<p><strong>ನವದೆಹಲಿ:</strong> ಜಿಎಸ್ಟಿ ದರ ಸುಧಾರಣೆಗೆ ರಚಿಸಿರುವ ಸಚಿವರ ಸಮಿತಿಯ ಸಂಚಾಲಕ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಆಲೋಚನೆ ನಡೆಸಿದೆ.</p>.<p>ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಆಗಿದ್ದಾಗ, ಈ ಸಮಿತಿಯ ಸಂಚಾಲಕ ಆಗಿದ್ದರು. ಅವರ ಅಧಿಕಾರ ಅವಧಿ ಪೂರ್ಣಗೊಂಡ ನಂತರ ಈ ಸ್ಥಾನವು ಖಾಲಿ ಇದೆ. ಜಿಎಸ್ಟಿ ಮಂಡಳಿಯು ಏಳು ಸದಸ್ಯರ ಈ ಸಮಿತಿಯನ್ನು 2021ರ ಸೆಪ್ಟೆಂಬರ್ನಲ್ಲಿ ರಚಿಸಿದೆ.</p>.<p>ಈಗ ಹೊಸ ಸಂಚಾಲಕರನ್ನು ನೇಮಿಸುವ ಉದ್ದೇಶದಿಂದ ಹಣಕಾಸು ಸಚಿವಾಲಯವು ಇತರ ಸದಸ್ಯರ ಜೊತೆ ಸಮಾಲೋಚನೆ ಆರಂಭಿಸಿದೆ. ‘ಕರ್ನಾಟಕವು ಸಮಿತಿಯ ಸದಸ್ಯ ರಾಜ್ಯವಾಗಿ ಮುಂದುವರಿಯಬಹುದು. ಸದಸ್ಯರ ನಡುವಿನ ಸಮಾಲೋಚನೆ ಆಧರಿಸಿ ಹೊಸ ಸಂಚಾಲಕರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.</p>.<p>ಸಾಮಾನ್ಯವಾಗಿ, ಸಮಿತಿಯ ಅತ್ಯಂತ ಹಿರಿಯ ಸದಸ್ಯರನ್ನು ಸಂಚಾಲಕ ಆಗಿ ನೇಮಿಸುವ ಪರಿಪಾಠ ಇದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಇರಿಸಿಕೊಂಡಿರುವ ಕಾರಣ, ಅವರನ್ನೇ ಸಂಚಾಲಕ ಆಗಿ ನೇಮಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.</p>.<p>ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಇರುವ ತೆರಿಗೆ ಹಂತಗಳನ್ನು ಸರಳಗೊಳಿಸುವುದು, ವಿನಾಯಿತಿ ಪಟ್ಟಿಯಲ್ಲಿರುವ ಉತ್ಪನ್ನಗಳು ಹಾಗೂ ಸೇವೆಗಳನ್ನು ಪರಿಶೀಲನೆಗೆ ಒಳಪಡಿಸುವುದು ಹಾಗೂ ಜಿಎಸ್ಟಿ ವರಮಾನವನ್ನು ಹೆಚ್ಚಿಸುವುದು ಈ ಸಮಿತಿಯ ಹೊಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜಿಎಸ್ಟಿ ದರ ಸುಧಾರಣೆಗೆ ರಚಿಸಿರುವ ಸಚಿವರ ಸಮಿತಿಯ ಸಂಚಾಲಕ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಆಲೋಚನೆ ನಡೆಸಿದೆ.</p>.<p>ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಆಗಿದ್ದಾಗ, ಈ ಸಮಿತಿಯ ಸಂಚಾಲಕ ಆಗಿದ್ದರು. ಅವರ ಅಧಿಕಾರ ಅವಧಿ ಪೂರ್ಣಗೊಂಡ ನಂತರ ಈ ಸ್ಥಾನವು ಖಾಲಿ ಇದೆ. ಜಿಎಸ್ಟಿ ಮಂಡಳಿಯು ಏಳು ಸದಸ್ಯರ ಈ ಸಮಿತಿಯನ್ನು 2021ರ ಸೆಪ್ಟೆಂಬರ್ನಲ್ಲಿ ರಚಿಸಿದೆ.</p>.<p>ಈಗ ಹೊಸ ಸಂಚಾಲಕರನ್ನು ನೇಮಿಸುವ ಉದ್ದೇಶದಿಂದ ಹಣಕಾಸು ಸಚಿವಾಲಯವು ಇತರ ಸದಸ್ಯರ ಜೊತೆ ಸಮಾಲೋಚನೆ ಆರಂಭಿಸಿದೆ. ‘ಕರ್ನಾಟಕವು ಸಮಿತಿಯ ಸದಸ್ಯ ರಾಜ್ಯವಾಗಿ ಮುಂದುವರಿಯಬಹುದು. ಸದಸ್ಯರ ನಡುವಿನ ಸಮಾಲೋಚನೆ ಆಧರಿಸಿ ಹೊಸ ಸಂಚಾಲಕರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.</p>.<p>ಸಾಮಾನ್ಯವಾಗಿ, ಸಮಿತಿಯ ಅತ್ಯಂತ ಹಿರಿಯ ಸದಸ್ಯರನ್ನು ಸಂಚಾಲಕ ಆಗಿ ನೇಮಿಸುವ ಪರಿಪಾಠ ಇದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಇರಿಸಿಕೊಂಡಿರುವ ಕಾರಣ, ಅವರನ್ನೇ ಸಂಚಾಲಕ ಆಗಿ ನೇಮಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.</p>.<p>ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಇರುವ ತೆರಿಗೆ ಹಂತಗಳನ್ನು ಸರಳಗೊಳಿಸುವುದು, ವಿನಾಯಿತಿ ಪಟ್ಟಿಯಲ್ಲಿರುವ ಉತ್ಪನ್ನಗಳು ಹಾಗೂ ಸೇವೆಗಳನ್ನು ಪರಿಶೀಲನೆಗೆ ಒಳಪಡಿಸುವುದು ಹಾಗೂ ಜಿಎಸ್ಟಿ ವರಮಾನವನ್ನು ಹೆಚ್ಚಿಸುವುದು ಈ ಸಮಿತಿಯ ಹೊಣೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>