<p><strong>ನವದೆಹಲಿ</strong>: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ’ಗೆ (ಎನ್ಎಂಪಿ) ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರವು ತನ್ನ ಯಾವೆಲ್ಲ ಮೂಲಸೌಕರ್ಯ ಆಸ್ತಿಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮಾರಾಟ ಮಾಡಲಿದೆ ಎಂಬುದನ್ನು ಎನ್ಎಂಪಿ ತಿಳಿಸಲಿದೆ.</p>.<p>‘ಕೇಂದ್ರವು ಬಳಕೆ ಮಾಡುತ್ತಿಲ್ಲದ ಮೂಲಸೌಕರ್ಯ ಆಸ್ತಿಗಳ ವಿವರವು ಎನ್ಎಂಪಿಯಲ್ಲಿ ಇರಲಿದೆ. ಹೂಡಿಕೆದಾರರಿಗೆ ಇವುಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಇದು ಕೇಂದ್ರಕ್ಕೆ ಮಧ್ಯಮಾವಧಿಯಲ್ಲಿ ಆಸ್ತಿಯನ್ನು ನಗದೀಕರಿಸಿಕೊಳ್ಳಲು ಮಾರ್ಗವೊಂದನ್ನು ತೋರಿಸುತ್ತದೆ’ ಎಂದು ನೀತಿ ಆಯೋಗವು ಹೇಳಿದೆ.</p>.<p>ನಗದೀಕರಣಕ್ಕೆ ಪರಿಗಣಿಸಲು ₹ 6 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಸರ್ಕಾರವು ಅಂತಿಮಗೊಳಿಸುತ್ತಿದೆ. ಈ ಪಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ವಿದ್ಯುತ್ ಗ್ರಿಡ್ಗಳೂ ಸೇರಿವೆ ಎಂದು ಕೇಂದ್ರ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಈಚೆಗೆ ಹೇಳಿದ್ದರು.</p>.<p>ಎನ್ಎಂಪಿಗೆ ಚಾಲನೆ ನೀಡಲಾಗುವುದು ಎಂದು ನಿರ್ಮಲಾ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ’ಗೆ (ಎನ್ಎಂಪಿ) ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರವು ತನ್ನ ಯಾವೆಲ್ಲ ಮೂಲಸೌಕರ್ಯ ಆಸ್ತಿಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮಾರಾಟ ಮಾಡಲಿದೆ ಎಂಬುದನ್ನು ಎನ್ಎಂಪಿ ತಿಳಿಸಲಿದೆ.</p>.<p>‘ಕೇಂದ್ರವು ಬಳಕೆ ಮಾಡುತ್ತಿಲ್ಲದ ಮೂಲಸೌಕರ್ಯ ಆಸ್ತಿಗಳ ವಿವರವು ಎನ್ಎಂಪಿಯಲ್ಲಿ ಇರಲಿದೆ. ಹೂಡಿಕೆದಾರರಿಗೆ ಇವುಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಇದು ಕೇಂದ್ರಕ್ಕೆ ಮಧ್ಯಮಾವಧಿಯಲ್ಲಿ ಆಸ್ತಿಯನ್ನು ನಗದೀಕರಿಸಿಕೊಳ್ಳಲು ಮಾರ್ಗವೊಂದನ್ನು ತೋರಿಸುತ್ತದೆ’ ಎಂದು ನೀತಿ ಆಯೋಗವು ಹೇಳಿದೆ.</p>.<p>ನಗದೀಕರಣಕ್ಕೆ ಪರಿಗಣಿಸಲು ₹ 6 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಸರ್ಕಾರವು ಅಂತಿಮಗೊಳಿಸುತ್ತಿದೆ. ಈ ಪಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ವಿದ್ಯುತ್ ಗ್ರಿಡ್ಗಳೂ ಸೇರಿವೆ ಎಂದು ಕೇಂದ್ರ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಈಚೆಗೆ ಹೇಳಿದ್ದರು.</p>.<p>ಎನ್ಎಂಪಿಗೆ ಚಾಲನೆ ನೀಡಲಾಗುವುದು ಎಂದು ನಿರ್ಮಲಾ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>