<p><strong>ನವದೆಹಲಿ</strong>: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ನಿಯಮಗಳನ್ನು ಜಾರಿಗೆ ತರುವಾಗ ಸೂಕ್ಷ್ಮಗ್ರಾಹಿತ್ವದ ಅಗತ್ಯವೂ ಇದೆ ಎಂದು ಎಸ್ಬಿಐ ರಿಸರ್ಚ್ ಹೇಳಿದೆ.</p>.<p>ಕರ್ನಾಟಕದಲ್ಲಿ ಕೆಲವು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್ ವಿವಾದದ ಸ್ವರೂಪ ಪಡೆದಿರುವ ಹಾಗೂ ಕೆಲವು ವ್ಯಾಪಾರಿಗಳು ಯುಪಿಐ ಪಾವತಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಇರುವ ಈ ಹೊತ್ತಿನಲ್ಲಿ ಎಸ್ಬಿಐ ರಿಸರ್ಚ್ನ ಮಾತುಗಳು ಮಹತ್ವ ಪಡೆದಿವೆ.</p>.<p>ಯುಪಿಐ ವ್ಯವಸ್ಥೆಯ ಮೂಲಕ ನಡೆದಿರುವ ವಹಿವಾಟುಗಳ ಆಧಾರದಲ್ಲಿ ತೀರಾ ಬಲವಂತದ ಮಾರ್ಗ ಅನುಸರಿಸಿ ಪರಿಶೀಲನೆ ನಡೆಸುವುದರಿಂದ ಸಣ್ಣ ಉದ್ದಿಮೆಗಳನ್ನು ನಡೆಸುವವರು ನಗದನ್ನು ಮಾತ್ರ ಸ್ವೀಕರಿಸುವ ಅಸಂಘಟಿತ ವ್ಯವಸ್ಥೆಗೆ ಮರಳುವ ಸಾಧ್ಯತೆ ಇರುತ್ತದೆ ಎಂದು ಅದು ಹೇಳಿದೆ.</p>.<p>ಪರೋಕ್ಷ ತೆರಿಗೆ ಪದ್ಧತಿಯು ಹೆಚ್ಚಿನ ಉತ್ತರದಾಯಿತ್ವಕ್ಕೆ ಮತ್ತು ಹೆಚ್ಚಿನ ವರಮಾನ ಸೃಷ್ಟಿಗೆ ಬುನಾದಿ ಹಾಕಿಕೊಟ್ಟಿದೆ. ಆದರೆ ಸಣ್ಣ ವರ್ತಕರಿಗೆ ದಂಡ ವಿಧಿಸುವ ಬದಲು, ಅವರ ಬಲವನ್ನು ಹೆಚ್ಚಿಸುವುದರ ಮೇಲೆ ಈ ವ್ಯವಸ್ಥೆಯ ದೀರ್ಘಾವಧಿ ಯಶಸ್ಸು ನಿಂತಿದೆ ಎಂದು ಎಸ್ಬಿಐ ರಿಸರ್ಚ್ನ ವರದಿಯು ಹೇಳಿದೆ.</p>.<p>ಬೆಂಗಳೂರಿನ ಹಲವು ಅಂಗಡಿಗಳ ಮಾಲೀಕರು ಹಾಗೂ ವರ್ತಕರಿಗೆ ಅವರ ವಹಿವಾಟಿನ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<p>‘ಆರ್ಥಿಕ ಚಟುವಟಿಕೆಗಳ ಹೆಚ್ಚು ನಿಖರವಾದ ಚಿತ್ರಣವನ್ನು ಕಾಣುವ ಹಾಗೂ ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶವು ಒಳ್ಳೆಯದು. ಆದರೆ ಈ ಕೆಲಸವನ್ನು ಮಾಡುವಾಗ ಸೂಕ್ಷ್ಮಗ್ರಾಹಿತ್ವ ಬೇಕು’ ಎಂದು ಅದು ಕಿವಿಮಾತು ಹೇಳಿದೆ.</p>.<p>‘ಅತಿಯಾದ ಬಲವಂತದ ಕ್ರಮಗಳ ಮೂಲಕ ನಡೆಯುವ ಪರಿಶೀಲನೆಯ ಪರಿಣಾಮವಾಗಿ ಸಣ್ಣ ಉದ್ದಿಮೆಗಳು ನಗದು ಆಧಾರಿತವಾದ ಪಾವತಿ ವ್ಯವಸ್ಥೆಗೆ ಮರಳಬಹುದು. ಹಾಗೆ ಆದರೆ, ಹಣಕಾಸಿನ ವಹಿವಾಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಕ್ಕೆ ತರಬೇಕು ಎಂಬ ಉದ್ದೇಶಕ್ಕೇ ಸೋಲಾಗುತ್ತದೆ’ ಎಂದು ಕೂಡ ವರದಿಯು ಎಚ್ಚರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ನಿಯಮಗಳನ್ನು ಜಾರಿಗೆ ತರುವಾಗ ಸೂಕ್ಷ್ಮಗ್ರಾಹಿತ್ವದ ಅಗತ್ಯವೂ ಇದೆ ಎಂದು ಎಸ್ಬಿಐ ರಿಸರ್ಚ್ ಹೇಳಿದೆ.