ಹೊಸ ನೊಂದಣಿಗೆ ಆಧಾರ್ ದೃಢೀಕರಣ, ತೆರಿಗೆದಾರರ ನೋಂದಣಿಯನ್ನು ಅಮಾನತು/ರದ್ದು ಮಾಡುವ ಅವಕಾಶ, ಆರು ತಿಂಗಳವರೆಗೆ ಜಿಎಸ್ಟಿಆರ್3ಬಿ ಸಲ್ಲಿಸದೇ ಇರುವ ತೆರಿಗೆದಾರರ ನೋಂದಣಿ ರದ್ದುಪಡಿಸುವ ಮತ್ತು ಐಟಿಸಿ ತಡೆಹಿಡಿಯುವ ಅವಕಾಶ... ಹೀಗೆ ಹಲವು ರೀತಿಗಳಲ್ಲಿ ತೆರಿಗೆ ವಂಚನೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.