ವಿಮಾನಯಾನ ಕ್ಷೇತ್ರದಲ್ಲಿ ಭಾರತದ ಪಾಲು ಜಾಸ್ತಿ ಆಗುತ್ತಿದೆ. ಕೋವಿಡ್ನಿಂದ ಈಗ ಎದುರಾಗಿಸುವ ಸಮಸ್ಯೆಗಳು ತಾತ್ಕಾಲಿಕ ಎಂದು ಕಂಪನಿಯ ಸಿಇಒ ವಿನಯ್ ದುಬೆ ಹೇಳಿದ್ದಾರೆ. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಆಕಾಸಾ ಏರ್ ಹೊಂದಿದೆ. ‘ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ವಿಮಾನ ಪ್ರಯಾಣದ ಅನುಭವ ಹೊಂದಿರುವವರ ಸಂಖ್ಯೆ ಕಡಿಮೆ. ಇದು ನಾವು ನಾಗರಿಕ ವಿಮಾನಯಾನ ಕ್ಷೇತ್ರದ ವಿಚಾರವಾಗಿ ಆಶಾವಾದ ಹೊಂದಿರಲು ಮುಖ್ಯ ಕಾರಣ. ಈಗಿರುವ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಲಿದೆ. ಆ ಬದಲಾವಣೆಯನ್ನು ಸಾಧ್ಯವಾಗಿಸಲು ನಮ್ಮದು ಕೊಡುಗೆ ಇರಲಿದೆ. ವಿಮಾನ ಯಾನವು ಎಲ್ಲರಿಗೂ ಸಿಗುವಂತೆ ಮಾಡುವುದು ನಮ್ಮ ಬಯಕೆ’ ಎಂದು ಕೂಡ ದುಬೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.