ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ಜಿಎಸ್ಟಿ ಅಧಿಕಾರಿಗಳು ₹ 7,421 ಕೋಟಿ ಮೊತ್ತದ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
2020–21ನೇ ಹಣಕಾಸು ವರ್ಷದಲ್ಲಿ ₹ 31,233 ಕೋಟಿ ಮೊತ್ತದ 7,268 ಐಟಿಸಿ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊಸ ನೊಂದಣಿಗೆ ಆಧಾರ್ ದೃಢೀಕರಣ, ತೆರಿಗೆದಾರರ ನೋಂದಣಿಯನ್ನು ಅಮಾನತು/ರದ್ದು ಮಾಡುವ ಅವಕಾಶ, ಆರು ತಿಂಗಳವರೆಗೆ ಜಿಎಸ್ಟಿಆರ್3ಬಿ ಸಲ್ಲಿಸದೇ ಇರುವ ತೆರಿಗೆದಾರರ ನೋಂದಣಿ ರದ್ದುಪಡಿಸುವ ಮತ್ತು ಐಟಿಸಿ ತಡೆಹಿಡಿಯುವ ಅವಕಾಶ... ಹೀಗೆ ಹಲವು ರೀತಿಗಳಲ್ಲಿ ತೆರಿಗೆ ವಂಚನೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.