3 ದಿನಗಳ ರೈಲು ತಡೆ ಮುಂದಕ್ಕೆ
ಹೈದರಾಬಾದ್: ನಿಜಾಮಾಬಾದ್ ಜಿಲ್ಲೆಯ ಬನಸವಾಡದಲ್ಲಿ ಇದೇ 13ರಂದು ಉಪಚುನಾವಣೆ ಇರುವುದರಿಂದ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಉದ್ದೇಶಿತ ಮೂರು ದಿನಗಳ ರೈಲು ತಡೆಯನ್ನು ಇದೇ 12ರ ಬದಲಿಗೆ 15ರಿಂದ ಆರಂಭಿಸಲು ನಿರ್ಧರಿಸಿದೆ.
ರೈಲು ತಡೆ ಹಿನ್ನೆಲೆಯಲ್ಲಿ ಈ ಮೊದಲು ದಕ್ಷಿಣ ಕೇಂದ್ರೀಯ ರೈಲ್ವೆ ಬದಲಿ ಮಾರ್ಗಗಳ ವ್ಯವಸ್ಥೆ ಮಾಡಿತ್ತು. ಇದೀಗ ರೈಲು ತಡೆ ಮುಂದಕ್ಕೆ ಹೋಗಿರುವುದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.