ಆದರೆ, ‘ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು’ ಆಯ್ಚಿ ಅವರ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಎಂದು ಆರ್ಎಸ್ಎಸ್ ಜೊತೆ ನಂಟು ಹೊಂದಿರುವ ಸ್ವದೇಶಿ ಜಾಗರಣ ಮಂಚ್ ಈಚೆಗೆ ಆಗ್ರಹಿಸಿತ್ತು. ಈ ವಿಚಾರವನ್ನು ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ವದೇಶಿ ಜಾಗರಣ ಮಂಚ್ನ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದರು.