<p><strong>ನವದೆಹಲಿ</strong>: ಕೋವಿಡ್ ನಿಯಂತ್ರಿಸಲು ಜಾರಿಗೊಳಿಸಿರುವ ನಿರ್ಬಂಧಗಳಿಂದಾಗಿ ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ, ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಪಿಎಚ್ಡಿಸಿಸಿಐ) ಹೇಳಿದೆ.</p>.<p>ಕೋವಿಡ್ನ ಎರಡನೇ ಅಲೆಯ ದುಷ್ಪರಿಣಾಮಕ್ಕೆ ತುತ್ತಾಗಿರುವ ದೇಶದ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರಲು ಹೆಚ್ಚಿನ ಉತ್ತೇಜನ ಕ್ರಮದ ಅಗತ್ಯವಿದೆ ಎಂದುಪಿಎಚ್ಡಿಸಿಸಿಐ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.</p>.<p>ಕಚ್ಚಾ ಸರಕುಗಳ ವೆಚ್ಚ ಹೆಚ್ಚಳದಿಂದ ಸಂಕಷ್ಟ ಆಗಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡ 73ರಷ್ಟು ಮಂದಿ ಹೇಳಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನಿರ್ಬಂಧಗಳು ಇರುವುದರಿಂದ ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಉಂಟಾಗಿದೆ. ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಬೇಡಿಕೆಯನ್ನು ತಗ್ಗಿಸಿದೆ ಎಂದು ಅದು ವಿವರಿಸಿದೆ.</p>.<p>ದುಡಿಯುವ ಬಂಡವಾಳದ ಕೊರತೆ, ದರ–ವೆಚ್ಚ ನಿಯಂತ್ರಣ, ವೇತನ ಪಾವತಿ, ಸಾಲ ಮರುಪಾವತಿಯಂತಹ ಸಮಸ್ಯೆಗಳನ್ನೂ ಉದ್ಯಮಗಳು ಎದುರಿಸುತ್ತಿವೆ.</p>.<p>ಕೋವಿಡ್ ನಿಯಂತ್ರಿಸಲು ಕಚೇರಿಗಳು ಮತ್ತು ಅಂಗಡಿಗಳನ್ನು ಮುಚ್ಚಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಪಿಎಚ್ಡಿಸಿಸಿಐನ ಅಧ್ಯಕ್ಷ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೋವಿಡ್ ನಿಯಂತ್ರಿಸಲು ಜಾರಿಗೊಳಿಸಿರುವ ನಿರ್ಬಂಧಗಳಿಂದಾಗಿ ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ, ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಪಿಎಚ್ಡಿಸಿಸಿಐ) ಹೇಳಿದೆ.</p>.<p>ಕೋವಿಡ್ನ ಎರಡನೇ ಅಲೆಯ ದುಷ್ಪರಿಣಾಮಕ್ಕೆ ತುತ್ತಾಗಿರುವ ದೇಶದ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರಲು ಹೆಚ್ಚಿನ ಉತ್ತೇಜನ ಕ್ರಮದ ಅಗತ್ಯವಿದೆ ಎಂದುಪಿಎಚ್ಡಿಸಿಸಿಐ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.</p>.<p>ಕಚ್ಚಾ ಸರಕುಗಳ ವೆಚ್ಚ ಹೆಚ್ಚಳದಿಂದ ಸಂಕಷ್ಟ ಆಗಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡ 73ರಷ್ಟು ಮಂದಿ ಹೇಳಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನಿರ್ಬಂಧಗಳು ಇರುವುದರಿಂದ ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಉಂಟಾಗಿದೆ. ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಬೇಡಿಕೆಯನ್ನು ತಗ್ಗಿಸಿದೆ ಎಂದು ಅದು ವಿವರಿಸಿದೆ.</p>.<p>ದುಡಿಯುವ ಬಂಡವಾಳದ ಕೊರತೆ, ದರ–ವೆಚ್ಚ ನಿಯಂತ್ರಣ, ವೇತನ ಪಾವತಿ, ಸಾಲ ಮರುಪಾವತಿಯಂತಹ ಸಮಸ್ಯೆಗಳನ್ನೂ ಉದ್ಯಮಗಳು ಎದುರಿಸುತ್ತಿವೆ.</p>.<p>ಕೋವಿಡ್ ನಿಯಂತ್ರಿಸಲು ಕಚೇರಿಗಳು ಮತ್ತು ಅಂಗಡಿಗಳನ್ನು ಮುಚ್ಚಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಪಿಎಚ್ಡಿಸಿಸಿಐನ ಅಧ್ಯಕ್ಷ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>