<p><strong>ನವದೆಹಲಿ</strong>: ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದು ಭಾರತದಲ್ಲಿ ಹಣದುಬ್ಬರ ಏರಿಕೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಆರ್ಥಿಕ ಸಚಿವಾಲಯದ ಮಾಸಿಕ ವರದಿ ಹೇಳಿದೆ. </p>.<p>ಯೂರೋಪ್ ದೇಶಗಳಿಗೆ ಭಾರತದ ರಫ್ತು ಹಾಗೂ ಆಮದು ವಹಿವಾಟು ಕೆಂಪು ಸಮುದ್ರದ ಮೂಲಕವೇ ನಡೆಯುತ್ತದೆ. ಆದರೆ, ಬಿಕ್ಕಟ್ಟು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಕಚ್ಚಾತೈಲ, ಆಟೊಮೊಬೈಲ್, ರಸಗೊಬ್ಬರ, ಜವಳಿ, ಕಬ್ಬಿಣ ಮತ್ತು ಉಕ್ಕು ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.</p>.<p>ಸಾಗಣೆ ಹಾಗೂ ವಿಮಾ ವೆಚ್ಚವು ಏರಿಕೆಯಾಗಿದೆ. ಅಲ್ಲದೆ, ಸಾಗಣೆಯ ಅವಧಿ ಹೆಚ್ಚುತ್ತಿದೆ. ಇದರಿಂದ ಆಮದು ಉತ್ಪನ್ನಗಳ ಬೆಲೆ ದುಬಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. </p>.<p>ಭಾರತವು ಜೋರ್ಡಾನ್ ಹಾಗೂ ಇಸ್ರೇಲ್ನಿಂದ ಎಂಒಪಿ (ಮ್ಯೂರೇಟ್ ಆಫ್ ಪೊಟ್ಯಾಷ್) ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯ ಹಾಗೂ ಕೆಂಪು ಸಮುದ್ರದ ಬಿಕ್ಕಟ್ಟು ರಸಗೊಬ್ಬರದ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. </p>.<p>ಚೀನಾ, ಜಪಾನ್, ಭಾರತ ಹಾಗೂ ದಕ್ಷಿಣ ಕೊರಿಯಾ ದೇಶಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದುಕೊಳ್ಳುತ್ತವೆ. ಹಡಗುಗಳ ಸಂಚಾರದಲ್ಲಿ ಆಗಿರುವ ಅಡಚಣೆಯು ಈ ರಾಷ್ಟ್ರಗಳ ಆರ್ಥಿಕತೆ ಬೆಳವಣಿಗೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಇಂಧನ ಬೆಲೆ ಏರಿಕೆಯಾಗಲಿದ್ದು, ಇದು ಹಣದುಬ್ಬರಕ್ಕೆ ದಾರಿಯಾಗಲಿದೆ ಎಂದು ತಿಳಿಸಿದೆ.</p>.<p>ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಯೆಮನ್ನ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯಿಂದಾಗಿ ಬಿಕ್ಕಟ್ಟು ತಲೆದೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದು ಭಾರತದಲ್ಲಿ ಹಣದುಬ್ಬರ ಏರಿಕೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಆರ್ಥಿಕ ಸಚಿವಾಲಯದ ಮಾಸಿಕ ವರದಿ ಹೇಳಿದೆ. </p>.<p>ಯೂರೋಪ್ ದೇಶಗಳಿಗೆ ಭಾರತದ ರಫ್ತು ಹಾಗೂ ಆಮದು ವಹಿವಾಟು ಕೆಂಪು ಸಮುದ್ರದ ಮೂಲಕವೇ ನಡೆಯುತ್ತದೆ. ಆದರೆ, ಬಿಕ್ಕಟ್ಟು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಕಚ್ಚಾತೈಲ, ಆಟೊಮೊಬೈಲ್, ರಸಗೊಬ್ಬರ, ಜವಳಿ, ಕಬ್ಬಿಣ ಮತ್ತು ಉಕ್ಕು ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.</p>.<p>ಸಾಗಣೆ ಹಾಗೂ ವಿಮಾ ವೆಚ್ಚವು ಏರಿಕೆಯಾಗಿದೆ. ಅಲ್ಲದೆ, ಸಾಗಣೆಯ ಅವಧಿ ಹೆಚ್ಚುತ್ತಿದೆ. ಇದರಿಂದ ಆಮದು ಉತ್ಪನ್ನಗಳ ಬೆಲೆ ದುಬಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. </p>.<p>ಭಾರತವು ಜೋರ್ಡಾನ್ ಹಾಗೂ ಇಸ್ರೇಲ್ನಿಂದ ಎಂಒಪಿ (ಮ್ಯೂರೇಟ್ ಆಫ್ ಪೊಟ್ಯಾಷ್) ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯ ಹಾಗೂ ಕೆಂಪು ಸಮುದ್ರದ ಬಿಕ್ಕಟ್ಟು ರಸಗೊಬ್ಬರದ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. </p>.<p>ಚೀನಾ, ಜಪಾನ್, ಭಾರತ ಹಾಗೂ ದಕ್ಷಿಣ ಕೊರಿಯಾ ದೇಶಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದುಕೊಳ್ಳುತ್ತವೆ. ಹಡಗುಗಳ ಸಂಚಾರದಲ್ಲಿ ಆಗಿರುವ ಅಡಚಣೆಯು ಈ ರಾಷ್ಟ್ರಗಳ ಆರ್ಥಿಕತೆ ಬೆಳವಣಿಗೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಇಂಧನ ಬೆಲೆ ಏರಿಕೆಯಾಗಲಿದ್ದು, ಇದು ಹಣದುಬ್ಬರಕ್ಕೆ ದಾರಿಯಾಗಲಿದೆ ಎಂದು ತಿಳಿಸಿದೆ.</p>.<p>ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಯೆಮನ್ನ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯಿಂದಾಗಿ ಬಿಕ್ಕಟ್ಟು ತಲೆದೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>