<p><strong>ರಾಯಚೂರು: </strong> `ಅಬ್ಬಾ! ಆ ಗಜಗಾತ್ರದ ಎತ್ತುಗಳು. ಟನ್ಗಟ್ಟಲೆ ಭಾರವಾದ ಕಲ್ಲನ್ನು ಎಳೆಯುವಾಗ ಅವುಗಳು ತೋರಿದ ಸಾಮರ್ಥ್ಯ ಕಂಡು ರೋಮಾಂಚನವಾಯ್ತು'-ಇದು ಜರ್ಮನಿಯ ಪ್ರಜೆಗಳ ಉದ್ಗಾರ. ನಗರದಲ್ಲಿ ಮುನ್ನೂರು ಕಾಪು ಬಲಿಜ ಸಮಾಜದ ನೇತೃತ್ವದಲ್ಲಿ ಶನಿವಾರ ಆರಂಭಗೊಂಡ `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಆಕರ್ಷಣೆಯಾದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಿದ ಅವರು ಖುಷಿಯಾಗಿದ್ದರು.</p>.<p>ಸ್ವಯಂ ಸೇವಾ ಸಂಸ್ಥೆ (ಎನ್ಜಿಒ)ಯ ಕಾರ್ಯಕರ್ತರಾದ ಜೂಲಿಯನ್, ಮ್ಯಾಕ್ಸನ್ ಹಾಗೂ ವಾಲಿಯಸ್ ಅವರು ನಮ್ಮ ದೇಸಿ ಕ್ರೀಡೆಗೆ ಮನಸೋತಿದ್ದರು.`ಬುಲ್ ಫೈಟ್, ವಿವಿಧ ಪ್ರಾಣಿಗಳ ಸ್ಪರ್ಧೆ, ಆಟಗಳನ್ನು ನೋಡಿದ್ದೇವೆ. ಭಾರತದಲ್ಲೂ ಈ ರೀತಿ ಮನರಂಜನಾ ಕ್ರೀಡೆಗಳಿವೆ ಎನ್ನುವುದು ಗೊತ್ತಿತ್ತು. ಆದರೆ ನೋಡಿರಲಿಲ್ಲ. ಈಗ ಅನಾಯಾಸವಾಗಿ ಅಂಥ ಅವಕಾಶ ಒದಗಿಬಂತು' ಎಂದು ಸಂಭ್ರಮಿಸಿದರು.<br /> <br /> ಬುದ್ಧಿಮಾಂದ್ಯ ಹಾಗೂ ಅನಾಥ ಮಕ್ಕಳ ಕುರಿತಾದ ಅಧ್ಯಯನಕ್ಕಾಗಿ ಅವರು ಬಳ್ಳಾರಿಗೆ ಬಂದಿದ್ದರು. ಅನಿರೀಕ್ಷಿತವಾಗಿ ಬಂದ ವಿದೇಶಿ ಅತಿಥಿಗಳನ್ನು `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಅಧ್ಯಕ್ಷ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಸಂಘಟಕರು ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong> `ಅಬ್ಬಾ! ಆ ಗಜಗಾತ್ರದ ಎತ್ತುಗಳು. ಟನ್ಗಟ್ಟಲೆ ಭಾರವಾದ ಕಲ್ಲನ್ನು ಎಳೆಯುವಾಗ ಅವುಗಳು ತೋರಿದ ಸಾಮರ್ಥ್ಯ ಕಂಡು ರೋಮಾಂಚನವಾಯ್ತು'-ಇದು ಜರ್ಮನಿಯ ಪ್ರಜೆಗಳ ಉದ್ಗಾರ. ನಗರದಲ್ಲಿ ಮುನ್ನೂರು ಕಾಪು ಬಲಿಜ ಸಮಾಜದ ನೇತೃತ್ವದಲ್ಲಿ ಶನಿವಾರ ಆರಂಭಗೊಂಡ `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಆಕರ್ಷಣೆಯಾದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಿದ ಅವರು ಖುಷಿಯಾಗಿದ್ದರು.</p>.<p>ಸ್ವಯಂ ಸೇವಾ ಸಂಸ್ಥೆ (ಎನ್ಜಿಒ)ಯ ಕಾರ್ಯಕರ್ತರಾದ ಜೂಲಿಯನ್, ಮ್ಯಾಕ್ಸನ್ ಹಾಗೂ ವಾಲಿಯಸ್ ಅವರು ನಮ್ಮ ದೇಸಿ ಕ್ರೀಡೆಗೆ ಮನಸೋತಿದ್ದರು.`ಬುಲ್ ಫೈಟ್, ವಿವಿಧ ಪ್ರಾಣಿಗಳ ಸ್ಪರ್ಧೆ, ಆಟಗಳನ್ನು ನೋಡಿದ್ದೇವೆ. ಭಾರತದಲ್ಲೂ ಈ ರೀತಿ ಮನರಂಜನಾ ಕ್ರೀಡೆಗಳಿವೆ ಎನ್ನುವುದು ಗೊತ್ತಿತ್ತು. ಆದರೆ ನೋಡಿರಲಿಲ್ಲ. ಈಗ ಅನಾಯಾಸವಾಗಿ ಅಂಥ ಅವಕಾಶ ಒದಗಿಬಂತು' ಎಂದು ಸಂಭ್ರಮಿಸಿದರು.<br /> <br /> ಬುದ್ಧಿಮಾಂದ್ಯ ಹಾಗೂ ಅನಾಥ ಮಕ್ಕಳ ಕುರಿತಾದ ಅಧ್ಯಯನಕ್ಕಾಗಿ ಅವರು ಬಳ್ಳಾರಿಗೆ ಬಂದಿದ್ದರು. ಅನಿರೀಕ್ಷಿತವಾಗಿ ಬಂದ ವಿದೇಶಿ ಅತಿಥಿಗಳನ್ನು `ಮುಂಗಾರು ಸಾಂಸ್ಕೃತಿಕ ಹಬ್ಬ'ದ ಅಧ್ಯಕ್ಷ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಸಂಘಟಕರು ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>