<p><strong>ನವದೆಹಲಿ:</strong> ಏರ್ ಇಂಡಿಯಾದ ಸಾಲವು ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.</p>.<p>ಕಡಿಮೆ ಬೆಲೆಯ ವಿಮಾನಯಾನ ಕಂಪನಿಗಳ ಪೈಪೋಟಿ, ಗರಿಷ್ಠ ಬಡ್ಡಿದರ ಮತ್ತು ಕಾರ್ಯಾಚರಣಾ ವೆಚ್ಚದಿಂದಾಗಿ ಸಾಲ ಹೆಚ್ಚಾಗುತ್ತಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.</p>.<p>2017–18ರಲ್ಲಿ ₹ 55,308 ಕೋಟಿ ಇದ್ದ ಸಾಲದ ಮೊತ್ತ 2018–19ರಲ್ಲಿ ₹ 58,255 ಕೋಟಿಗೆ ಏರಿಕೆಯಾಗಿದೆ.</p>.<p><strong>ಸಹಕಾರಿ ಬ್ಯಾಂಕ್ ಬಲವರ್ಧನೆಗೆ ಕ್ರಮ:</strong>ಸಹಕಾರಿ ಬ್ಯಾಂಕ್ಗಳ ಬಲವರ್ಧನೆಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.</p>.<p>ಸಹಕಾರಿ ಬ್ಯಾಂಕ್ಗಳಲ್ಲಿ ಅರ್ಬಿಐನ ಬ್ಯಾಂಕಿಂಗ್ ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು. ಆದರೆ, ಆಡಳಿತಾತ್ಮಕ ವಿಷಯಗಳನ್ನು ರಿಜಿಸ್ಟ್ರಾರ್ ಆಫ್ ಕೊ–ಆಪರೇಟೀವ್ ನೋಡಿಕೊಳ್ಳಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.</p>.<p>ವಾಣಿಜ್ಯ ಬ್ಯಾಂಕ್ಗಳಂತೆಯೇ, ಸಹಕಾರಿ ಬ್ಯಾಂಕ್ಗಳಿಗೂ ಸಿಇಒ ನೇಮಕಾರಿಯಲ್ಲಿ ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗುವುದು. ನೇಮಕ ಮಾಡುವುದಕ್ಕೂ ಮುನ್ನ ಆರ್ಬಿಐನ ಅನುಮತಿಯನ್ನೂ ಕೇಳಾಗುವುದು ಎಂದು ಹೇಳಿದ್ದಾರೆ.</p>.<p>ಆರ್ಬಿಐ ಮಾರ್ಗಸೂಚಿಯ ಅನ್ವಯ ಲೆಕ್ಕಪತ್ರ ಪರಿಶೀಲನೆ ನಡೆಯಲಿದೆ. ಸಂದರ್ಭ ಎದುರಾದರೆ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿಯನ್ನು ಆರ್ಬಿಐ ರದ್ದುಮಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಏರ್ ಇಂಡಿಯಾದ ಸಾಲವು ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.</p>.<p>ಕಡಿಮೆ ಬೆಲೆಯ ವಿಮಾನಯಾನ ಕಂಪನಿಗಳ ಪೈಪೋಟಿ, ಗರಿಷ್ಠ ಬಡ್ಡಿದರ ಮತ್ತು ಕಾರ್ಯಾಚರಣಾ ವೆಚ್ಚದಿಂದಾಗಿ ಸಾಲ ಹೆಚ್ಚಾಗುತ್ತಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.</p>.<p>2017–18ರಲ್ಲಿ ₹ 55,308 ಕೋಟಿ ಇದ್ದ ಸಾಲದ ಮೊತ್ತ 2018–19ರಲ್ಲಿ ₹ 58,255 ಕೋಟಿಗೆ ಏರಿಕೆಯಾಗಿದೆ.</p>.<p><strong>ಸಹಕಾರಿ ಬ್ಯಾಂಕ್ ಬಲವರ್ಧನೆಗೆ ಕ್ರಮ:</strong>ಸಹಕಾರಿ ಬ್ಯಾಂಕ್ಗಳ ಬಲವರ್ಧನೆಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.</p>.<p>ಸಹಕಾರಿ ಬ್ಯಾಂಕ್ಗಳಲ್ಲಿ ಅರ್ಬಿಐನ ಬ್ಯಾಂಕಿಂಗ್ ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು. ಆದರೆ, ಆಡಳಿತಾತ್ಮಕ ವಿಷಯಗಳನ್ನು ರಿಜಿಸ್ಟ್ರಾರ್ ಆಫ್ ಕೊ–ಆಪರೇಟೀವ್ ನೋಡಿಕೊಳ್ಳಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.</p>.<p>ವಾಣಿಜ್ಯ ಬ್ಯಾಂಕ್ಗಳಂತೆಯೇ, ಸಹಕಾರಿ ಬ್ಯಾಂಕ್ಗಳಿಗೂ ಸಿಇಒ ನೇಮಕಾರಿಯಲ್ಲಿ ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗುವುದು. ನೇಮಕ ಮಾಡುವುದಕ್ಕೂ ಮುನ್ನ ಆರ್ಬಿಐನ ಅನುಮತಿಯನ್ನೂ ಕೇಳಾಗುವುದು ಎಂದು ಹೇಳಿದ್ದಾರೆ.</p>.<p>ಆರ್ಬಿಐ ಮಾರ್ಗಸೂಚಿಯ ಅನ್ವಯ ಲೆಕ್ಕಪತ್ರ ಪರಿಶೀಲನೆ ನಡೆಯಲಿದೆ. ಸಂದರ್ಭ ಎದುರಾದರೆ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿಯನ್ನು ಆರ್ಬಿಐ ರದ್ದುಮಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>