‘ಬಡ ಹಾಗೂ ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾವು ವಿಮಾ ಸುರಕ್ಷತೆಯ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಿದೆವು. ಅಲ್ಲದೆ, ವಿಮಾ ಹಣವನ್ನು 90 ದಿನಗಳಲ್ಲಿ ಠೇವಣಿದಾರರಿಗೆ ನೀಡಬೇಕು ಎಂದು ಕೂಡ ನಮ್ಮ ಸರ್ಕಾರವು ಹೇಳಿದೆ. ಅಂದರೆ, ಒಂದು ಬ್ಯಾಂಕ್ ಮುಳುಗುತ್ತಿದೆ ಎಂದಿದ್ದರೂ ಠೇವಣಿದಾರರಿಗೆ ಅವರ ಹಣವು 90 ದಿನಗಳಲ್ಲಿ ಸಿಗುತ್ತದೆ’ ಎಂದು ಅವರು ಹೇಳಿದರು.