<p class="title"><strong>ನವದೆಹಲಿ:</strong> ನಿರಂತರ ವಿದ್ಯುತ್ ಪೂರೈಸುವ ಗುರಿ ಸಾಧಿಸಲು ಮತ್ತು ಪೂರೈಕೆದಾರರನ್ನು ಹಾಗೂ ದರ ಆಯ್ಕೆಯ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ2020–2021ರ ಅವಧಿಗೆ ₹22,000 ಕೋಟಿ ಅನುದಾನವನ್ನು ಶನಿವಾರ ಮಂಡಿಸಿದ ಬಜೆಟ್ನಲ್ಲಿ ಒದಗಿಸಲಾಗಿದೆ.</p>.<p class="title">ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಮೀಟರ್ಗಳನ್ನು ಸ್ಮಾರ್ಟ್ ಮೀಟರ್ಗಳಾಗಿ ಪರಿವರ್ತಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸೂಚಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದರಿಂದಾಗಿ ಗ್ರಾಹಕರಿಗೆ ಸೇವಾ ಪೂರೈಕೆದಾರರ ಆಯ್ಕೆ ಮತ್ತು ಸೂಕ್ತ ವಿದ್ಯುತ್ ದರ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.</p>.<p class="title">ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಮೀಟರ್ನಿಂದ ಬಿಲ್ ನೀಡುವುದು ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯವಾಗಲಿದೆ. ಇದು ಸಾರ್ವಜನಿಕ ದಕ್ಷತೆಯನ್ನೂ ಸುಧಾರಿಸಲಿದೆ. ಇಂಧನ ಸಚಿವಾಲಯ ಸಹ ವಿದ್ಯುತ್ ದರ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಕೋರಿಕೆ ಸಲ್ಲಿಸಿದೆ.</p>.<p class="title">ಪ್ರತಿಯೊಂದೂ ಮನೆಗೆ ವಿದ್ಯುತ್ ಪೂರೈಸುವುದು ಸರ್ಕಾರದ ಪ್ರಮುಖ ಯಶಸ್ಸು ಎಂದು ಹೇಳಬಹುದು ಎಂದ ಸಚಿವರು, ಸೌಭಾಗ್ಯ ಯೋಜನೆ ಉಲ್ಲೇಖಿಸಿದರು. ಈ ಯೋಜನೆ ಅಡಿಯಲ್ಲಿ 2.66 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದುರ್ಗಮ ಪ್ರದೇಶಗಳಲ್ಲಿ ಮತ್ತು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿನ ಕೆಲವು ಮನೆಗಳನ್ನು ಹೊರತುಪಡಿಸಿ ಉಳಿದ ಕಡೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಹೇಳಿದರು.</p>.<p class="title">ಹಳೆಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡುವ ಮೂಲಕ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶುದ್ಧ ಗಾಳಿಯನ್ನು ಒದಗಿಸುವ ಕಾರ್ಯಕ್ರಮಕ್ಕಾಗಿ ₹4,400 ಕೋಟಿ ಅನುದಾನ ಒದಗಿಸಲಾಗಿದೆ. ಸ್ಥಗಿತಗೊಂಡಿರುವ ಉಷ್ಣ ವಿದ್ಯುತ್ ಸ್ಥಾವರಗಳ ಭೂಮಿಯನ್ನು ಪರ್ಯಾಯ ಉದ್ದೇಶಗಳಿಗೆ ಬಳಸಬಹುದು. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಪ್ರಯೋಜನಗಳನ್ನು ಒದಗಿಸಲು ಪರಿಸರ ಸಚಿವಾಲಯ ಮಾನದಂಡ ರೂಪಿಸಲಿದೆ ಎಂದು ಸಚಿವರು ತಿಳಿಸಿದರು.</p>.<p class="title">ನಿಗದಿತ ಮಟ್ಟಕ್ಕಿಂತ ಹೆಚ್ಚಿಗೆ ತ್ಯಾಜ್ಯ ಹೊರಸೂಸುವ ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳನ್ನು ರಾಜ್ಯಗಳು ಬಂದ್ ಮಾಡಬಹುದು.</p>.<p class="title">ವಿದ್ಯುತ್ ವಿತರಿಸುವ ಕಂಪನಿಗಳ (ಡಿಸ್ಕಾಮ್ಸ್) ಒತ್ತಡವನ್ನು ಪ್ರಸ್ತಾಪಿಸಿದ ಅವರು, ಸಾಲದ ಹೊರೆಯಲ್ಲಿರುವ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕಾಗಿ ಯಾವುದೇ ಹೊಸ ಅಥವಾ ಪರಿಷ್ಕೃತ ಯೋಜನೆ ಬಗ್ಗೆ ನಿರ್ದಿಷ್ಟವಾಗಿ ಅವರು ಉಲ್ಲೇಖಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ನಿರಂತರ ವಿದ್ಯುತ್ ಪೂರೈಸುವ ಗುರಿ ಸಾಧಿಸಲು ಮತ್ತು ಪೂರೈಕೆದಾರರನ್ನು ಹಾಗೂ ದರ ಆಯ್ಕೆಯ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ2020–2021ರ ಅವಧಿಗೆ ₹22,000 ಕೋಟಿ ಅನುದಾನವನ್ನು ಶನಿವಾರ ಮಂಡಿಸಿದ ಬಜೆಟ್ನಲ್ಲಿ ಒದಗಿಸಲಾಗಿದೆ.