<p><strong>ನವದೆಹಲಿ: </strong>ಕೇಂದ್ರೋದ್ಯಮಗಳ (ಸಿಪಿಎಸ್ಇ) ಷೇರು ವಿಕ್ರಯ ಮತ್ತು ಷೇರು ಮರುಖರೀದಿ ಪ್ರಕ್ರಿಯೆಯ ಮೂಲಕ ಕೇಂದ್ರ ಸರ್ಕಾರವು 2020–21ನೇ ಹಣಕಾಸು ವರ್ಷದಲ್ಲಿ ಇದುವರೆಗೆ ₹ 19,499 ಕೋಟಿ ಸಂಗ್ರಹಿಸಿದೆ.</p>.<p>ಮಾರ್ಚ್ 31ಕ್ಕೆ ಕೊನೆಯಾಗುವ 2020–21ನೇ ಹಣಕಾಸು ವರ್ಷದಲ್ಲಿ ₹ 2.10 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.</p>.<p>ಕೋವಿಡ್–19 ಸಾಂಕ್ರಾಮಿಕದಿಂದಾಗಿ ದೊಡ್ಡ ಪ್ರಮಾಣದ ಷೇರು ವಿಕ್ರಯ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರು ಮಾರಾಟ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಭಾರಿ ಅಂತರದಲ್ಲಿ ಷೇರುವಿಕ್ರಯದ ಗುರಿ ತಪ್ಪುವ ಸಾಧ್ಯತೆ ಇದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020–21ನೇ ಸಾಲಿನ ಬಜೆಟ್ನಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಸಿಪಿಎಸ್ಇಗಳ ಖಾಸಗೀಕರಣ, ಅಲ್ಪ ಪ್ರಮಾಣದ ಷೇರುಗಳ ಮಾರಾಟ ಹಾಗೂ ಷೇರು ಮರುಖರೀದಿ ಪ್ರಕ್ರಿಯೆಗಳ ಮೂಲಕ ₹ 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದ್ದರು.</p>.<p>ಈ ಒಟ್ಟು ಮೊತ್ತದಲ್ಲಿ ₹ 1.20 ಲಕ್ಷ ಕೋಟಿಯನ್ನು ಸಿಪಿಎಸ್ಇ ಷೇರು ಮಾರಾಟದಿಂದ ಹಾಘೂ ₹ 90 ಸಾವಿರ ಕೋಟಿಯನ್ನು ಹಣಕಾಸು ಸಂಸ್ಥೆಗಳ ಷೇರುಗಳ ಮಾರಾಟದಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆ.</p>.<p>ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಡೈನಾಮಿಕ್ಸ್, ಐಆರ್ಸಿಟಿಸಿ ಮತ್ತು ಎಸ್ಎಐಎಲ್ ಕಂಪನಿಗಳ ಆಫರ್ ಫಾರ್ ಸೇಲ್ (ಒಎಫ್ಸಿ) ಮೂಲಕ ₹ 12,907 ಕೋಟಿ ಸಂಗ್ರಹವಾಗಿದೆ.</p>.<p>ಐಆರ್ಎಫ್ಸಿ ಮತ್ತು ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಕಂಪನಿಗಳ ಐಪಿಒ ಮೂಲಕ ₹ 1,984 ಕೋಟಿ, ಆರ್ಇಟಿಇಎಸ್, ಎನ್ಟಿಪಿಸಿ, ಕೆಐಒಸಿಎಲ್, ಎನ್ಎಂಡಿಸಿ ಷೇರು ಮರುಖರೀದಿ ಮೂಲಕ ₹ 2,769 ಕೋಟಿ ಸಂಗ್ರಹವಾಗಿದೆ.</p>.<p>ಏರ್ ಇಂಡಿಯಾ, ಬಿಪಿಸಿಎಲ್, ಪವನ್ ಹನ್ಸ್, ಬಿಇಎಂಎಲ್, ಶಿಪ್ಪಿಂಗ್ ಕಾರ್ಪೊರೇಷನ್, ನೀಲಾಚಲ್ ಇಸ್ಪತ್ ನಿಗಮ್ ಮತ್ತು ಎಫ್ಎಸ್ಎನ್ಎಲ್ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆ ಜಾರಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೇಂದ್ರೋದ್ಯಮಗಳ (ಸಿಪಿಎಸ್ಇ) ಷೇರು ವಿಕ್ರಯ ಮತ್ತು ಷೇರು ಮರುಖರೀದಿ ಪ್ರಕ್ರಿಯೆಯ ಮೂಲಕ ಕೇಂದ್ರ ಸರ್ಕಾರವು 2020–21ನೇ ಹಣಕಾಸು ವರ್ಷದಲ್ಲಿ ಇದುವರೆಗೆ ₹ 19,499 ಕೋಟಿ ಸಂಗ್ರಹಿಸಿದೆ.