<p><strong>ನವದೆಹಲಿ:</strong> ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ 2020-21ನೇ ಸಾಲಿನ ಬಜೆಟ್ನಲ್ಲಿ ದೇಶದ ಆದಾಯವನ್ನು ಉತ್ತೇಜನಗೊಳಿಸುವ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತುಸಾಮಾಜಿಕ ಕಾಳಜಿ ಈ ಮೂರು ಮೂಲಸೂತ್ರಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಸಚಿವೆ ಹೇಳಿದ್ದಾರೆ.</p>.<p>ಅಂದಹಾಗೆ ಈಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಮತ್ತು ಯಾವುದು ಕಡೆಗಣನೆಗೆ ಒಳಗಾಗಿದೆ ಎಂಬುದರ ಮಾಹಿತಿ ಇಲ್ಲಿದೆ.</p>.<p><strong>ಈ ಕ್ಷೇತ್ರಗಳಿಗೆ ಸಿಕ್ಕಿದೆ ಸಿಂಹಪಾಲು</strong></p>.<p><strong>ಸಾರಿಗೆ ಸೌಕರ್ಯ</strong></p>.<p>ಭಾರತದ ಹೆದ್ದಾರಿಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆಗಾಗಿ ₹1.7 ಲಕ್ಷಕೋಟಿಅನುದಾನ ನೀಡಲಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಮೂಲಕ ಆದಾಯ ಕ್ರೋಡೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.</p>.<p><strong>ಯಾರಿಗೆ ಲಾಭ?:</strong>ಎಲ್ ಅಂಡ್ ಟಿ , ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಮತ್ತು ಐಆರ್ಬಿ ಇನ್ಫ್ರಾ</p>.<p><strong>ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ</strong></p>.<p>ಮೊಬೈಲ್ ಫೋನ್, ಎಲೆಕ್ರ್ಟಾನಿಕ್ ಉಪಕರಣ, ಸೆಮಿ ಕಂಡಕ್ಟರ್ ನಿರ್ಮಾಣ ಸೇರಿದಂತೆ ವೈದ್ಯಕೀಯ ಸಾಧನ ನಿರ್ಮಾಣ ಕಂಪನಿಗಳಿಗೆ ಬಜೆಟ್ ಉತ್ತಮ ಪ್ರೋತ್ಸಾಹ ನೀಡಿದೆ.</p>.<p><strong>ಯಾರಿಗೆ ಲಾಭ?:</strong>ಡಿಕ್ಸನ್ ಟೆಕ್ನಾಲಜಿ, ಆಂಬರ್ ಎಂಟರ್ಪ್ರೈಸಸ್, ಸಬ್ರೋಸ್</p>.<p><strong>ಗ್ರಾಮೀಣ ಭಾರತ</strong></p>.<p>ಕೃಷಿ ಮತ್ತು ಗ್ರಾಮೀಣ ವಲಯಕ್ಕೆ ₹ 2.83 ಲಕ್ಷ ಕೋಟಿಅನುದಾನ ಘೋಷಿಸಲಾಗಿದೆ. ಆದಾಗ್ಯೂ ಮುಂದಿನ ವರ್ಷಕ್ಕೆ ಕೃಷಿ ಸಾಲ ₹ 15 ಲಕ್ಷ ಕೋಟಿ ಗುರಿಯನ್ನಿರಿಸಲಾಗಿದೆ. ಮತ್ಸ್ಯೋದ್ಯಮವನ್ನು ವಿಸ್ತರಿಸುವ ಯೋಜನೆಯನ್ನು ಸರ್ಕಾರ ಪ್ರಸ್ತಾಪ ಮಾಡಿದ್ದು, ಮತ್ಸ್ಯೋದ್ಯಮಿಗಳ 500 ಸಂಘಟನೆಯನ್ನು ರೂಪಿಸಲಿದೆ.</p>.