<p>ಪುತ್ತೂರು: ’ಎಲ್ಲವೂ ವಿಧಿಯಾಟ. ನಾನು ಆ ಘಟನೆಯನ್ನೇ ಮರೆತಿದ್ದೇನೆ. ಮರೆತು ಹೋದದ್ದನ್ನು ಮತ್ತೆ ಕೆಣಕಿ ನೆನಪಿಸಿಕೊಳ್ಳಲು ಇಷ್ಟವಿಲ್ಲ’... <br /> <br /> 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಇಫ್ರೋ ಸಂಸ್ಥೆ ಸಾಫ್ಟ್ವೇರ್ ಎಂಜಿನಿಯರ್ ಹೇಮಂತ್ ಕುಮಾರ್ ಅವರ ತಂದೆ ಪುತ್ತೂರಿನ ಆನಂದ ಟೈಲರ್ ಅವರ ಬಾಯಿಂದ ಹೊರಬಂದ ನೋವಿನ ನುಡಿ ಇದೆ.<br /> <br /> ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿದ್ದ ಆರೋಪಿ ಒಸಾಮ ಬಿನ್ ಲಾಡೆನ್ ಸಾವಿನ ಸುದ್ದಿ ಹೊರಬಿದ್ದ ನಂತರ ಮಾತಿಗೆಳೆದಾಗ ಅವರು ಪ್ರತಿಕ್ರಿಯಿಸಿದ್ದಿಷ್ಟು.<br /> <br /> ’ಯಾರು ಸತ್ತರೂ ನನ್ನ ಮಗ ಇನ್ನು ಬದುಕಿ ಬರಲಾರ. ಮೆರೆತು ಹೋದ ಕಹಿ ಘಟನೆಯನ್ನು ಮತ್ತೆ ಕೆದಕಲು ಬಯಸುವುದಿಲ್ಲ. ಲಾಡೆನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲೂ ಇಷ್ಟಪಡುವುದಿಲ್ಲ’ ಎಂದು ಮಾತು ಮುಗಿಸಿದರು. <br /> ಆದರೆ, ಈಗಲೂ ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವ ಆನಂದ ಟೈಲರ್, ಪುತ್ತೂರಿನ ಬಲ್ಲವ ಸಭಾಭವನ ಬಳಿ ಸ್ಮಾರಕ ಭವನ ಮತ್ತು ಮುಖ್ಯರಸ್ತೆಯ ಎರಡೂ ಕಡೆ ಸ್ವಾಗತ ಕಮಾನು ನಿರ್ಮಿಸಿ ಹೇಮಂತ್ ಕುಮಾರ್ ನೆನಪನ್ನು ಚಿರಕಾಲ ಉಳಿಸಲು ಯತ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುತ್ತೂರು: ’ಎಲ್ಲವೂ ವಿಧಿಯಾಟ. ನಾನು ಆ ಘಟನೆಯನ್ನೇ ಮರೆತಿದ್ದೇನೆ. ಮರೆತು ಹೋದದ್ದನ್ನು ಮತ್ತೆ ಕೆಣಕಿ ನೆನಪಿಸಿಕೊಳ್ಳಲು ಇಷ್ಟವಿಲ್ಲ’... <br /> <br /> 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಇಫ್ರೋ ಸಂಸ್ಥೆ ಸಾಫ್ಟ್ವೇರ್ ಎಂಜಿನಿಯರ್ ಹೇಮಂತ್ ಕುಮಾರ್ ಅವರ ತಂದೆ ಪುತ್ತೂರಿನ ಆನಂದ ಟೈಲರ್ ಅವರ ಬಾಯಿಂದ ಹೊರಬಂದ ನೋವಿನ ನುಡಿ ಇದೆ.<br /> <br /> ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿದ್ದ ಆರೋಪಿ ಒಸಾಮ ಬಿನ್ ಲಾಡೆನ್ ಸಾವಿನ ಸುದ್ದಿ ಹೊರಬಿದ್ದ ನಂತರ ಮಾತಿಗೆಳೆದಾಗ ಅವರು ಪ್ರತಿಕ್ರಿಯಿಸಿದ್ದಿಷ್ಟು.<br /> <br /> ’ಯಾರು ಸತ್ತರೂ ನನ್ನ ಮಗ ಇನ್ನು ಬದುಕಿ ಬರಲಾರ. ಮೆರೆತು ಹೋದ ಕಹಿ ಘಟನೆಯನ್ನು ಮತ್ತೆ ಕೆದಕಲು ಬಯಸುವುದಿಲ್ಲ. ಲಾಡೆನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲೂ ಇಷ್ಟಪಡುವುದಿಲ್ಲ’ ಎಂದು ಮಾತು ಮುಗಿಸಿದರು. <br /> ಆದರೆ, ಈಗಲೂ ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವ ಆನಂದ ಟೈಲರ್, ಪುತ್ತೂರಿನ ಬಲ್ಲವ ಸಭಾಭವನ ಬಳಿ ಸ್ಮಾರಕ ಭವನ ಮತ್ತು ಮುಖ್ಯರಸ್ತೆಯ ಎರಡೂ ಕಡೆ ಸ್ವಾಗತ ಕಮಾನು ನಿರ್ಮಿಸಿ ಹೇಮಂತ್ ಕುಮಾರ್ ನೆನಪನ್ನು ಚಿರಕಾಲ ಉಳಿಸಲು ಯತ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>