<p><strong>ವಿಜಯವಾಡ</strong>: ಆಂಧ್ರಪ್ರದೇಶದಲ್ಲಿ ಜಾರಿಗೊಂಡಿರುವ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಿಂದ (ಎಂಐಎಸ್) ಒಣಮೆಣಸಿನಕಾಯಿ ಬೆಲೆಯು ಚೇತರಿಕೆ ಕಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಿಗೆ ವರದಾನವಾಗಿದೆ.</p>.<p>ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಲ್ಗೆ ₹27 ಸಾವಿರ ಇದ್ದ ದರವು ₹7 ಸಾವಿರಕ್ಕೆ ಕುಸಿದಿತ್ತು. ಬೆಲೆ ಕುಸಿತದಿಂದ ರಾಯಲಸೀಮೆ, ಗುಂಟೂರ್ ಮತ್ತು ಪಲ್ನಾಡು ಭಾಗದ ಸಾವಿರಾರು ಹೆಕ್ಟೇರ್ನಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.</p>.<p>ರೈತರ ಹಿತದೃಷ್ಟಿಯಿಂದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ಕೊರತೆ ಪಾವತಿ ಸೌಲಭ್ಯ ಕಲ್ಪಿಸುವಂತೆ ಆಂಧ್ರಪ್ರದೇಶದ ಸರ್ಕಾರವು, ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಂಟಿಯಾಗಿ ಫೆಬ್ರುವರಿ 25ರಂದು ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಒಣಮೆಣಸಿನಕಾಯಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. </p>.<p>ಪ್ರತಿ ಕ್ವಿಂಟಲ್ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ ನಿಗದಿಪಡಿಸಲಾಗಿದೆ. ಒಟ್ಟು ಉತ್ಪಾದನೆ ಪೈಕಿ ಶೇ 25ರಷ್ಟು ಒಣಮೆಣಸಿನಕಾಯಿ ಖರೀದಿಗೆ ಕೇಂದ್ರವು ಒಪ್ಪಿಗೆ ನೀಡಿದೆ. </p>.<p>ಎಷ್ಟು ಬೆಲೆ ಏರಿಕೆ?: ಸರ್ಕಾರದಿಂದ ಖರೀದಿ ಆರಂಭಿಸಿದ ಬೆನ್ನಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಬೆಲೆಯು ಶೇ 15ರಿಂದ ಶೇ 20ರಷ್ಟು ಹೆಚ್ಚಳವಾಗಿದೆ. ಪ್ರತಿ ಕ್ವಿಂಟಲ್ಗೆ ₹3 ಸಾವಿರದವರೆಗೂ ಏರಿಕೆಯಾಗಿದೆ. ಕೆಲವು ತಳಿಗಳನ್ನು ಕ್ವಿಂಟಲ್ಗೆ ₹14 ಸಾವಿರ ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.</p>.<p>ಫೆಬ್ರುವರಿ 11ರಂದು ಮುಕ್ತ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ 334 ತಳಿ ಮತ್ತು ನಂ. 5 ತಳಿಯ ದರವು ಕ್ವಿಂಟಲ್ಗೆ ₹11,500 ಇತ್ತು. ಎಂಐಎಸ್ ಅಡಿ ಖರೀದಿ ಆರಂಭಗೊಂಡ ಬಳಿಕ ಈ ತಳಿಗಳ ಬೆಲೆಯು ಕ್ವಿಂಟಲ್ಗೆ ಕ್ರಮವಾಗಿ ₹12,500 ಮತ್ತು ₹13 ಸಾವಿರ ಆಗಿದೆ. 314 ಹೆಸರಿನ ತಳಿಯ ಬೆಲೆಯು ₹13 ಸಾವಿರದಿಂದ ₹13,900ಕ್ಕೆ ತಲುಪಿದೆ. ತೇಜ ತಳಿಯ ಮೆಣಸಿನಕಾಯಿ ಬೆಲೆಯು ₹14 ಸಾವಿರಕ್ಕೆ ಮುಟ್ಟಿದೆ. </p>.<p>ರೈತರು, ಕೃಷಿ ತಜ್ಞರು ಮತ್ತು ವ್ಯಾಪಾರಿಗಳೊಟ್ಟಿಗೆ ಚರ್ಚಿಸಿದ ಬಳಿಕವೇ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು ಜಾರಿಗೊಂಡ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಮಾರುಕಟ್ಟೆಯಲ್ಲಿ ಕೃಷಿ ಹುಟ್ಟುವಳಿಗಳ ಬೆಲೆ ಏರಿಳಿತವಾದಾಗ ಎಂಐಎಸ್ ಜಾರಿ ಮೂಲಕ ಸರ್ಕಾರವು ಮಧ್ಯಪ್ರವೇಶಿಸಲು ಅವಕಾಶವಿದೆ. ಇದರಿಂದ ಬೆಳೆಗಾರರಿಗೆ ಆಗುವ ನಷ್ಟ ತಪ್ಪಲಿದೆ. ಆಂಧ್ರಪ್ರದೇಶ ಸರ್ಕಾರವು ಸಕಾಲದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿರುವುದರಿಂದ ಒಣಮೆಣಸಿನಕಾಯಿ ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯವಾಡ</strong>: ಆಂಧ್ರಪ್ರದೇಶದಲ್ಲಿ ಜಾರಿಗೊಂಡಿರುವ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಿಂದ (ಎಂಐಎಸ್) ಒಣಮೆಣಸಿನಕಾಯಿ ಬೆಲೆಯು ಚೇತರಿಕೆ ಕಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಬೆಳೆಗಾರರಿಗೆ ವರದಾನವಾಗಿದೆ.