<p><strong>ಮೂಡುಬಿದಿರೆ:</strong> ಸರ್ಕಾರದಿಂದ ಮಂಜೂರಾದ ಆಶ್ರಯ ನಿವೇಶನಗಳನ್ನು ಬೇರೆಯವರಿಗೆ ಪರಭಾರೆ ಮಾಡಿರುವುದು, ಮಂಜೂರಾದ ನಿವೇಶನಗಳನ್ನು ಬಳಕೆ ಮಾಡದೆ ಖಾಲಿ ಬಿಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿ ವಲಯದ ಮಾರ್ಪಾಡಿ ಗ್ರಾಮದ 81 ನಿವೇಶನಗಳ ಮಂಜೂರಾತಿ ಆದೇಶವನ್ನು ಮೂಡುಬಿದಿರೆ ತಹಸೀಲ್ದಾರ್ ಮುರಳೀಧರ್ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದ್ದಾರೆ.<br /> <br /> ಮಂಗಳೂರು ತಹಸೀಲ್ದಾರ್ ಅವರ 2001-02ರ ವರದಿ ಆಧಾರದಲ್ಲಿ ಮಾರ್ಪಾಡಿ ಗ್ರಾಮದ ಅಲಂಗಾರು ಐದು ಸೆಂಟ್ಸ್ನಲ್ಲಿ ತಲಾ ಐದು ಸೆಂಟ್ಸ್ನಂತೆ ಅನೇಕ ನಿವೇಶನಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಜಾಗದಲ್ಲಿ ಕೆಲವರು ಮನೆ ಕಟ್ಟ ಕುಳಿತರೆ ಉಳಿದಂತೆ ಮೂಲ ಫಲಾನುಭವಿಗಳು ಅದನ್ನು ಬೇರೆಯವರಿಗೆ ಕಾನೂನುಬಾಹಿರವಾಗಿ ಪರಭಾರೆ ಮಾಡಿದ್ದರು. <br /> <br /> ಇಂತಹ 41 ಪ್ರಕರಣಗಳು ಪತ್ತೆಯಾದರೆ, ನಿವೇಶನ ಪಡೆದುಕೊಂಡರೂ ಅದರಲ್ಲಿ ಮನೆ ಕಟ್ಟದೆ ಖಾಲಿ ಬಿಟ್ಟ 37 ಪ್ರಕರಣಗಳು ಹಾಗೂ ಮೂಲ ಫಲಾನುಭವಿಗಳಿಂದ ಪರಭಾರೆಯಾಗಿಯೂ ಮನೆಕಟ್ಟದೆ ಖಾಲಿ ಇರುವ 3 ಪ್ರಕರಣಗಳು ಪತ್ತೆಯಾಗಿವೆ. <br /> <br /> ಮೂಡುಬಿದಿರೆ ತಹಸೀಲ್ದಾರ್ 2007ರಂದು ನಡೆಸಿದ ತನಿಖೆಯಂತೆ ಮನೆಕಟ್ಟದೆ ಖಾಲಿಯಿರುವ ಹಾಗೂ ಕಾನೂನು ಬಾಹಿರವಾಗಿ ಪರಭಾರೆಯಾದ ನಿವೇಶನ ಸೇರಿದಂತೆ ಒಟ್ಟು 81 ನಿವೇಶನಗಳನ್ನು ಪತ್ತೆ ಹಚ್ಚಿ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. <br /> <br /> ಮಾರ್ಪಾಡಿಯ ಅಲಂಗಾರಿನಲ್ಲಿರುವ ಆಶ್ರಯ ನಿವೇಶನಗಳ ದುರುಪಯೋಗದ ಬಗ್ಗೆ ಇತ್ತೀಚೆಗೆ ತಹಸೀಲ್ದಾರ್ ತನಿಖೆಗೆ ಸ್ಥಳಕ್ಕೆ ಹೋದಾಗ ಮೂಲ ಫಲಾನುಭವಿಗಳಲ್ಲದವರು ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ:</strong> ಸರ್ಕಾರದಿಂದ ಮಂಜೂರಾದ ಆಶ್ರಯ ನಿವೇಶನಗಳನ್ನು ಬೇರೆಯವರಿಗೆ ಪರಭಾರೆ ಮಾಡಿರುವುದು, ಮಂಜೂರಾದ ನಿವೇಶನಗಳನ್ನು ಬಳಕೆ ಮಾಡದೆ ಖಾಲಿ ಬಿಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿ ವಲಯದ ಮಾರ್ಪಾಡಿ ಗ್ರಾಮದ 81 ನಿವೇಶನಗಳ ಮಂಜೂರಾತಿ ಆದೇಶವನ್ನು ಮೂಡುಬಿದಿರೆ ತಹಸೀಲ್ದಾರ್ ಮುರಳೀಧರ್ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದ್ದಾರೆ.<br /> <br /> ಮಂಗಳೂರು ತಹಸೀಲ್ದಾರ್ ಅವರ 2001-02ರ ವರದಿ ಆಧಾರದಲ್ಲಿ ಮಾರ್ಪಾಡಿ ಗ್ರಾಮದ ಅಲಂಗಾರು ಐದು ಸೆಂಟ್ಸ್ನಲ್ಲಿ ತಲಾ ಐದು ಸೆಂಟ್ಸ್ನಂತೆ ಅನೇಕ ನಿವೇಶನಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಜಾಗದಲ್ಲಿ ಕೆಲವರು ಮನೆ ಕಟ್ಟ ಕುಳಿತರೆ ಉಳಿದಂತೆ ಮೂಲ ಫಲಾನುಭವಿಗಳು ಅದನ್ನು ಬೇರೆಯವರಿಗೆ ಕಾನೂನುಬಾಹಿರವಾಗಿ ಪರಭಾರೆ ಮಾಡಿದ್ದರು. <br /> <br /> ಇಂತಹ 41 ಪ್ರಕರಣಗಳು ಪತ್ತೆಯಾದರೆ, ನಿವೇಶನ ಪಡೆದುಕೊಂಡರೂ ಅದರಲ್ಲಿ ಮನೆ ಕಟ್ಟದೆ ಖಾಲಿ ಬಿಟ್ಟ 37 ಪ್ರಕರಣಗಳು ಹಾಗೂ ಮೂಲ ಫಲಾನುಭವಿಗಳಿಂದ ಪರಭಾರೆಯಾಗಿಯೂ ಮನೆಕಟ್ಟದೆ ಖಾಲಿ ಇರುವ 3 ಪ್ರಕರಣಗಳು ಪತ್ತೆಯಾಗಿವೆ. <br /> <br /> ಮೂಡುಬಿದಿರೆ ತಹಸೀಲ್ದಾರ್ 2007ರಂದು ನಡೆಸಿದ ತನಿಖೆಯಂತೆ ಮನೆಕಟ್ಟದೆ ಖಾಲಿಯಿರುವ ಹಾಗೂ ಕಾನೂನು ಬಾಹಿರವಾಗಿ ಪರಭಾರೆಯಾದ ನಿವೇಶನ ಸೇರಿದಂತೆ ಒಟ್ಟು 81 ನಿವೇಶನಗಳನ್ನು ಪತ್ತೆ ಹಚ್ಚಿ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. <br /> <br /> ಮಾರ್ಪಾಡಿಯ ಅಲಂಗಾರಿನಲ್ಲಿರುವ ಆಶ್ರಯ ನಿವೇಶನಗಳ ದುರುಪಯೋಗದ ಬಗ್ಗೆ ಇತ್ತೀಚೆಗೆ ತಹಸೀಲ್ದಾರ್ ತನಿಖೆಗೆ ಸ್ಥಳಕ್ಕೆ ಹೋದಾಗ ಮೂಲ ಫಲಾನುಭವಿಗಳಲ್ಲದವರು ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>