<p><strong>ಯಾರಿಗೆ ಲಾಭ?:</strong> ಅವಾಂತಿ ಫೀಡ್ಸ್, ಅಪೆಕ್ಸ್ ಫ್ರೋಜನ್ ಫುಡ್ಸ್ಮತ್ತು ವಾಟರ್ಬೇಸ್</p>.<p>ಆಹಾರ ಸಾಮಾಗ್ರಿಗಳು ಕೆಡದಂತೆ ಸಾಗಣೆ ಮಾಡಲು ಹವಾ ನಿಯಂತ್ರಿತ ಬೋಗಿಗಳನ್ನು ರೈಲಿನಲ್ಲಿ ಒದಗಿಸಲಾಗುವುದು. ಈ ಮೂಲಕ ಕಂಟೇನರ್ಕಾರ್ಪೊರೇಷನ್ ಆಫ್ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದೆ. ಗ್ರಾಹಕರ ಸರಕುಗಳ ಸೂಚ್ಯಂಕ ವೇಗವಾಗಿ ಪುಟಿದೇಳುತ್ತಿದ್ದು ಇಮಾಮಿ, ಹಿಂದೂಸ್ತಾನ್ ಯೂನಿಲಿವರ್, ಡಾಬರ್, ಟಾಟಾ ಗ್ಲೋಬಲ್ ಹುರುಪುಗೊಳ್ಳಲಿದೆ.</p>.<p><strong>ನೀರು</strong></p>.<p>ನೀರಿನ ಅಭಾವವಿರುವ ಜಿಲ್ಲೆಗಳಿಗೆ ಸಹಾಯವಾಗುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ನೀರು ಮತ್ತು ಒಳಚರಂಡಿ ವ್ಯವಸ್ಥೆ ವಿನ್ಯಾಸ ಮತ್ತು ನಿರ್ಮಾಣ ಸಂಸ್ಥೆಯಾo ವಿಎ ಟೆಕ್ ವಾಬ್ಯಾಗ್ ಲಿಮಿಟೆಡ್ ಇದರ ಪ್ರಯೋಜನ ಪಡೆಯಲಿದೆ.</p>.<p>ರೈತರು ಸೋಲಾರ್ ಪಂಪ್ ಅಳವಡಿಸಲಿರುವ ಯೋಜನೆಯನ್ನು ಘೋಷಿಸುತ್ತಿದ್ದಂತೆ ಶಕ್ತಿ ಪಂಪ್ಸ್ ಲಿಮಿಟೆಡ್ ಇಂಡಿಯಾ ಕಂಪನಿ ಷೇರುಪೇಟೆಯಲ್ಲಿ ಚೇತರಿಕೆ ಕಂಡಿತು.</p>.<p>2024ರ ವೇಳೆಗೆ ದೇಶದ ಮನೆಮನೆಗಳಿಗೆ ಪೈಪ್ ನೀರು ಸರಬರಾಜು ಮಾಡುವ ಯೋಜನೆ ಘೋಷಿಸಲಾಗಿದೆ. ಇದಕ್ಕಾಗಿ ₹ 3.6 ಲಕ್ಷ ಕೋಟಿ ಹೂಡಿಕೆ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.</p>.<p><strong>ಯಾರಿಗೆ ಲಾಭ?:</strong>ಜೈನ್ ಇರಿಗೇಷನ್ ಸಿಸ್ಟಮ್ಸ್ ಲಿಮಿಟೆಡ್, ಕೆಎಸ್ಬಿ ಲಿಮಿಟೆಡ್, ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ , ಜೆ.ಕೆ ಅಗ್ರಿ ಜೆನೆಟಿಕ್ಸ್ ಲಿಮಿಟೆಡ್, ಪಿಐ ಇಂಡಸ್ಟ್ರೀಸ್.</p>.<p><strong>ಕ್ಲೀನ್ ಇಂಡಿಯಾ ಮಿಷನ್ಗೆ ₹ 12,300 ಕೋಟಿಮೀಸಲು</strong></p>.<p><strong>ಯಾರಿಗೆ ಲಾಭ?:</strong> ಹಿಂದೂಸ್ತಾನ್ ಯೂನಿಲಿವರ್, ಪ್ರೋಕ್ಟರ್ ಅಂಡ್ ಗ್ಯಾಂಬಲ್, ಗೋದ್ರೇಜ್.</p>.<p><strong>ಟೆಲಿಕಾಂ</strong></p>.<p>ಗ್ರಾಮಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ಕಲ್ಪಿಸಲು ಭಾರತ್ ನೆಟ್ ಅಭಿವೃದ್ಧಿ ಪಡಿಸಲಾಗುವುದು</p>.<p><strong>ಯಾರಿಗೆ ಲಾಭ?:</strong>ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಎಫ್ಸಿಎಲ್ ಲಿಮಿಟೆಡ್</p>.<p><strong>ಆನ್ಲೈನ್ ಶಿಕ್ಷಣ</strong></p>.<p>ಶಿಕ್ಷಣ ವಲಯಕ್ಕೆ ₹ 99,300 ಕೋಟಿಮೀಸಲಿಡಲಾಗಿದೆ. ಅದೇ ರೀತಿ ಆನ್ಲೈನ್ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಾಗಿದೆ.</p>.<p><strong>ಯಾರಿಗೆ ಲಾಭ?:</strong> ಎನ್ಐಐಟಿ ಮತ್ತು ಎಂಟಿ ಎಡ್ಯುಕೇರ್</p>.<p><strong>ಐಟಿ ವಲಯ</strong></p>.<p>ಡೇಟಾ ಸೆಂಟರ್ ಪಾರ್ಕ್ಗಳ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.</p>.<p><strong>ಯಾರಿಗೆ ಲಾಭ?:</strong>ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್ಸಿ ಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಎಲ್ಟಿಐ, ಮೈಂಡ್ ಟ್ರೀಸ್,ಪೆರ್ಸಿಸ್ಟೆಂಟ್ ಮತ್ತು ಹೆಕ್ಸಾವೇರ್. ಅದಾನಿ ಎಂಟರ್ಪ್ರೈಸಸ್ಗೂ ಇದರಿಂದ ಲಾಭವಾಗಲಿದೆ.</p>.<p><strong>ಪೈಪ್ಲೈನ್ ಮತ್ತು ನಗರ ಅನಿಲ ಪೂರೈಕೆದಾರರು</strong></p>.<p>ರಾಷ್ಟ್ರೀಯ ಗ್ಯಾಸ್ಗ್ರಿಡ್ನ್ನು 16,200 ಕಿಮೀಗಿಂತ 27,000 ಕಿಮೀವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.</p>.<p><strong>ಯಾರಿಗೆ ಲಾಭ?:</strong> ವೆಲ್ಸ್ಪನ್ ಕಾರ್ಪೊರೇಷನ್, ಮಹಾರಾಷ್ಟ್ರ ಸೀಮ್ಲೆಸ್ ಲಿಮಿಟೆಡ್, ರತ್ನಮಣಿ ಮೆಟಲ್ಸ್ ಅಂಡ್ ಟ್ಯೂಬ್ಸ್, ಜಿಂದಾಲ್ ಸೋ, ಮ್ಯಾನ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್.ಗ್ಯಾಸ್ ಗ್ರಿಡ್ ವಿಸ್ತರಣೆಯಿಂದಾಗಿ ಐಡಿಎಲ್, ಎಂಜಿಎಲ್ ಮತ್ತು ಗುಜರಾತ್ ಗ್ಯಾಸ್ಗೆ ಲಾಭವಾಗಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/lic-comes-to-share-market-soon-702240.html" target="_blank">Explainer | ಷೇರುಪೇಟೆಗೆ ಬರಲಿದೆ ₹ 31 ಲಕ್ಷ ಕೋಟಿ ಮೌಲ್ಯದ ಸಂಸ್ಥೆ ಎಲ್ಐಸಿ</a></p>.<p><strong>ನಷ್ಟ ಯಾರಿಗೆ?