ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಈ ಸೇವೆಗೆ ಚಾಲನೆ ನೀಡಿದ್ದಾರೆ ಎಂದು ಸಿಎಸ್ಸಿ ತಿಳಿಸಿದೆ. ‘ಹತ್ತಿರದ ಸಿಎಸ್ಸಿ ಕೇಂದ್ರದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಗ್ರಾಹಕರಿಗೆ ಸಾಧ್ಯವಾಗಲಿದೆ. ಸಿಸಿಟಿಎನ್ಎಸ್ (ಅಪರಾಧ ಮತ್ತು ಅಪರಾಧಿಯ ಜಾಡಿನ ಮೇಲೆ ಕಣ್ಣಿಡುವ ವ್ಯವಸ್ಥೆ) ಸೇವೆಗಳನ್ನು ಡಿಜಿಟಲ್ ಸೇವಾ ಪೋರ್ಟಲ್ ಜೊತೆ ಬೆಸೆಯುವಂತೆ ಎನ್ಸಿಆರ್ಬಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಸಿಎಸ್ಸಿ ಕೇಂದ್ರಗಳು ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿವೆ’ ಎಂದು ಪ್ರಕಟಣೆ ತಿಳಿಸಿದೆ.