ಹೆಕ್ಕಿ ತೆಗೆಯುವ ಉತ್ತಮ ಶಿಕ್ಷಕರ ಅಗತ್ಯತೆ ಇದೆ ಎಂದರು. ಶಿಕ್ಷಕಿ ಹೇಮಲತಾ ಎಸ್.ಕೆ, ಸಮಾಜ ಸೇವಕ ಮಾಯಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ಕಲೆ ಎಂಬುದು ಕಠಿಣ ಪರಿಶ್ರಮದಿಂದ ಒಲಿಸಿಕೊಳ್ಳಬೇಕಾಗದ ವಿದ್ಯೆ. ಅದಕ್ಕೆ ನಿರಂತರ ಅಭ್ಯಾಸ ಅವಶ್ಯ ಎಂದು ಸಂಗೀತ ಶಿಕ್ಷಕಿ ಶ್ರೀದೇವಿ ಹೇಳಿದರು.<br /> <br /> ರೋಟರಿ ಭವನದಲ್ಲಿ ಶಾರದಾ ನೃತ್ಯ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, <br /> ‘ಕಲೆಯೆಂಬುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಗುರುತಿಸಿ ಹೊರಹೊಮ್ಮಿಸಲು ಕಠಿಣ ಶ್ರಮ ಹಾಕಿದರೆ ನಿಜವಾಗಿಯೂ ಒಬ್ಬ ಪ್ರತಿಭಾವಂತ ಕಲೆಗಾರನಾಗಬಹುದು ಎಂದರು. <br /> <br /> ಯೋಜನ ಸಂಯೋಜಕ ಸಿದ್ದೇಗೌಡ ಮಾತನಾಡಿ,‘ನಿರಂತರ ಅಭ್ಯಾಸದಿಂದ ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ. ಯಾವುದೇ ರಂಗದಲ್ಲಿ ಪರಿಶ್ರಮವಿಲ್ಲದೆ ಹೆಸರು ಗಳಿಸಲು ಸಾಧ್ಯವಿಲ್ಲ’ ಎಂದರು.<br /> <br /> ಸಂಗೀತ ಮನುಷ್ಯನಿಗೆ ಆರೋಗ್ಯವನ್ನು ನೀಡುತ್ತದೆ. ಮನಷ್ಯನ ಮನಸ್ಸು ಪ್ರಫುಲ್ಲವಾಗಿರಲು ಸಂಗೀತ ಒಂದು ಸಾಧನ ಎಂದು ಹೇಳಿದರು.<br /> <br /> ರಂಗಕಲಾ ಶಿಕ್ಷಕ ಜಗದೀಶ್ವರಾಚಾರ್ಯ ಮಾತನಾಡಿ, ‘ಕಲೆ ಎಂಬುದು ಪ್ರತಿಯೊಬ್ಬರಲ್ಲೂ ಇರುವ ಒಂದು ಗುಪ್ತ ಪ್ರತಿಭೆ. ಅದನ್ನು ಹೆಕ್ಕಿ ತೆಗೆಯುವ ಉತ್ತಮ ಶಿಕ್ಷಕರ ಅಗತ್ಯತೆ ಇದೆ ಎಂದರು. ಶಿಕ್ಷಕಿ ಹೇಮಲತಾ ಎಸ್.ಕೆ, ಸಮಾಜ ಸೇವಕ ಮಾಯಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>