</p>.<p>ಕರ್ನಾಟಕದಲ್ಲಿ ಕೆಲವು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್ ವಿವಾದದ ಸ್ವರೂಪ ಪಡೆದಿರುವ ಹಾಗೂ ಕೆಲವು ವ್ಯಾಪಾರಿಗಳು ಯುಪಿಐ ಪಾವತಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಇರುವ ಈ ಹೊತ್ತಿನಲ್ಲಿ ಎಸ್ಬಿಐ ರಿಸರ್ಚ್ನ ಮಾತುಗಳು ಮಹತ್ವ ಪಡೆದಿವೆ.</p>.<p>ಯುಪಿಐ ವ್ಯವಸ್ಥೆಯ ಮೂಲಕ ನಡೆದಿರುವ ವಹಿವಾಟುಗಳ ಆಧಾರದಲ್ಲಿ ತೀರಾ ಬಲವಂತದ ಮಾರ್ಗ ಅನುಸರಿಸಿ ಪರಿಶೀಲನೆ ನಡೆಸುವುದರಿಂದ ಸಣ್ಣ ಉದ್ದಿಮೆಗಳನ್ನು ನಡೆಸುವವರು ನಗದನ್ನು ಮಾತ್ರ ಸ್ವೀಕರಿಸುವ ಅಸಂಘಟಿತ ವ್ಯವಸ್ಥೆಗೆ ಮರಳುವ ಸಾಧ್ಯತೆ ಇರುತ್ತದೆ ಎಂದು ಅದು ಹೇಳಿದೆ.</p>.<p>ಪರೋಕ್ಷ ತೆರಿಗೆ ಪದ್ಧತಿಯು ಹೆಚ್ಚಿನ ಉತ್ತರದಾಯಿತ್ವಕ್ಕೆ ಮತ್ತು ಹೆಚ್ಚಿನ ವರಮಾನ ಸೃಷ್ಟಿಗೆ ಬುನಾದಿ ಹಾಕಿಕೊಟ್ಟಿದೆ. ಆದರೆ ಸಣ್ಣ ವರ್ತಕರಿಗೆ ದಂಡ ವಿಧಿಸುವ ಬದಲು, ಅವರ ಬಲವನ್ನು ಹೆಚ್ಚಿಸುವುದರ ಮೇಲೆ ಈ ವ್ಯವಸ್ಥೆಯ ದೀರ್ಘಾವಧಿ ಯಶಸ್ಸು ನಿಂತಿದೆ ಎಂದು ಎಸ್ಬಿಐ ರಿಸರ್ಚ್ನ ವರದಿಯು ಹೇಳಿದೆ.</p>.<p>ಬೆಂಗಳೂರಿನ ಹಲವು ಅಂಗಡಿಗಳ ಮಾಲೀಕರು ಹಾಗೂ ವರ್ತಕರಿಗೆ ಅವರ ವಹಿವಾಟಿನ ಗಾತ್ರಕ್ಕಿಂತ ಹೆಚ್ಚಿನ ಪ್ರಮಾಣದ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<p>‘ಆರ್ಥಿಕ ಚಟುವಟಿಕೆಗಳ ಹೆಚ್ಚು ನಿಖರವಾದ ಚಿತ್ರಣವನ್ನು ಕಾಣುವ ಹಾಗೂ ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶವು ಒಳ್ಳೆಯದು. ಆದರೆ ಈ ಕೆಲಸವನ್ನು ಮಾಡುವಾಗ ಸೂಕ್ಷ್ಮಗ್ರಾಹಿತ್ವ ಬೇಕು’ ಎಂದು ಅದು ಕಿವಿಮಾತು ಹೇಳಿದೆ.</p>.<p>‘ಅತಿಯಾದ ಬಲವಂತದ ಕ್ರಮಗಳ ಮೂಲಕ ನಡೆಯುವ ಪರಿಶೀಲನೆಯ ಪರಿಣಾಮವಾಗಿ ಸಣ್ಣ ಉದ್ದಿಮೆಗಳು ನಗದು ಆಧಾರಿತವಾದ ಪಾವತಿ ವ್ಯವಸ್ಥೆಗೆ ಮರಳಬಹುದು. ಹಾಗೆ ಆದರೆ, ಹಣಕಾಸಿನ ವಹಿವಾಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಕ್ಕೆ ತರಬೇಕು ಎಂಬ ಉದ್ದೇಶಕ್ಕೇ ಸೋಲಾಗುತ್ತದೆ’ ಎಂದು ಕೂಡ ವರದಿಯು ಎಚ್ಚರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>