ಆಹಾರ, ಆರೋಗ್ಯ, ಇಂಧನ ಭದ್ರತೆ ಮತ್ತು ಕರೆನ್ಸಿ ವಿನಿಮಯ ಸೇರಿದಂತೆ ಹಲವು ರಂಗಗಳನ್ನು ಈ ನೆರವಿನ ಪ್ಯಾಕೇಜ್ ಒಳಗೊಂಡಿರುತ್ತದೆ ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ‘ಎಕನಾಮಿಕ್ಸ್ ಟೈಮ್ಸ್’ ವರದಿ ಮಾಡಿದೆ.
ಶ್ರೀಲಂಕಾದ ಹಣಕಾಸು ಸಚಿವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಬೆನ್ನಿಗೇ ಭಾರತ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಭಾರತದಿಂದ ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾಕ್ಕೆ ಈ ಯೋಜನೆ ನೆರವಾಗಲಿದೆ.