</p>.<p>ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಲ್ಗೆ ₹27 ಸಾವಿರ ಇದ್ದ ದರವು ₹7 ಸಾವಿರಕ್ಕೆ ಕುಸಿದಿತ್ತು. ಬೆಲೆ ಕುಸಿತದಿಂದ ರಾಯಲಸೀಮೆ, ಗುಂಟೂರ್ ಮತ್ತು ಪಲ್ನಾಡು ಭಾಗದ ಸಾವಿರಾರು ಹೆಕ್ಟೇರ್ನಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.</p>.<p>ರೈತರ ಹಿತದೃಷ್ಟಿಯಿಂದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ಕೊರತೆ ಪಾವತಿ ಸೌಲಭ್ಯ ಕಲ್ಪಿಸುವಂತೆ ಆಂಧ್ರಪ್ರದೇಶದ ಸರ್ಕಾರವು, ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಂಟಿಯಾಗಿ ಫೆಬ್ರುವರಿ 25ರಂದು ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಒಣಮೆಣಸಿನಕಾಯಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. </p>.<p>ಪ್ರತಿ ಕ್ವಿಂಟಲ್ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ ನಿಗದಿಪಡಿಸಲಾಗಿದೆ. ಒಟ್ಟು ಉತ್ಪಾದನೆ ಪೈಕಿ ಶೇ 25ರಷ್ಟು ಒಣಮೆಣಸಿನಕಾಯಿ ಖರೀದಿಗೆ ಕೇಂದ್ರವು ಒಪ್ಪಿಗೆ ನೀಡಿದೆ. </p>.<p>ಎಷ್ಟು ಬೆಲೆ ಏರಿಕೆ?: ಸರ್ಕಾರದಿಂದ ಖರೀದಿ ಆರಂಭಿಸಿದ ಬೆನ್ನಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಬೆಲೆಯು ಶೇ 15ರಿಂದ ಶೇ 20ರಷ್ಟು ಹೆಚ್ಚಳವಾಗಿದೆ. ಪ್ರತಿ ಕ್ವಿಂಟಲ್ಗೆ ₹3 ಸಾವಿರದವರೆಗೂ ಏರಿಕೆಯಾಗಿದೆ. ಕೆಲವು ತಳಿಗಳನ್ನು ಕ್ವಿಂಟಲ್ಗೆ ₹14 ಸಾವಿರ ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.</p>.<p>ಫೆಬ್ರುವರಿ 11ರಂದು ಮುಕ್ತ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ 334 ತಳಿ ಮತ್ತು ನಂ. 5 ತಳಿಯ ದರವು ಕ್ವಿಂಟಲ್ಗೆ ₹11,500 ಇತ್ತು. ಎಂಐಎಸ್ ಅಡಿ ಖರೀದಿ ಆರಂಭಗೊಂಡ ಬಳಿಕ ಈ ತಳಿಗಳ ಬೆಲೆಯು ಕ್ವಿಂಟಲ್ಗೆ ಕ್ರಮವಾಗಿ ₹12,500 ಮತ್ತು ₹13 ಸಾವಿರ ಆಗಿದೆ. 314 ಹೆಸರಿನ ತಳಿಯ ಬೆಲೆಯು ₹13 ಸಾವಿರದಿಂದ ₹13,900ಕ್ಕೆ ತಲುಪಿದೆ. ತೇಜ ತಳಿಯ ಮೆಣಸಿನಕಾಯಿ ಬೆಲೆಯು ₹14 ಸಾವಿರಕ್ಕೆ ಮುಟ್ಟಿದೆ. </p>.<p>ರೈತರು, ಕೃಷಿ ತಜ್ಞರು ಮತ್ತು ವ್ಯಾಪಾರಿಗಳೊಟ್ಟಿಗೆ ಚರ್ಚಿಸಿದ ಬಳಿಕವೇ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು ಜಾರಿಗೊಂಡ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಣುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಮಾರುಕಟ್ಟೆಯಲ್ಲಿ ಕೃಷಿ ಹುಟ್ಟುವಳಿಗಳ ಬೆಲೆ ಏರಿಳಿತವಾದಾಗ ಎಂಐಎಸ್ ಜಾರಿ ಮೂಲಕ ಸರ್ಕಾರವು ಮಧ್ಯಪ್ರವೇಶಿಸಲು ಅವಕಾಶವಿದೆ. ಇದರಿಂದ ಬೆಳೆಗಾರರಿಗೆ ಆಗುವ ನಷ್ಟ ತಪ್ಪಲಿದೆ. ಆಂಧ್ರಪ್ರದೇಶ ಸರ್ಕಾರವು ಸಕಾಲದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿರುವುದರಿಂದ ಒಣಮೆಣಸಿನಕಾಯಿ ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>