</p>.<p>ಮಾರ್ಚ್ 31ಕ್ಕೆ ಕೊನೆಯಾಗುವ 2020–21ನೇ ಹಣಕಾಸು ವರ್ಷದಲ್ಲಿ ₹ 2.10 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.</p>.<p>ಕೋವಿಡ್–19 ಸಾಂಕ್ರಾಮಿಕದಿಂದಾಗಿ ದೊಡ್ಡ ಪ್ರಮಾಣದ ಷೇರು ವಿಕ್ರಯ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರು ಮಾರಾಟ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಭಾರಿ ಅಂತರದಲ್ಲಿ ಷೇರುವಿಕ್ರಯದ ಗುರಿ ತಪ್ಪುವ ಸಾಧ್ಯತೆ ಇದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020–21ನೇ ಸಾಲಿನ ಬಜೆಟ್ನಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಸಿಪಿಎಸ್ಇಗಳ ಖಾಸಗೀಕರಣ, ಅಲ್ಪ ಪ್ರಮಾಣದ ಷೇರುಗಳ ಮಾರಾಟ ಹಾಗೂ ಷೇರು ಮರುಖರೀದಿ ಪ್ರಕ್ರಿಯೆಗಳ ಮೂಲಕ ₹ 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದ್ದರು.</p>.<p>ಈ ಒಟ್ಟು ಮೊತ್ತದಲ್ಲಿ ₹ 1.20 ಲಕ್ಷ ಕೋಟಿಯನ್ನು ಸಿಪಿಎಸ್ಇ ಷೇರು ಮಾರಾಟದಿಂದ ಹಾಘೂ ₹ 90 ಸಾವಿರ ಕೋಟಿಯನ್ನು ಹಣಕಾಸು ಸಂಸ್ಥೆಗಳ ಷೇರುಗಳ ಮಾರಾಟದಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆ.</p>.<p>ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಡೈನಾಮಿಕ್ಸ್, ಐಆರ್ಸಿಟಿಸಿ ಮತ್ತು ಎಸ್ಎಐಎಲ್ ಕಂಪನಿಗಳ ಆಫರ್ ಫಾರ್ ಸೇಲ್ (ಒಎಫ್ಸಿ) ಮೂಲಕ ₹ 12,907 ಕೋಟಿ ಸಂಗ್ರಹವಾಗಿದೆ.</p>.<p>ಐಆರ್ಎಫ್ಸಿ ಮತ್ತು ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಕಂಪನಿಗಳ ಐಪಿಒ ಮೂಲಕ ₹ 1,984 ಕೋಟಿ, ಆರ್ಇಟಿಇಎಸ್, ಎನ್ಟಿಪಿಸಿ, ಕೆಐಒಸಿಎಲ್, ಎನ್ಎಂಡಿಸಿ ಷೇರು ಮರುಖರೀದಿ ಮೂಲಕ ₹ 2,769 ಕೋಟಿ ಸಂಗ್ರಹವಾಗಿದೆ.</p>.<p>ಏರ್ ಇಂಡಿಯಾ, ಬಿಪಿಸಿಎಲ್, ಪವನ್ ಹನ್ಸ್, ಬಿಇಎಂಎಲ್, ಶಿಪ್ಪಿಂಗ್ ಕಾರ್ಪೊರೇಷನ್, ನೀಲಾಚಲ್ ಇಸ್ಪತ್ ನಿಗಮ್ ಮತ್ತು ಎಫ್ಎಸ್ಎನ್ಎಲ್ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆ ಜಾರಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>