ನಕ್ಸಲರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನೀಡಿದ್ದ ಗಡುವನ್ನು ಶುಕ್ರವಾರ ರಾತ್ರಿ 24 ಗಂಟೆ ವಿಸ್ತರಿಸಿದ ಬೆನ್ನಲ್ಲೆ ರಾಜ್ಯ ಸರ್ಕಾರ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೈದರಾಬಾದ್ ಮೂಲದ ಸಂಧಾನಕಾರರಾದ ಪ್ರೊ.ಸೋಮೇಶ್ವರರಾವ್ ಹಾಗೂ ಪ್ರೊ. ಹರ್ ಗೋಪಾಲ್ ಅವರೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಅವರ ಬರುವಿಕೆಗಾಗಿ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.