<p>ಬೆಂಗಳೂರು: ಹಲಸೂರಿನ ರಾಮಕೃಷ್ಣಾಶ್ರಮದ ವತಿಯಿಂದ ಮಂಗಳವಾರ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾವುಗೋಡ್ಲುವಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಲಾಯಿತು.<br /> <br /> ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು, ಹೊಸಕೋಟೆ, ಅನೇಕಲ್, ಕನಕಪುರ, ರಾಮನಗರ, ಗೌರಿಬಿದನೂರು, ಪಾವಗಡ, ಮಧುಗಿರಿ ತಾಲ್ಲೂಕುಗಳ 170 ಹಳ್ಳಿಗಳಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ಸಲುವಾಗಿ 18 ಲಕ್ಷ ರೂಪಾಯಿ ಮೊತ್ತದ ಈ ಕಾರ್ಯಕ್ರಮವನ್ನು ಆಶ್ರಮವು ಹಮ್ಮಿಕೊಂಡಿದೆ.<br /> <br /> ಇದರ ಜೊತೆಯಲ್ಲಿ 15 ವಿವೇಕಾನಂದ ಕೋಚಿಂಗ್ ಸೆಂಟರ್ನ ಬಡ ಮಕ್ಕಳಿಗೆ ಶಾಲಾ ಬ್ಯಾಗ್, ವಸ್ತ್ರಗಳ ಜೊತೆಗೆ ಟೂತ್ಪೇಸ್ಟ್, ಬ್ರಷ್, ತಲೆ ಎಣ್ಣೆ, ಸಾಬೂನು ಸಹಿತವಾಗಿ ವಿತರಿಸಲಾಗಿದೆ.<br /> <br /> ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ಪರಮಸುಖಾನಂದರು ಮಾತನಾಡಿ ವಿವೇಕಾನಂದರ ದೇಶಪ್ರೇಮ ಹಾಗೂ ಅವರು ಯುವ ಜನತೆಯಲ್ಲಿಟ್ಟಿದ್ದ ಶಕ್ತಿಯ ಅರಿವನ್ನು ಶಾಲಾ ಮಕ್ಕಳಲ್ಲಿ ಬಿತ್ತಿ ಅವರನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಮುಖ್ಯವಾಹಿನಿಗೆ ತರುವುದು ನಮ್ಮ ಧ್ಯೇಯವಾಗಿದೆ ಎಂದರು.<br /> <br /> ಕಾರ್ಯಕ್ರಮದಲ್ಲಿ ವಿವೇಕಾನಂದ ಸಂಘದ ಸಂಯೋಜಕ ಸತ್ಯಮೂರ್ತಿ ಸೇರಿದಂತೆ ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹಲಸೂರಿನ ರಾಮಕೃಷ್ಣಾಶ್ರಮದ ವತಿಯಿಂದ ಮಂಗಳವಾರ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾವುಗೋಡ್ಲುವಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಲಾಯಿತು.<br /> <br /> ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು, ಹೊಸಕೋಟೆ, ಅನೇಕಲ್, ಕನಕಪುರ, ರಾಮನಗರ, ಗೌರಿಬಿದನೂರು, ಪಾವಗಡ, ಮಧುಗಿರಿ ತಾಲ್ಲೂಕುಗಳ 170 ಹಳ್ಳಿಗಳಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ಸಲುವಾಗಿ 18 ಲಕ್ಷ ರೂಪಾಯಿ ಮೊತ್ತದ ಈ ಕಾರ್ಯಕ್ರಮವನ್ನು ಆಶ್ರಮವು ಹಮ್ಮಿಕೊಂಡಿದೆ.<br /> <br /> ಇದರ ಜೊತೆಯಲ್ಲಿ 15 ವಿವೇಕಾನಂದ ಕೋಚಿಂಗ್ ಸೆಂಟರ್ನ ಬಡ ಮಕ್ಕಳಿಗೆ ಶಾಲಾ ಬ್ಯಾಗ್, ವಸ್ತ್ರಗಳ ಜೊತೆಗೆ ಟೂತ್ಪೇಸ್ಟ್, ಬ್ರಷ್, ತಲೆ ಎಣ್ಣೆ, ಸಾಬೂನು ಸಹಿತವಾಗಿ ವಿತರಿಸಲಾಗಿದೆ.<br /> <br /> ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ಪರಮಸುಖಾನಂದರು ಮಾತನಾಡಿ ವಿವೇಕಾನಂದರ ದೇಶಪ್ರೇಮ ಹಾಗೂ ಅವರು ಯುವ ಜನತೆಯಲ್ಲಿಟ್ಟಿದ್ದ ಶಕ್ತಿಯ ಅರಿವನ್ನು ಶಾಲಾ ಮಕ್ಕಳಲ್ಲಿ ಬಿತ್ತಿ ಅವರನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಮುಖ್ಯವಾಹಿನಿಗೆ ತರುವುದು ನಮ್ಮ ಧ್ಯೇಯವಾಗಿದೆ ಎಂದರು.<br /> <br /> ಕಾರ್ಯಕ್ರಮದಲ್ಲಿ ವಿವೇಕಾನಂದ ಸಂಘದ ಸಂಯೋಜಕ ಸತ್ಯಮೂರ್ತಿ ಸೇರಿದಂತೆ ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>