<p><strong>ನವದೆಹಲಿ:</strong> ಕೃಷಿಯನ್ನು ಅಭಿವೃದ್ಧಿಯ ಮೊದಲ ಎಂಜಿನ್ ಎಂದು ಬಣ್ಣಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರಕ್ಕೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. </p><p>ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆ: ಕಡಿಮೆ ಉತ್ಪಾದಕತೆ, ಕಡಿಮೆ ಬೆಳೆ ವೈವಿಧ್ಯ ಮತ್ತು ಕಡಿಮೆ ಸಾಲದ ಮಾನದಂಡಗಳಿರುವ ದೇಶದ 100 ಜಿಲ್ಲೆಗಳಲ್ಲಿ ಆಯಾ ರಾಜ್ಯಗಳ ಪಾಲುದಾರಿಕೆಯೊಂದಿಗೆ ಯೋಜನೆ ಜಾರಿಗೊಳಿಸಲಾಗುವುದು. ಉತ್ಪಾದಕತೆ, ಬೆಳೆ ವೈವಿಧ್ಯ ಹೆಚ್ಚಿಸುವುದು, ಪಂಚಾಯಿತಿ/ಬ್ಲಾಕ್ ಮಟ್ಟದಲ್ಲಿ ದಾಸ್ತಾನು ಕೇಂದ್ರಗಳ ಸ್ಥಾಪನೆ, ನೀರಾವರಿ ಸೌಲಭ್ಯ ಮತ್ತು ಸಾಲ ಸೌಲಭ್ಯ ಹೆಚ್ಚಿಸುವ ಮೂಲಕ 1.7 ಕೋಟಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.</p><p><strong>ಧಾನ್ಯಗಳಲ್ಲಿ ಆತ್ಮನಿರ್ಭರತೆ: </strong>ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಗಾಗಿ ಎಣ್ಣೆಬೀಜಗಳ ಉತ್ಪಾದನೆಗೆ ಬೆಂಬಲ ನೀಡಲಾಗುವುದು; ತೊಗರಿ, ಉದ್ದು, ಮಸೂರ ಹಾಗೂ ಬೇಳೆಕಾಳು ಉತ್ಪಾದನೆ ಹೆಚ್ಚಿಸಲು ಆರು ವರ್ಷಗಳ ಕಾರ್ಯಯೋಜನೆ ರೂಪಿಸಲಾಗುವುದು. ನಾಫೆಡ್ ಮತ್ತು ಎನ್ಸಿಸಿಎಫ್ ಮೂಲಕ ರೈತರಿಂದ 4 ವರ್ಷ ಬೇಳೆ–ಕಾಳುಗಳನ್ನು ಖರೀದಿಸಲಾಗುವುದು<strong>.</strong></p><p><strong>ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಮಿತಿ ಹೆಚ್ಚಳ: </strong>ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಬ್ಸಿಡಿ ಆಧಾರಿತವಾದ ಅಲ್ಪಾವಧಿ ಸಾಲದ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ ಮಾಡುವ ಈ ಮೂಲಕ 7.7 ಕೋಟಿ ರೈತರಿಗೆ ನೆರವು ನೀಡಲಾಗುವುದು.</p><p><strong>ಹೆಚ್ಚು ಇಳುವರಿಯ ಬೀಜಗಳ ಸಂಶೋಧನೆ: </strong>ಕೀಟನಿರೋಧಕವಾದ, ಪ್ರತಿಕೂಲ ಹವಾಮಾನ ಎದುರಿಸಿಯೂ ತಾಳಿಕೆಯ ಗುಣವಿರುವ, ಹೆಚ್ಚು ಇಳುವರಿ ನೀಡುವ ಬೀಜಗಳ ಉತ್ಪಾದನೆಗೆ ಸಂಶೋಧನಾ ವ್ಯವಸ್ಥೆಯೊಂದನ್ನು ರೂಪಿಸಿ, 100 ಬೀಜತಳಿಗಳನ್ನು ಮಾರುಕಟ್ಟೆಗೆ ಬಿಡಲಾಗುವುದು. </p><p><strong>ಬಿಹಾರದಲ್ಲಿ ಮಖಾನಾ ಮಂಡಳಿ: </strong>ಮಖಾನಾ (ಕಮಲದ ಬೀಜ) ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪಿಸಲಾಗುವುದು.