ರಾಮನಗರ ಜಿಲ್ಲೆ ಒಂದರಲ್ಲಿಯೇ ಈ ವರ್ಷ 2 ಲಕ್ಷ ಟನ್ ಮಾವು ಉತ್ಪಾದನೆ ಆಗಿದ್ದು, ಇಲ್ಲಿನ ಶೇಕಡ 90ರಷ್ಟು ಮಾವು ಹೊರ ರಾಜ್ಯಗಳಿಗೆ ಸಾಗಣೆ ಆಗುತ್ತಿದೆ. ಒಂದೊಮ್ಮೆ ಲಾಕ್ಡೌನ್ನಿಂದ ರಾಜ್ಯಗಳ ಗಡಿ ಮುಚ್ಚಿದರೆ ಸರಬರಾಜು ಕಷ್ಟ ಆಗಬಹುದು ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಭಾಗದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಧಾರಣೆ ಕಡಿಮೆ ಆಗುತ್ತಿದೆ. ಕಳೆದೊಂದು ವಾರದ ಅವಧಿಯಲ್ಲಿ ಬಾದಾಮಿ ತಳಿ ಪ್ರತಿ ಕೆ.ಜಿ.ಗೆ ₹ 30–40, ರಸಪುರಿ ₹ 20–30 ರಷ್ಟು ಬೆಲೆ ತಗ್ಗಿದೆ.