<p><strong>ನವದೆಹಲಿ: </strong>ಹಣಕಾಸು ಸಚಿವಾಲಯ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ (ಪಿಎಸ್ಬಿ) ಎರಡನೇ ಹಂತದ ಬಂಡವಾಳ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.</p>.<p>ಅಂದಾಜು ₹ 53 ಸಾವಿರ ಕೋಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ವರ್ಷದಲ್ಲಿ ಈಗಾಗಲೇ ಐದು ಬ್ಯಾಂಕ್ಗಳಿಗೆ ₹11,336 ಕೋಟಿ ನೀಡಿದೆ.</p>.<p>ಬ್ಯಾಂಕ್ಗಳ ಎರಡನೇ ತ್ರೈಮಾಸಿಕ ಫಲಿತಾಂಶದ ಆಧಾರದ ಮೇಲೆ ಬಂಡವಾಳ ನೀಡಲಿದೆ. ಸಾಲ ನೀಡಿಕೆ ಹೆಚ್ಚಿಸಲು, ಮುಖ್ಯವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್ಎಂಇ) ಸಾಲ ನೀಡಲು ಅನುಕೂಲವಾಗುವಂತೆ ಬ್ಯಾಂಕ್ಗಳು ಕೇಂದ್ರದಿಂದ ನೆರವು ಪಡೆಯಲಿವೆ ಎಂದು ತಿಳಿಸಿವೆ.</p>.<p>ಎರಡನೇ ತ್ರೈಮಾಸಿಕದಲ್ಲಿ ಒಂದು ಅಥವಾ ಎರಡು ಬ್ಯಾಂಕ್ಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಬೇಕಿದೆ. ಅದಾದ ಬಳಿಕ ಸಚಿವಾಲಯವು ಬ್ಯಾಂಕ್ಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿವೆ.</p>.<p>ವಸೂಲಾಗದ ಸಾಲದ (ಎನ್ಪಿಎ) ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್ಗಳ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ₹ 2.11 ಲಕ್ಷ ಕೋಟಿ ಬಂಡವಾಳ ಮರುಭರ್ತಿ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಹಣಕಾಸು ಸಚಿವಾಲಯ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ (ಪಿಎಸ್ಬಿ) ಎರಡನೇ ಹಂತದ ಬಂಡವಾಳ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.</p>.<p>ಅಂದಾಜು ₹ 53 ಸಾವಿರ ಕೋಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ವರ್ಷದಲ್ಲಿ ಈಗಾಗಲೇ ಐದು ಬ್ಯಾಂಕ್ಗಳಿಗೆ ₹11,336 ಕೋಟಿ ನೀಡಿದೆ.</p>.<p>ಬ್ಯಾಂಕ್ಗಳ ಎರಡನೇ ತ್ರೈಮಾಸಿಕ ಫಲಿತಾಂಶದ ಆಧಾರದ ಮೇಲೆ ಬಂಡವಾಳ ನೀಡಲಿದೆ. ಸಾಲ ನೀಡಿಕೆ ಹೆಚ್ಚಿಸಲು, ಮುಖ್ಯವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್ಎಂಇ) ಸಾಲ ನೀಡಲು ಅನುಕೂಲವಾಗುವಂತೆ ಬ್ಯಾಂಕ್ಗಳು ಕೇಂದ್ರದಿಂದ ನೆರವು ಪಡೆಯಲಿವೆ ಎಂದು ತಿಳಿಸಿವೆ.</p>.<p>ಎರಡನೇ ತ್ರೈಮಾಸಿಕದಲ್ಲಿ ಒಂದು ಅಥವಾ ಎರಡು ಬ್ಯಾಂಕ್ಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಬೇಕಿದೆ. ಅದಾದ ಬಳಿಕ ಸಚಿವಾಲಯವು ಬ್ಯಾಂಕ್ಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿವೆ.</p>.<p>ವಸೂಲಾಗದ ಸಾಲದ (ಎನ್ಪಿಎ) ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್ಗಳ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ₹ 2.11 ಲಕ್ಷ ಕೋಟಿ ಬಂಡವಾಳ ಮರುಭರ್ತಿ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>