</p><p><strong>ತರಕಾರಿ, ಹಣ್ಣುಗಳಿಗಾಗಿ ಸಮಗ್ರ ಕಾರ್ಯಕ್ರಮ: </strong>ತರಕಾರಿ, ಹಣ್ಣು ಮತ್ತು ‘ಶ್ರೀ ಅನ್ನ’ (ಸಿರಿಧಾನ್ಯ) ಉತ್ಪಾದನೆ, ಸಂಸ್ಕರಣೆ ಮತ್ತು ಪೂರೈಕೆಗಾಗಿ ಹಾಗೂ ರೈತರಿಗೆ ಉತ್ತಮ ಬೆಳೆ ದೊರೆಯುವಂತೆ ಮಾಡಲು ರಾಜ್ಯಗಳ ಪಾಲುದಾರಿಕೆಯೊಂದಿಗೆ ಸಮಗ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.<strong> </strong></p><p><strong>5 ವರ್ಷದ ಹತ್ತಿ ಕಾರ್ಯಕ್ರಮ:</strong> ಭಾರತದ ಜವಳಿ ಉದ್ಯಮದ 5ಎಫ್ ಗುರಿಗೆ ತಕ್ಕಂತೆ ಹತ್ತಿಯ ವೈವಿಧ್ಯಮಯ ತಳಿಗಳ ಉತ್ಪಾದಕತೆ ಹೆಚ್ಚಿಸಲು ಐದು ವರ್ಷಗಳ ಕಾರ್ಯಕ್ರಮ ರೂಪಿಸಲಾಗುವುದು.</p><p><strong>ಮೀನುಗಾರಿಕೆ:</strong> ಭಾರತದ ನಿರ್ದಿಷ್ಟ ಆರ್ಥಿಕ ವಲಯಗಳಲ್ಲಿ ಮತ್ತು ಅಂಡಮಾನ್, ನಿಕೋಬಾರ್, ಲಕ್ಷದ್ವೀಪ ಸೇರಿದಂತೆ ದೇಶದ ಗಡಿಗಳಾಚೆಗಿನ ಸಮುದ್ರದಲ್ಲಿ ಸುಸ್ಥಿರ ಮೀನುಗಾರಿಕೆಗೆ ಒಂದು ಚೌಕಟ್ಟು ರೂಪಿಸುವು<strong>ದು.</strong></p>.<p><strong>ಎಂಎಸ್ಪಿ ಪ್ರಸ್ತಾಪ ಇಲ್ಲ</strong></p><p>ಬಜೆಟ್ ಅನ್ನು ಹಣಕಾಸು ಸಚಿವರು ಪ್ರಾರಂಭಿಸಿದ್ದೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವ ಮೂಲಕ. ಆದರೆ, ರೈತರ ದೀರ್ಘಾವಧಿ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ, ಸಾಲ ಮನ್ನಾ ಬಗ್ಗೆ ಏನೊಂದನ್ನೂ ಅವರು ಪ್ರಸ್ತಾಪಿಸಿಲ್ಲ. </p><p>‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ಬಜೆಟ್ ಶುರುಮಾಡಿದರಷ್ಟೆ. ಆದರೆ, ಎಂಎಸ್ಪಿಗೆ ಕಾನೂನು ಖಾತರಿ ನೀಡಬೇಕು ಎನ್ನುವುದೂ ಸೇರಿ ರೈತರ ಬೇಡಿಕೆಗಳಿಗೆ ಅವರು ಪೂರ್ಣಪ್ರಮಾಣದಲ್ಲಿ ಮೌನ ತಾಳಿದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. </p>.Union Budget 2025: ಯಾವುದು ಇಳಿಕೆ, ಯಾವುದು ಏರಿಕೆ?.Budget 2025: ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? ಇಲ್ಲಿದೆ ಮಾಹಿತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೃಷಿಯನ್ನು