</strong><br />ವಿಮೆ<br />ಸರ್ಕಾರಿ ಸ್ವಾಮ್ಯದ ಬ್ಯಾಂಕ್<br />ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ<br />ರಸಗೊಬ್ಬರ ಕಂಪನಿ<br />ಸರಕು ಸಾಗಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ 2020-21ನೇ ಸಾಲಿನ ಬಜೆಟ್ನಲ್ಲಿ ದೇಶದ ಆದಾಯವನ್ನು ಉತ್ತೇಜನಗೊಳಿಸುವ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತುಸಾಮಾಜಿಕ ಕಾಳಜಿ ಈ ಮೂರು ಮೂಲಸೂತ್ರಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಸಚಿವೆ ಹೇಳಿದ್ದಾರೆ.</p>.<p>ಅಂದಹಾಗೆ ಈಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಮತ್ತು ಯಾವುದು ಕಡೆಗಣನೆಗೆ ಒಳಗಾಗಿದೆ ಎಂಬುದರ ಮಾಹಿತಿ ಇಲ್ಲಿದೆ.</p>.<p><strong>ಈ ಕ್ಷೇತ್ರಗಳಿಗೆ ಸಿಕ್ಕಿದೆ ಸಿಂಹಪಾಲು</strong></p>.<p><strong>ಸಾರಿಗೆ ಸೌಕರ್ಯ</strong></p>.<p>ಭಾರತದ ಹೆದ್ದಾರಿಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆಗಾಗಿ ₹1.7 ಲಕ್ಷಕೋಟಿಅನುದಾನ ನೀಡಲಾಗಿದೆ. ಹೆದ್ದಾರಿಗಳ ಅಭಿವೃದ್ಧಿ ಮೂಲಕ ಆದಾಯ ಕ್ರೋಡೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.</p>.<p><strong>ಯಾರಿಗೆ ಲಾಭ?:</strong>ಎಲ್ ಅಂಡ್ ಟಿ , ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಮತ್ತು ಐಆರ್ಬಿ ಇನ್ಫ್ರಾ</p>.<p><strong>ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ</strong></p>.<p>ಮೊಬೈಲ್ ಫೋನ್, ಎಲೆಕ್ರ್ಟಾನಿಕ್ ಉಪಕರಣ, ಸೆಮಿ ಕಂಡಕ್ಟರ್ ನಿರ್ಮಾಣ ಸೇರಿದಂತೆ ವೈದ್ಯಕೀಯ ಸಾಧನ ನಿರ್ಮಾಣ ಕಂಪನಿಗಳಿಗೆ ಬಜೆಟ್ ಉತ್ತಮ ಪ್ರೋತ್ಸಾಹ ನೀಡಿದೆ.</p>.<p><strong>ಯಾರಿಗೆ ಲಾಭ?:</strong>ಡಿಕ್ಸನ್ ಟೆಕ್ನಾಲಜಿ, ಆಂಬರ್ ಎಂಟರ್ಪ್ರೈಸಸ್, ಸಬ್ರೋಸ್</p>.<p><strong>ಗ್ರಾಮೀಣ ಭಾರತ</strong></p>.<p>ಕೃಷಿ ಮತ್ತು ಗ್ರಾಮೀಣ ವಲಯಕ್ಕೆ ₹ 2.83 ಲಕ್ಷ ಕೋಟಿಅನುದಾನ ಘೋಷಿಸಲಾಗಿದೆ. ಆದಾಗ್ಯೂ ಮುಂದಿನ ವರ್ಷಕ್ಕೆ ಕೃಷಿ ಸಾಲ ₹ 15 ಲಕ್ಷ ಕೋಟಿ ಗುರಿಯನ್ನಿರಿಸಲಾಗಿದೆ. ಮತ್ಸ್ಯೋದ್ಯಮವನ್ನು ವಿಸ್ತರಿಸುವ ಯೋಜನೆಯನ್ನು ಸರ್ಕಾರ ಪ್ರಸ್ತಾಪ ಮಾಡಿದ್ದು, ಮತ್ಸ್ಯೋದ್ಯಮಿಗಳ 500 ಸಂಘಟನೆಯನ್ನು ರೂಪಿಸಲಿದೆ.</p>.<p><strong>ಯಾರಿಗೆ ಲಾಭ?:</strong> ಅವಾಂತಿ ಫೀಡ್ಸ್, ಅಪೆಕ್ಸ್ ಫ್ರೋಜನ್ ಫುಡ್ಸ್ಮತ್ತು ವಾಟರ್ಬೇಸ್</p>.