</p>.<p class="title">ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಮೀಟರ್ಗಳನ್ನು ಸ್ಮಾರ್ಟ್ ಮೀಟರ್ಗಳಾಗಿ ಪರಿವರ್ತಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸೂಚಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದರಿಂದಾಗಿ ಗ್ರಾಹಕರಿಗೆ ಸೇವಾ ಪೂರೈಕೆದಾರರ ಆಯ್ಕೆ ಮತ್ತು ಸೂಕ್ತ ವಿದ್ಯುತ್ ದರ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.</p>.<p class="title">ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಮೀಟರ್ನಿಂದ ಬಿಲ್ ನೀಡುವುದು ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯವಾಗಲಿದೆ. ಇದು ಸಾರ್ವಜನಿಕ ದಕ್ಷತೆಯನ್ನೂ ಸುಧಾರಿಸಲಿದೆ. ಇಂಧನ ಸಚಿವಾಲಯ ಸಹ ವಿದ್ಯುತ್ ದರ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಕೋರಿಕೆ ಸಲ್ಲಿಸಿದೆ.</p>.<p class="title">ಪ್ರತಿಯೊಂದೂ ಮನೆಗೆ ವಿದ್ಯುತ್ ಪೂರೈಸುವುದು ಸರ್ಕಾರದ ಪ್ರಮುಖ ಯಶಸ್ಸು ಎಂದು ಹೇಳಬಹುದು ಎಂದ ಸಚಿವರು, ಸೌಭಾಗ್ಯ ಯೋಜನೆ ಉಲ್ಲೇಖಿಸಿದರು. ಈ ಯೋಜನೆ ಅಡಿಯಲ್ಲಿ 2.66 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದುರ್ಗಮ ಪ್ರದೇಶಗಳಲ್ಲಿ ಮತ್ತು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿನ ಕೆಲವು ಮನೆಗಳನ್ನು ಹೊರತುಪಡಿಸಿ ಉಳಿದ ಕಡೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಹೇಳಿದರು.</p>.<p class="title">ಹಳೆಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡುವ ಮೂಲಕ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶುದ್ಧ ಗಾಳಿಯನ್ನು ಒದಗಿಸುವ ಕಾರ್ಯಕ್ರಮಕ್ಕಾಗಿ ₹4,400 ಕೋಟಿ ಅನುದಾನ ಒದಗಿಸಲಾಗಿದೆ. ಸ್ಥಗಿತಗೊಂಡಿರುವ ಉಷ್ಣ ವಿದ್ಯುತ್ ಸ್ಥಾವರಗಳ ಭೂಮಿಯನ್ನು ಪರ್ಯಾಯ ಉದ್ದೇಶಗಳಿಗೆ ಬಳಸಬಹುದು. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಪ್ರಯೋಜನಗಳನ್ನು ಒದಗಿಸಲು ಪರಿಸರ ಸಚಿವಾಲಯ ಮಾನದಂಡ ರೂಪಿಸಲಿದೆ ಎಂದು ಸಚಿವರು ತಿಳಿಸಿದರು.</p>.<p class="title">ನಿಗದಿತ ಮಟ್ಟಕ್ಕಿಂತ ಹೆಚ್ಚಿಗೆ ತ್ಯಾಜ್ಯ ಹೊರಸೂಸುವ ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳನ್ನು ರಾಜ್ಯಗಳು ಬಂದ್ ಮಾಡಬಹುದು.</p>.<p class="title">ವಿದ್ಯುತ್ ವಿತರಿಸುವ ಕಂಪನಿಗಳ (ಡಿಸ್ಕಾಮ್ಸ್) ಒತ್ತಡವನ್ನು ಪ್ರಸ್ತಾಪಿಸಿದ ಅವರು, ಸಾಲದ ಹೊರೆಯಲ್ಲಿರುವ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕಾಗಿ ಯಾವುದೇ ಹೊಸ ಅಥವಾ ಪರಿಷ್ಕೃತ ಯೋಜನೆ ಬಗ್ಗೆ ನಿರ್ದಿಷ್ಟವಾಗಿ ಅವರು ಉಲ್ಲೇಖಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>