<p><strong>ಹುಬ್ಬಳ್ಳಿ: </strong>‘ಪ್ರಜಾವಾಣಿ’ ಹಾಗೂ ಸಿಡಿಎಸ್ಎಲ್, ಮುಂಬೈ ಷೇರು ವಿನಿಮಯ ಕೇಂದ್ರ, ಐಸಿಐಸಿಐ ಸೆಕ್ಯೂರಿಟಿಸ್, ಬಿಒ ಪ್ರೊಟೆಕ್ಷನ್ ಫಂಡ್ ಸಂಸ್ಥೆಗಳ ಸಹಯೋಗದಲ್ಲಿ ಹೂಡಿಕೆದಾರರ ಸಮಾವೇಶವು ಇದೇ 22ರಂದು ಸಂಜೆ 4.30ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆಯಲಿದೆ.<br /> <br /> ಷೇರು ಮಾರುಕಟ್ಟೆಯ ವಿವಿಧ ವಿಚಾರಗಳ ಬಗ್ಗೆ ಹಾಗೂ ಹೂಡಿಕೆಯ ಸಂದರ್ಭ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಆಯಾ ಕ್ಷೇತ್ರದ ತಜ್ಞರು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದಾರೆ.<br /> <br /> ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆ (ಆರ್ಜಿಇಎಸ್ಎಸ್) ಹಾಗೂ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ.<br /> <br /> ಮುಂಬೈ ಷೇರು ವಿನಿಮಯ ಕೇಂದ್ರದ ವ್ಯವಸ್ಥಾಪಕ ಬದರಿ ನಾರಾಯಣ್, ಐಸಿಐಸಿಐ ಸೆಕ್ಯೂರಿಟಿಸ್ನ ಪ್ರಾದೇಶಿಕ ವ್ಯವಸ್ಥಾಪಕ ಅಭಿಷೇಕ್ ದೇಶಪಾಂಡೆ, ಕಂಪೆನಿಯ ತರಬೇತುದಾರ ಮಂಜುನಾಥ್ ಶಿಗ್ಗಾವ್ ಹಾಗೂ ಸಿಎಸ್ಡಿಎಸ್ನ ಬೆಂಗಳೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸಿ.ಎಸ್. ಹರೀಶ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.<br /> <br /> ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836–2372081 ಇಲ್ಲವೇ ಮೊಬೈಲ್ 94496–73067 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>‘ಪ್ರಜಾವಾಣಿ’ ಹಾಗೂ ಸಿಡಿಎಸ್ಎಲ್, ಮುಂಬೈ ಷೇರು ವಿನಿಮಯ ಕೇಂದ್ರ, ಐಸಿಐಸಿಐ ಸೆಕ್ಯೂರಿಟಿಸ್, ಬಿಒ ಪ್ರೊಟೆಕ್ಷನ್ ಫಂಡ್ ಸಂಸ್ಥೆಗಳ ಸಹಯೋಗದಲ್ಲಿ ಹೂಡಿಕೆದಾರರ ಸಮಾವೇಶವು ಇದೇ 22ರಂದು ಸಂಜೆ 4.30ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆಯಲಿದೆ.<br /> <br /> ಷೇರು ಮಾರುಕಟ್ಟೆಯ ವಿವಿಧ ವಿಚಾರಗಳ ಬಗ್ಗೆ ಹಾಗೂ ಹೂಡಿಕೆಯ ಸಂದರ್ಭ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಆಯಾ ಕ್ಷೇತ್ರದ ತಜ್ಞರು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದಾರೆ.<br /> <br /> ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆ (ಆರ್ಜಿಇಎಸ್ಎಸ್) ಹಾಗೂ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ.<br /> <br /> ಮುಂಬೈ ಷೇರು ವಿನಿಮಯ ಕೇಂದ್ರದ ವ್ಯವಸ್ಥಾಪಕ ಬದರಿ ನಾರಾಯಣ್, ಐಸಿಐಸಿಐ ಸೆಕ್ಯೂರಿಟಿಸ್ನ ಪ್ರಾದೇಶಿಕ ವ್ಯವಸ್ಥಾಪಕ ಅಭಿಷೇಕ್ ದೇಶಪಾಂಡೆ, ಕಂಪೆನಿಯ ತರಬೇತುದಾರ ಮಂಜುನಾಥ್ ಶಿಗ್ಗಾವ್ ಹಾಗೂ ಸಿಎಸ್ಡಿಎಸ್ನ ಬೆಂಗಳೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸಿ.ಎಸ್. ಹರೀಶ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.<br /> <br /> ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836–2372081 ಇಲ್ಲವೇ ಮೊಬೈಲ್ 94496–73067 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>