<p>ಆಹಾರ ಸಾಮಾಗ್ರಿಗಳು ಕೆಡದಂತೆ ಸಾಗಣೆ ಮಾಡಲು ಹವಾ ನಿಯಂತ್ರಿತ ಬೋಗಿಗಳನ್ನು ರೈಲಿನಲ್ಲಿ ಒದಗಿಸಲಾಗುವುದು. ಈ ಮೂಲಕ ಕಂಟೇನರ್ಕಾರ್ಪೊರೇಷನ್ ಆಫ್ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದೆ. ಗ್ರಾಹಕರ ಸರಕುಗಳ ಸೂಚ್ಯಂಕ ವೇಗವಾಗಿ ಪುಟಿದೇಳುತ್ತಿದ್ದು ಇಮಾಮಿ, ಹಿಂದೂಸ್ತಾನ್ ಯೂನಿಲಿವರ್, ಡಾಬರ್, ಟಾಟಾ ಗ್ಲೋಬಲ್ ಹುರುಪುಗೊಳ್ಳಲಿದೆ.</p>.<p><strong>ನೀರು</strong></p>.<p>ನೀರಿನ ಅಭಾವವಿರುವ ಜಿಲ್ಲೆಗಳಿಗೆ ಸಹಾಯವಾಗುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ನೀರು ಮತ್ತು ಒಳಚರಂಡಿ ವ್ಯವಸ್ಥೆ ವಿನ್ಯಾಸ ಮತ್ತು ನಿರ್ಮಾಣ ಸಂಸ್ಥೆಯಾo ವಿಎ ಟೆಕ್ ವಾಬ್ಯಾಗ್ ಲಿಮಿಟೆಡ್ ಇದರ ಪ್ರಯೋಜನ ಪಡೆಯಲಿದೆ.</p>.<p>ರೈತರು ಸೋಲಾರ್ ಪಂಪ್ ಅಳವಡಿಸಲಿರುವ ಯೋಜನೆಯನ್ನು ಘೋಷಿಸುತ್ತಿದ್ದಂತೆ ಶಕ್ತಿ ಪಂಪ್ಸ್ ಲಿಮಿಟೆಡ್ ಇಂಡಿಯಾ ಕಂಪನಿ ಷೇರುಪೇಟೆಯಲ್ಲಿ ಚೇತರಿಕೆ ಕಂಡಿತು.</p>.<p>2024ರ ವೇಳೆಗೆ ದೇಶದ ಮನೆಮನೆಗಳಿಗೆ ಪೈಪ್ ನೀರು ಸರಬರಾಜು ಮಾಡುವ ಯೋಜನೆ ಘೋಷಿಸಲಾಗಿದೆ. ಇದಕ್ಕಾಗಿ ₹ 3.6 ಲಕ್ಷ ಕೋಟಿ ಹೂಡಿಕೆ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.</p>.<p><strong>ಯಾರಿಗೆ ಲಾಭ?:</strong>ಜೈನ್ ಇರಿಗೇಷನ್ ಸಿಸ್ಟಮ್ಸ್ ಲಿಮಿಟೆಡ್, ಕೆಎಸ್ಬಿ ಲಿಮಿಟೆಡ್, ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ , ಜೆ.ಕೆ ಅಗ್ರಿ ಜೆನೆಟಿಕ್ಸ್ ಲಿಮಿಟೆಡ್, ಪಿಐ ಇಂಡಸ್ಟ್ರೀಸ್.</p>.<p><strong>ಕ್ಲೀನ್ ಇಂಡಿಯಾ ಮಿಷನ್ಗೆ ₹ 12,300 ಕೋಟಿಮೀಸಲು</strong></p>.<p><strong>ಯಾರಿಗೆ ಲಾಭ?:</strong> ಹಿಂದೂಸ್ತಾನ್ ಯೂನಿಲಿವರ್, ಪ್ರೋಕ್ಟರ್ ಅಂಡ್ ಗ್ಯಾಂಬಲ್, ಗೋದ್ರೇಜ್.</p>.<p><strong>ಟೆಲಿಕಾಂ</strong></p>.<p>ಗ್ರಾಮಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ಕಲ್ಪಿಸಲು ಭಾರತ್ ನೆಟ್ ಅಭಿವೃದ್ಧಿ ಪಡಿಸಲಾಗುವುದು</p>.<p><strong>ಯಾರಿಗೆ ಲಾಭ?:</strong>ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಎಫ್ಸಿಎಲ್ ಲಿಮಿಟೆಡ್</p>.