ಅಭಿವೃದ್ಧಿಯ ಮೊದಲ ಎಂಜಿನ್ ಎಂದು ಬಣ್ಣಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರಕ್ಕೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. </p><p>ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆ: ಕಡಿಮೆ ಉತ್ಪಾದಕತೆ, ಕಡಿಮೆ ಬೆಳೆ ವೈವಿಧ್ಯ ಮತ್ತು ಕಡಿಮೆ ಸಾಲದ ಮಾನದಂಡಗಳಿರುವ ದೇಶದ 100 ಜಿಲ್ಲೆಗಳಲ್ಲಿ ಆಯಾ ರಾಜ್ಯಗಳ ಪಾಲುದಾರಿಕೆಯೊಂದಿಗೆ ಯೋಜನೆ ಜಾರಿಗೊಳಿಸಲಾಗುವುದು. ಉತ್ಪಾದಕತೆ, ಬೆಳೆ ವೈವಿಧ್ಯ ಹೆಚ್ಚಿಸುವುದು, ಪಂಚಾಯಿತಿ/ಬ್ಲಾಕ್ ಮಟ್ಟದಲ್ಲಿ ದಾಸ್ತಾನು ಕೇಂದ್ರಗಳ ಸ್ಥಾಪನೆ, ನೀರಾವರಿ ಸೌಲಭ್ಯ ಮತ್ತು ಸಾಲ ಸೌಲಭ್ಯ ಹೆಚ್ಚಿಸುವ ಮೂಲಕ 1.7 ಕೋಟಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.</p><p><strong>ಧಾನ್ಯಗಳಲ್ಲಿ ಆತ್ಮನಿರ್ಭರತೆ: </strong>ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಗಾಗಿ ಎಣ್ಣೆಬೀಜಗಳ ಉತ್ಪಾದನೆಗೆ ಬೆಂಬಲ ನೀಡಲಾಗುವುದು; ತೊಗರಿ, ಉದ್ದು, ಮಸೂರ ಹಾಗೂ ಬೇಳೆಕಾಳು ಉತ್ಪಾದನೆ ಹೆಚ್ಚಿಸಲು ಆರು ವರ್ಷಗಳ ಕಾರ್ಯಯೋಜನೆ ರೂಪಿಸಲಾಗುವುದು. ನಾಫೆಡ್ ಮತ್ತು ಎನ್ಸಿಸಿಎಫ್ ಮೂಲಕ ರೈತರಿಂದ 4 ವರ್ಷ ಬೇಳೆ–ಕಾಳುಗಳನ್ನು ಖರೀದಿಸಲಾಗುವುದು<strong>.</strong></p><p><strong>ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಮಿತಿ ಹೆಚ್ಚಳ: </strong>ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಬ್ಸಿಡಿ ಆಧಾರಿತವಾದ ಅಲ್ಪಾವಧಿ ಸಾಲದ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ ಮಾಡುವ ಈ ಮೂಲಕ 7.7 ಕೋಟಿ ರೈತರಿಗೆ ನೆರವು ನೀಡಲಾಗುವುದು.</p><p><strong>ಹೆಚ್ಚು ಇಳುವರಿಯ ಬೀಜಗಳ ಸಂಶೋಧನೆ: </strong>ಕೀಟನಿರೋಧಕವಾದ, ಪ್ರತಿಕೂಲ ಹವಾಮಾನ ಎದುರಿಸಿಯೂ ತಾಳಿಕೆಯ ಗುಣವಿರುವ, ಹೆಚ್ಚು ಇಳುವರಿ ನೀಡುವ ಬೀಜಗಳ ಉತ್ಪಾದನೆಗೆ ಸಂಶೋಧನಾ ವ್ಯವಸ್ಥೆಯೊಂದನ್ನು ರೂಪಿಸಿ, 100 ಬೀಜತಳಿಗಳನ್ನು ಮಾರುಕಟ್ಟೆಗೆ ಬಿಡಲಾಗುವುದು. </p><p><strong>ಬಿಹಾರದಲ್ಲಿ ಮಖಾನಾ ಮಂಡಳಿ: </strong>ಮಖಾನಾ (ಕಮಲದ ಬೀಜ) ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪಿಸಲಾಗುವುದು.