<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿಯು ತನ್ನಲ್ಲಿರುವ ಆಸ್ತಿಗಳನ್ನು ನಗದೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.</p>.<p>‘₹ 20,160 ಕೋಟಿ ಮೌಲ್ಯದ 14 ಆಸ್ತಿಗಳನ್ನು ಗುರುತಿಸಿದ್ದು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಗೆ (ಡಿಐಪಿಎಂ) ಮಾಹಿತಿ ನೀಡಲಾಗಿದೆ’ ಎಂದು ಅಧ್ಯಕ್ಷ ಪಿ.ಕೆ. ಪೂರ್ವರಾ ಅವರು ತಿಳಿಸಿದ್ದಾರೆ.</p>.<p>ಕೌಶಲಾಭಿವೃದ್ಧಿ ಸಚಿವಾಲಯವು ಲಭ್ಯವಿರುವ ಭೂಮಿಯ ಸ್ವಲ್ಪ ಭಾಗವನ್ನು ಕೇಳಿತ್ತು. ಅದಕ್ಕೆ ದೂರಸಂಪರ್ಕ ಇಲಾಖೆಯು ಗಾಜಿಯಾಬಾದ್ನಲ್ಲಿ ಬಿಎಸ್ಎನ್ಎಲ್ ಹೊಂದಿರುವ ಭೂಮಿಯಲ್ಲಿ ನಿರ್ದಿಷ್ಟ ಭಾಗವನ್ನು ನೀಡುವುದಾಗಿ ಹೇಳಿದೆ. ಇದರಿಂದ ₹ 2 ಸಾವಿರ ಕೋಟಿ ಬರುವ ಅಂದಾಜು ಮಾಡಲಾಗಿದೆ.</p>.<p>ಮುಂಬೈ, ತಿರುವನಂತಪುರ, ಚೆನ್ನೈ, ಗಾಜಿಯಾಬಾದ್ ಮತ್ತು ಇತರೆ ಪ್ರದೇಶಗಳಲ್ಲಿ ಕಂಪನಿಯು ಭೂಮಿಯನ್ನು ಹೊಂದಿದೆ ಎಂದು ಪೂರ್ವರಾ ತಿಳಿಸಿದ್ದಾರೆ.</p>.<p>ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಪುನಶ್ಚೇತನ ಯೋಜನೆಗೆ ಕೇಂದ್ರ ಸರ್ಕಾರ ₹ 69 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ನಿಗದಿಪಡಿಸಿದೆ. ಆಸ್ತಿಗಳ ನಗದೀಕರಣ, ಸಿಬ್ಬಂದಿಗೆ ವಿಆರ್ಎಸ್ ನೀಡುವ ಮೂಲಕ ಎರಡು ವರ್ಷಗಳಲ್ಲಿ ಲಾಭದಾಯಕವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿಯು ತನ್ನಲ್ಲಿರುವ ಆಸ್ತಿಗಳನ್ನು ನಗದೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.</p>.<p>‘₹ 20,160 ಕೋಟಿ ಮೌಲ್ಯದ 14 ಆಸ್ತಿಗಳನ್ನು ಗುರುತಿಸಿದ್ದು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಗೆ (ಡಿಐಪಿಎಂ) ಮಾಹಿತಿ ನೀಡಲಾಗಿದೆ’ ಎಂದು ಅಧ್ಯಕ್ಷ ಪಿ.ಕೆ. ಪೂರ್ವರಾ ಅವರು ತಿಳಿಸಿದ್ದಾರೆ.</p>.<p>ಕೌಶಲಾಭಿವೃದ್ಧಿ ಸಚಿವಾಲಯವು ಲಭ್ಯವಿರುವ ಭೂಮಿಯ ಸ್ವಲ್ಪ ಭಾಗವನ್ನು ಕೇಳಿತ್ತು. ಅದಕ್ಕೆ ದೂರಸಂಪರ್ಕ ಇಲಾಖೆಯು ಗಾಜಿಯಾಬಾದ್ನಲ್ಲಿ ಬಿಎಸ್ಎನ್ಎಲ್ ಹೊಂದಿರುವ ಭೂಮಿಯಲ್ಲಿ ನಿರ್ದಿಷ್ಟ ಭಾಗವನ್ನು ನೀಡುವುದಾಗಿ ಹೇಳಿದೆ. ಇದರಿಂದ ₹ 2 ಸಾವಿರ ಕೋಟಿ ಬರುವ ಅಂದಾಜು ಮಾಡಲಾಗಿದೆ.</p>.<p>ಮುಂಬೈ, ತಿರುವನಂತಪುರ, ಚೆನ್ನೈ, ಗಾಜಿಯಾಬಾದ್ ಮತ್ತು ಇತರೆ ಪ್ರದೇಶಗಳಲ್ಲಿ ಕಂಪನಿಯು ಭೂಮಿಯನ್ನು ಹೊಂದಿದೆ ಎಂದು ಪೂರ್ವರಾ ತಿಳಿಸಿದ್ದಾರೆ.</p>.<p>ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಪುನಶ್ಚೇತನ ಯೋಜನೆಗೆ ಕೇಂದ್ರ ಸರ್ಕಾರ ₹ 69 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ನಿಗದಿಪಡಿಸಿದೆ. ಆಸ್ತಿಗಳ ನಗದೀಕರಣ, ಸಿಬ್ಬಂದಿಗೆ ವಿಆರ್ಎಸ್ ನೀಡುವ ಮೂಲಕ ಎರಡು ವರ್ಷಗಳಲ್ಲಿ ಲಾಭದಾಯಕವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>