<p><strong>ಮುಂಬೈ/ನವದೆಹಲಿ:</strong> ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಹರಿಯಾಣ ಸರ್ಕಾರಕ್ಕೆ ಸೇರಿದ ಖಾತೆಗಳಲ್ಲಿ ಒಟ್ಟು ₹590 ಕೋಟಿ ಮೊತ್ತದ ವಂಚನೆ ನಡೆದಿರುವುದರಲ್ಲಿ ಬ್ಯಾಂಕ್ನ ನೌಕರರು ಮತ್ತು ಹೊರಗಿನವರ ಪಾತ್ರ ಇದೆ ಎಂದು ಬ್ಯಾಂಕ್ನ ಸಿಇಒ ವಿ. ವೈದ್ಯನಾಥನ್ ಹೇಳಿದ್ದಾರೆ.</p>.<p>ವಂಚನೆಯ ಮೊತ್ತವನ್ನು ಭರಿಸುವುದಕ್ಕಾಗಿ ಬ್ಯಾಂಕ್ ಒಂದಿಷ್ಟು ಮೊತ್ತವನ್ನು ತೆಗೆದಿರಿಸಬೇಕಾಗುತ್ತದೆ. ಆದರೆ, ಇದರಿಂದಾಗಿ ಬ್ಯಾಂಕ್ನ ಲಾಭದ ಮೇಲೆ ದೊಡ್ಡ ಪರಿಣಾಮ ಆಗುವ ಸಾಧ್ಯತೆ ಇಲ್ಲ ಎಂದು ಅವರು ಬ್ಯಾಂಕ್ನ ಹೂಡಿಕೆದಾರರು ಹಾಗೂ ಮಾರುಕಟ್ಟೆ ತಜ್ಞರನ್ನು ಉದ್ದೇಶಿಸಿ ಹೇಳಿದ್ದಾರೆ.</p>.<p>ವಂಚನೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಯನ್ನು ಕೋರಲಾಗಿದೆ, ಲೆಕ್ಕಪರಿಶೋಧನೆಯು ನಾಲ್ಕರಿಂದ ಐದು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದ್ದಾರೆ.</p>.<p>ನಕಲಿ ಚೆಕ್ಗಳನ್ನು ಬಳಸಿ ನಡೆಸಿದ ವಹಿವಾಟಿನ ಮೂಲಕ ವಂಚನೆ ಎಸಗಲಾಗಿದೆ, ವಂಚನೆಯು ಒಂದು ಶಾಖೆಗೆ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.</p>.<p><strong>ಆರ್ಬಿಐ ನಿಗಾ:</strong> ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಬೆಳವಣಿಗೆಗಳನ್ನು ಆರ್ಬಿಐ ಗಮನಿಸುತ್ತಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗಾರರ ಬಳಿ ಹೇಳಿದ್ದಾರೆ.</p>.<p><strong>ಕುಸಿದ ಷೇರು:</strong> ವಂಚನೆ ಪ್ರಕರಣ ಬಯಲಾದ ನಂತರದಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಷೇರು ಮೌಲ್ಯವು ಶೇ 19.99ರವರೆಗೆ ಕುಸಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ/ನವದೆಹಲಿ:</strong> ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಹರಿಯಾಣ ಸರ್ಕಾರಕ್ಕೆ ಸೇರಿದ ಖಾತೆಗಳಲ್ಲಿ ಒಟ್ಟು ₹590 ಕೋಟಿ ಮೊತ್ತದ ವಂಚನೆ ನಡೆದಿರುವುದರಲ್ಲಿ ಬ್ಯಾಂಕ್ನ ನೌಕರರು ಮತ್ತು ಹೊರಗಿನವರ ಪಾತ್ರ ಇದೆ ಎಂದು ಬ್ಯಾಂಕ್ನ ಸಿಇಒ ವಿ. ವೈದ್ಯನಾಥನ್ ಹೇಳಿದ್ದಾರೆ.</p>.<p>ವಂಚನೆಯ ಮೊತ್ತವನ್ನು ಭರಿಸುವುದಕ್ಕಾಗಿ ಬ್ಯಾಂಕ್ ಒಂದಿಷ್ಟು ಮೊತ್ತವನ್ನು ತೆಗೆದಿರಿಸಬೇಕಾಗುತ್ತದೆ. ಆದರೆ, ಇದರಿಂದಾಗಿ ಬ್ಯಾಂಕ್ನ ಲಾಭದ ಮೇಲೆ ದೊಡ್ಡ ಪರಿಣಾಮ ಆಗುವ ಸಾಧ್ಯತೆ ಇಲ್ಲ ಎಂದು ಅವರು ಬ್ಯಾಂಕ್ನ ಹೂಡಿಕೆದಾರರು ಹಾಗೂ ಮಾರುಕಟ್ಟೆ ತಜ್ಞರನ್ನು ಉದ್ದೇಶಿಸಿ ಹೇಳಿದ್ದಾರೆ.</p>.<p>ವಂಚನೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಯನ್ನು ಕೋರಲಾಗಿದೆ, ಲೆಕ್ಕಪರಿಶೋಧನೆಯು ನಾಲ್ಕರಿಂದ ಐದು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದ್ದಾರೆ.</p>.<p>ನಕಲಿ ಚೆಕ್ಗಳನ್ನು ಬಳಸಿ ನಡೆಸಿದ ವಹಿವಾಟಿನ ಮೂಲಕ ವಂಚನೆ ಎಸಗಲಾಗಿದೆ, ವಂಚನೆಯು ಒಂದು ಶಾಖೆಗೆ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.</p>.<p><strong>ಆರ್ಬಿಐ ನಿಗಾ:</strong> ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಬೆಳವಣಿಗೆಗಳನ್ನು ಆರ್ಬಿಐ ಗಮನಿಸುತ್ತಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗಾರರ ಬಳಿ ಹೇಳಿದ್ದಾರೆ.</p>.<p><strong>ಕುಸಿದ ಷೇರು:</strong> ವಂಚನೆ ಪ್ರಕರಣ ಬಯಲಾದ ನಂತರದಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಷೇರು ಮೌಲ್ಯವು ಶೇ 19.99ರವರೆಗೆ ಕುಸಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>