<p><strong>ಆನ್ಲೈನ್ ಶಿಕ್ಷಣ</strong></p>.<p>ಶಿಕ್ಷಣ ವಲಯಕ್ಕೆ ₹ 99,300 ಕೋಟಿಮೀಸಲಿಡಲಾಗಿದೆ. ಅದೇ ರೀತಿ ಆನ್ಲೈನ್ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಾಗಿದೆ.</p>.<p><strong>ಯಾರಿಗೆ ಲಾಭ?:</strong> ಎನ್ಐಐಟಿ ಮತ್ತು ಎಂಟಿ ಎಡ್ಯುಕೇರ್</p>.<p><strong>ಐಟಿ ವಲಯ</strong></p>.<p>ಡೇಟಾ ಸೆಂಟರ್ ಪಾರ್ಕ್ಗಳ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.</p>.<p><strong>ಯಾರಿಗೆ ಲಾಭ?:</strong>ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್ಸಿ ಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಎಲ್ಟಿಐ, ಮೈಂಡ್ ಟ್ರೀಸ್,ಪೆರ್ಸಿಸ್ಟೆಂಟ್ ಮತ್ತು ಹೆಕ್ಸಾವೇರ್. ಅದಾನಿ ಎಂಟರ್ಪ್ರೈಸಸ್ಗೂ ಇದರಿಂದ ಲಾಭವಾಗಲಿದೆ.</p>.<p><strong>ಪೈಪ್ಲೈನ್ ಮತ್ತು ನಗರ ಅನಿಲ ಪೂರೈಕೆದಾರರು</strong></p>.<p>ರಾಷ್ಟ್ರೀಯ ಗ್ಯಾಸ್ಗ್ರಿಡ್ನ್ನು 16,200 ಕಿಮೀಗಿಂತ 27,000 ಕಿಮೀವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.</p>.<p><strong>ಯಾರಿಗೆ ಲಾಭ?:</strong> ವೆಲ್ಸ್ಪನ್ ಕಾರ್ಪೊರೇಷನ್, ಮಹಾರಾಷ್ಟ್ರ ಸೀಮ್ಲೆಸ್ ಲಿಮಿಟೆಡ್, ರತ್ನಮಣಿ ಮೆಟಲ್ಸ್ ಅಂಡ್ ಟ್ಯೂಬ್ಸ್, ಜಿಂದಾಲ್ ಸೋ, ಮ್ಯಾನ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್.ಗ್ಯಾಸ್ ಗ್ರಿಡ್ ವಿಸ್ತರಣೆಯಿಂದಾಗಿ ಐಡಿಎಲ್, ಎಂಜಿಎಲ್ ಮತ್ತು ಗುಜರಾತ್ ಗ್ಯಾಸ್ಗೆ ಲಾಭವಾಗಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/lic-comes-to-share-market-soon-702240.html" target="_blank">Explainer | ಷೇರುಪೇಟೆಗೆ ಬರಲಿದೆ ₹ 31 ಲಕ್ಷ ಕೋಟಿ ಮೌಲ್ಯದ ಸಂಸ್ಥೆ ಎಲ್ಐಸಿ</a></p>.<p><strong>ನಷ್ಟ ಯಾರಿಗೆ?</strong><br />ವಿಮೆ<br />ಸರ್ಕಾರಿ ಸ್ವಾಮ್ಯದ ಬ್ಯಾಂಕ್<br />ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ<br />ರಸಗೊಬ್ಬರ ಕಂಪನಿ<br />ಸರಕು ಸಾಗಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>