<p><strong>ಹೊಸಕೋಟೆ:</strong> `ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅನುವು ಮಾಡಿಕೊಡುವ ಸಲುವಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ತಾಲ್ಲೂಕಿನ 19 ಶಾಲೆಗಳಿಗೆ ಕಂಪ್ಯೂಟರ್ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳಿಗೂ ಕಂಪ್ಯೂಟರ್ ನೀಡಲಾಗುವುದು~ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಆರ್.ಮಲ್ಲೇಶ್ ತಿಳಿಸಿದರು.<br /> <br /> ಹೊಸಕೋಟೆಯ ಕೆಜಿಕೆಎಂಎಸ್ ಶಾಲೆಯ ಗ್ರಂಥಾಲಯವನ್ನು ಉದ್ಘಾಟಿಸಿ, `ಯೋಜನೆಯಡಿ ತಾಲ್ಲೂಕಿನ 246 ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ತಲಾ ರೂ 3 ಸಾವಿರ ನೀಡಲಾಗಿದೆ. ಶಿಕ್ಷಣ ಫೌಂಡೇಶನ್ 23 ಶಾಲೆಗಳಿಗೆ ತಲಾ 9 ಸಾವಿರ ರೂ. ಕೊಡುಗೆ ನೀಡಿದೆ~ ಎಂದರು.<br /> <br /> ಶಿಕ್ಷಣ ಫೌಂಡೇಶನ್ ಸಂಯೋಜಕ ಕೆ.ಎಸ್.ವಿಶ್ವನಾಥ್ ಮಾತನಾಡಿ, `ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ ತಾಲ್ಲೂಕಿನ 104 ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಿಕ್ಷಣ ಫೌಂಡೇಷನ್ ಈ ವರೆಗೆ 98 ಶಾಲೆಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಿದೆ~ ಎಂದರು. ಮುಖ್ಯ ಶಿಕ್ಷಕ ಕೆ.ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಯ್ಯ ಇದ್ದರು.<br /> <br /> <strong>ಕೊಡುಗೆ: </strong>ಡಾ.ಶಿವಕುಮಾರಸ್ವಾಮಿಗಳ 105 ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಬಿ.ವಿ.ಬೈರೇಗೌಡ ಮತ್ತು ವಿ.ವಿಜಯಕುಮಾರ್ ಮಠದಲ್ಲಿನ ಅನ್ನದಾಸೋಹಕ್ಕೆ 4 ಟನ್ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> `ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅನುವು ಮಾಡಿಕೊಡುವ ಸಲುವಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ತಾಲ್ಲೂಕಿನ 19 ಶಾಲೆಗಳಿಗೆ ಕಂಪ್ಯೂಟರ್ಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ಶಾಲೆಗಳಿಗೂ ಕಂಪ್ಯೂಟರ್ ನೀಡಲಾಗುವುದು~ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಆರ್.ಮಲ್ಲೇಶ್ ತಿಳಿಸಿದರು.<br /> <br /> ಹೊಸಕೋಟೆಯ ಕೆಜಿಕೆಎಂಎಸ್ ಶಾಲೆಯ ಗ್ರಂಥಾಲಯವನ್ನು ಉದ್ಘಾಟಿಸಿ, `ಯೋಜನೆಯಡಿ ತಾಲ್ಲೂಕಿನ 246 ಶಾಲೆಗಳಲ್ಲಿನ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ತಲಾ ರೂ 3 ಸಾವಿರ ನೀಡಲಾಗಿದೆ. ಶಿಕ್ಷಣ ಫೌಂಡೇಶನ್ 23 ಶಾಲೆಗಳಿಗೆ ತಲಾ 9 ಸಾವಿರ ರೂ. ಕೊಡುಗೆ ನೀಡಿದೆ~ ಎಂದರು.<br /> <br /> ಶಿಕ್ಷಣ ಫೌಂಡೇಶನ್ ಸಂಯೋಜಕ ಕೆ.ಎಸ್.ವಿಶ್ವನಾಥ್ ಮಾತನಾಡಿ, `ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ ತಾಲ್ಲೂಕಿನ 104 ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಿಕ್ಷಣ ಫೌಂಡೇಷನ್ ಈ ವರೆಗೆ 98 ಶಾಲೆಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಿದೆ~ ಎಂದರು. ಮುಖ್ಯ ಶಿಕ್ಷಕ ಕೆ.ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಯ್ಯ ಇದ್ದರು.<br /> <br /> <strong>ಕೊಡುಗೆ: </strong>ಡಾ.ಶಿವಕುಮಾರಸ್ವಾಮಿಗಳ 105 ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಬಿ.ವಿ.ಬೈರೇಗೌಡ ಮತ್ತು ವಿ.ವಿಜಯಕುಮಾರ್ ಮಠದಲ್ಲಿನ ಅನ್ನದಾಸೋಹಕ್ಕೆ 4 ಟನ್ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>