ಬೆಂಗಳೂರು: ಉದಯಭಾನು ಕಲಾಸಂಘವು (ಡಿ.9) ಭಾನುವಾರ ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ವರೆಗೆ ಅಶಕ್ತರು, ಅವಕಾಶವಂಚಿತರು ಹಾಗೂ ಕೊಳಚೆ ಪ್ರದೇಶದ ಜನರಿಗೆ ಉಚಿತ ಕಣ್ಣು ಪರೀಕ್ಷೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಹಾಗೂ ಉಚಿತ ದಂತ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ.
ವಿಳಾಸ: ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ. ಮಾಹಿತಿಗೆ ದೂ: 26609343.