<p><strong>ನವದೆಹಲಿ (ಐಎಎನ್ಎಸ್): </strong>ಆಮ್ ಆದ್ಮಿ ಪಕ್ಷ ಬರೆದಿರುವ 18 ಅಂಶಗಳ ಪತ್ರಕ್ಕೆ ಕಾಂಗ್ರೆಸ್ ಉತ್ತರ ನೀಡಿದೆ. 18ರಲ್ಲಿ 16 ಅಂಶಗಳಿಗೆ ಶಾಸನಾತ್ಮಕ ಬೆಂಬಲದ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.<br /> <br /> ಆಮ್ ಆದ್ಮಿ ಪಕ್ಷ ಬರೆದಿರುವ ಪತ್ರವು ಆ ಪಕ್ಷದ ರಾಜಕೀಯ ಅಪಕ್ವತೆಯನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹ್ಮದ್ ಹೇಳಿದ್ದಾರೆ.<br /> <br /> 18ರಲ್ಲಿ 16 ಅಂಶಗಳು ಆಡಳಿತಾತ್ಮಕ ವಿಷಯಗಳು. ಯಾವುದೇ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಸರ್ಕಾರ ರಚನೆಯಾದ ನಂತರ ಈ ಅಂಶಗಳ ಜಾರಿಗೆ ಶಾಸನ ಸಭೆಯ ಒಪ್ಪಿಗೆ ಕೂಡ ಅಗತ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷಕ್ಕೆ ಬರೆದ ಪತ್ರದಲ್ಲಿ ಶಕೀಲ್ ಅಹ್ಮದ್ ವಿವರಿಸಿದ್ದಾರೆ.<br /> <br /> ಉಳಿದ ಎರಡು ಅಂಶಗಳಾದ ಜನ ಲೋಕಪಾಲ ಮಸೂದೆ ಮತ್ತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಹೊರಗಿನ ವಿಚಾರ ಎಂದು ಕಾಂಗ್ರೆಸ್ ಹೇಳಿದೆ.<br /> <br /> ಮುಂದಿನ 48 ಗಂಟೆಗಳೊಳಗೆ ಸಭೆ ಸೇರಿ ಕಾಂಗ್ರೆಸ್ ಉತ್ತರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯ ತಿಳಿಸಿದ್ದಾರೆ.<br /> <br /> ನಮಗೆ ಸರ್ಕಾರ ರಚಿಸುವ ಬಯಕೆ ಇದೆ. ಆದರೆ ಅದಕ್ಕಾಗಿ ನಾವು ಯಾವುದೇ ಪಕ್ಷದೊಂದಿಗೆ ತೆರೆಮರೆಯ ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್): </strong>ಆಮ್ ಆದ್ಮಿ ಪಕ್ಷ ಬರೆದಿರುವ 18 ಅಂಶಗಳ ಪತ್ರಕ್ಕೆ ಕಾಂಗ್ರೆಸ್ ಉತ್ತರ ನೀಡಿದೆ. 18ರಲ್ಲಿ 16 ಅಂಶಗಳಿಗೆ ಶಾಸನಾತ್ಮಕ ಬೆಂಬಲದ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.<br /> <br /> ಆಮ್ ಆದ್ಮಿ ಪಕ್ಷ ಬರೆದಿರುವ ಪತ್ರವು ಆ ಪಕ್ಷದ ರಾಜಕೀಯ ಅಪಕ್ವತೆಯನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹ್ಮದ್ ಹೇಳಿದ್ದಾರೆ.<br /> <br /> 18ರಲ್ಲಿ 16 ಅಂಶಗಳು ಆಡಳಿತಾತ್ಮಕ ವಿಷಯಗಳು. ಯಾವುದೇ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಸರ್ಕಾರ ರಚನೆಯಾದ ನಂತರ ಈ ಅಂಶಗಳ ಜಾರಿಗೆ ಶಾಸನ ಸಭೆಯ ಒಪ್ಪಿಗೆ ಕೂಡ ಅಗತ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷಕ್ಕೆ ಬರೆದ ಪತ್ರದಲ್ಲಿ ಶಕೀಲ್ ಅಹ್ಮದ್ ವಿವರಿಸಿದ್ದಾರೆ.<br /> <br /> ಉಳಿದ ಎರಡು ಅಂಶಗಳಾದ ಜನ ಲೋಕಪಾಲ ಮಸೂದೆ ಮತ್ತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಹೊರಗಿನ ವಿಚಾರ ಎಂದು ಕಾಂಗ್ರೆಸ್ ಹೇಳಿದೆ.<br /> <br /> ಮುಂದಿನ 48 ಗಂಟೆಗಳೊಳಗೆ ಸಭೆ ಸೇರಿ ಕಾಂಗ್ರೆಸ್ ಉತ್ತರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯ ತಿಳಿಸಿದ್ದಾರೆ.<br /> <br /> ನಮಗೆ ಸರ್ಕಾರ ರಚಿಸುವ ಬಯಕೆ ಇದೆ. ಆದರೆ ಅದಕ್ಕಾಗಿ ನಾವು ಯಾವುದೇ ಪಕ್ಷದೊಂದಿಗೆ ತೆರೆಮರೆಯ ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>