ಕೃಷಿ ಸೆಸ್ ಹಣವನ್ನು ಹೇಗೆ ಬಳಸಲಾಗುತ್ತದೆ ಎಂಬ ಉಲ್ಲೇಖವೇ ಇಲ್ಲ. ₹ 12 ಲಕ್ಷ ಕೋಟಿ ಸಾಲ ಪಡೆಯುವ ಪ್ರಸ್ತಾವವಿದ್ದು, ಅದಕ್ಕೆ ಸಮರ್ಥನೆಗಳನ್ನೇ ಒದಗಿಸಿಲ್ಲ. ದೇಶದ 130 ಕೋಟಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಕ್ಕೆ ಅನುದಾನವನ್ನೇ ಒದಗಿಸಿಲ್ಲ. ಈ ಕುರಿತು ಬಣ್ಣನೆಯ ಮಾತುಗಳಷ್ಟೇ ಬಜೆಟ್ನಲ್ಲಿ ಇವೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.