ನೋಡಿ ಸ್ವಾಮಿ ನಾವಿರೋದೇ ಹೀಗೆ..!: ಕುಂಕುಮ ಹಚ್ಚಲ್ಲ. ಹಚ್ಚಬಾರದು ಅಂತೇನೂ ಇಲ್ಲ
ಹೌದು ಸ್ವಾಮಿ, ನಾವು ಕುಂಕುಮ ಹಚ್ಚಲ್ಲ. ಹಚ್ಚಬಾರದು ಅಂತೇನೂ ಇಲ್ಲ. ಅದರ ಮೇಲೆ ಸಿಟ್ಟು, ತಿರಸ್ಕಾರವೇನೂ ಇಲ್ಲ. ಅದೊಂದು ಚಂದದ ಅಲಂಕಾರ, ಮುಖದ ಅಂದ ಹೆಚ್ಚಿಸುವಂಥದ್ದು... ಸೀರೆಯಂಥ ಸಾಂಪ್ರದಾಯಿಕ ದಿರಿಸು ಧರಿಸಿದಾಗಲಂತೂ ಕುಂಕುಮದ ಇರುವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಇದಷ್ಟೆ ಅದರ ಗುರುತು. ಜಾತಿ–ಧರ್ಮ–ಸಂಪ್ರದಾಯ–ಸಂಸ್ಕೃತಿ ಅಂತನ್ನುವು ದನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದಾಗ, ಅದೊಂದು ಅಪ್ಪಟ ಸಿಂಗಾರಕ್ಕೆ ಬಳಸುವ ಪುಡಿ.
ಹಾಗೆ ನೋಡಿದರೆ ನಮಗ್ಯಾರಿಗೂ ಕುಂಕುಮದ ಬಗ್ಗೆ ಸಮಸ್ಯೆ ಎನ್ನುವುದಿಲ್ಲ. ಕುಂಕುಮವೂ ಈ ಬಗ್ಗೆ ತಗಾದೆ ತೆಗೆದಿಲ್ಲ. ಯಾರೋ ದಾರಿಲಿ ಹೋಗುವವ ಬಂದು, ‘ಯಾಕಮ್ಮ ಕುಂಕುಮ ಇಟ್ಟಿಲ್ಲ? ಗಂಡ ಇದ್ದಾನೆ ತಾನೆ?’ ಅಂತ ಕಣ್ಣಗಲಿಸಿ ಕೇಳುವುದನ್ನು ನೋಡಿದರೆ ನಗು ಬರುತ್ತದೆ, ಮತ್ತೇನಿಲ್ಲ.Last Updated 10 ಮಾರ್ಚ್ 2023, 19:30 IST