</p><p><strong>ತರಕಾರಿ, ಹಣ್ಣುಗಳಿಗಾಗಿ ಸಮಗ್ರ ಕಾರ್ಯಕ್ರಮ: </strong>ತರಕಾರಿ, ಹಣ್ಣು ಮತ್ತು ‘ಶ್ರೀ ಅನ್ನ’ (ಸಿರಿಧಾನ್ಯ) ಉತ್ಪಾದನೆ, ಸಂಸ್ಕರಣೆ ಮತ್ತು ಪೂರೈಕೆಗಾಗಿ ಹಾಗೂ ರೈತರಿಗೆ ಉತ್ತಮ ಬೆಳೆ ದೊರೆಯುವಂತೆ ಮಾಡಲು ರಾಜ್ಯಗಳ ಪಾಲುದಾರಿಕೆಯೊಂದಿಗೆ ಸಮಗ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.<strong> </strong></p><p><strong>5 ವರ್ಷದ ಹತ್ತಿ ಕಾರ್ಯಕ್ರಮ:</strong> ಭಾರತದ ಜವಳಿ ಉದ್ಯಮದ 5ಎಫ್ ಗುರಿಗೆ ತಕ್ಕಂತೆ ಹತ್ತಿಯ ವೈವಿಧ್ಯಮಯ ತಳಿಗಳ ಉತ್ಪಾದಕತೆ ಹೆಚ್ಚಿಸಲು ಐದು ವರ್ಷಗಳ ಕಾರ್ಯಕ್ರಮ ರೂಪಿಸಲಾಗುವುದು.</p><p><strong>ಮೀನುಗಾರಿಕೆ:</strong> ಭಾರತದ ನಿರ್ದಿಷ್ಟ ಆರ್ಥಿಕ ವಲಯಗಳಲ್ಲಿ ಮತ್ತು ಅಂಡಮಾನ್, ನಿಕೋಬಾರ್, ಲಕ್ಷದ್ವೀಪ ಸೇರಿದಂತೆ ದೇಶದ ಗಡಿಗಳಾಚೆಗಿನ ಸಮುದ್ರದಲ್ಲಿ ಸುಸ್ಥಿರ ಮೀನುಗಾರಿಕೆಗೆ ಒಂದು ಚೌಕಟ್ಟು ರೂಪಿಸುವು<strong>ದು.</strong></p>.<p><strong>ಎಂಎಸ್ಪಿ ಪ್ರಸ್ತಾಪ ಇಲ್ಲ</strong></p><p>ಬಜೆಟ್ ಅನ್ನು ಹಣಕಾಸು ಸಚಿವರು ಪ್ರಾರಂಭಿಸಿದ್ದೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವ ಮೂಲಕ. ಆದರೆ, ರೈತರ ದೀರ್ಘಾವಧಿ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ, ಸಾಲ ಮನ್ನಾ ಬಗ್ಗೆ ಏನೊಂದನ್ನೂ ಅವರು ಪ್ರಸ್ತಾಪಿಸಿಲ್ಲ. </p><p>‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ಬಜೆಟ್ ಶುರುಮಾಡಿದರಷ್ಟೆ. ಆದರೆ, ಎಂಎಸ್ಪಿಗೆ ಕಾನೂನು ಖಾತರಿ ನೀಡಬೇಕು ಎನ್ನುವುದೂ ಸೇರಿ ರೈತರ ಬೇಡಿಕೆಗಳಿಗೆ ಅವರು ಪೂರ್ಣಪ್ರಮಾಣದಲ್ಲಿ ಮೌನ ತಾಳಿದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. </p>.Union Budget 2025: ಯಾವುದು ಇಳಿಕೆ, ಯಾವುದು ಏರಿಕೆ?.Budget 2025: ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? ಇಲ್ಲಿದೆ ಮಾಹಿತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>