<p>ಬೆಂಗಳೂರು: `ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ 6ರಿಂದ 7 ಕೋಟಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ~ ಎಂದು ಮಾನಸಿಕ- ಸಾಮಾಜಿಕ ಪುನರ್ವಸತಿ ಕೇಂದ್ರ `ಕಡಬಮ್ಸ~ ಸಂಸ್ಥೆ ನಿರ್ದೇಶಕ ಸಂದೇಶ್ ಆರ್.ಕಡಬಮ್ ತಿಳಿಸಿದರು.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ ಒಬ್ಬ ಮನೋವೈದ್ಯರಾದರೂ ಇರಬೇಕು. ಈ ಪ್ರಕಾರ ದೇಶಕ್ಕೆ 13 ಸಾವಿರಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇರುವ ಮನೋವೈದ್ಯರ ಸಂಖ್ಯೆ 3 ಸಾವಿರ ಮಾತ್ರ~ ಎಂದರು.<br /> <br /> `ಜನಸಂಖ್ಯೆ ದೃಷ್ಟಿಯಿಂದ ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇಲ್ಲಿರುವುದು 200 ಮನೋವೈದ್ಯರು ಮಾತ್ರ. ಮಾನಸಿಕ ಆರೋಗ್ಯ ಸುಧಾರಣೆಗೆ ಕೇಂದ್ರ ಸರ್ಕಾರ ಶೇ 2ಕ್ಕಿಂತ ಕಡಿಮೆ ಹಣ ನೀಡುತ್ತಿದೆ. ಇದು ಏನೇನು ಸಾಲದು~ ಎಂದರು.<br /> <br /> ಸಂಸ್ಥೆಯ ಉಪಾಧ್ಯಕ್ಷೆ ಎಂ.ಕೆ.ಸರಸ್ವತಿ, ಕಾರ್ಯನಿರ್ವಹಣಾ ವಿಭಾಗದ ನಿರ್ದೇಶಕ ರಾಜಶೇಖರ್ ಹಿರೇಮಠ್, ನಿರ್ದೇಶಕ ಡಾ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ 6ರಿಂದ 7 ಕೋಟಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ~ ಎಂದು ಮಾನಸಿಕ- ಸಾಮಾಜಿಕ ಪುನರ್ವಸತಿ ಕೇಂದ್ರ `ಕಡಬಮ್ಸ~ ಸಂಸ್ಥೆ ನಿರ್ದೇಶಕ ಸಂದೇಶ್ ಆರ್.ಕಡಬಮ್ ತಿಳಿಸಿದರು.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ ಒಬ್ಬ ಮನೋವೈದ್ಯರಾದರೂ ಇರಬೇಕು. ಈ ಪ್ರಕಾರ ದೇಶಕ್ಕೆ 13 ಸಾವಿರಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇರುವ ಮನೋವೈದ್ಯರ ಸಂಖ್ಯೆ 3 ಸಾವಿರ ಮಾತ್ರ~ ಎಂದರು.<br /> <br /> `ಜನಸಂಖ್ಯೆ ದೃಷ್ಟಿಯಿಂದ ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮನೋವೈದ್ಯರ ಅಗತ್ಯವಿದೆ. ಆದರೆ ಇಲ್ಲಿರುವುದು 200 ಮನೋವೈದ್ಯರು ಮಾತ್ರ. ಮಾನಸಿಕ ಆರೋಗ್ಯ ಸುಧಾರಣೆಗೆ ಕೇಂದ್ರ ಸರ್ಕಾರ ಶೇ 2ಕ್ಕಿಂತ ಕಡಿಮೆ ಹಣ ನೀಡುತ್ತಿದೆ. ಇದು ಏನೇನು ಸಾಲದು~ ಎಂದರು.<br /> <br /> ಸಂಸ್ಥೆಯ ಉಪಾಧ್ಯಕ್ಷೆ ಎಂ.ಕೆ.ಸರಸ್ವತಿ, ಕಾರ್ಯನಿರ್ವಹಣಾ ವಿಭಾಗದ ನಿರ್ದೇಶಕ ರಾಜಶೇಖರ್ ಹಿರೇಮಠ್, ನಿರ್ದೇಶಕ ಡಾ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>