<p><strong>ಬೆಂಗಳೂರು</strong>: 2021–22ನೇ ಹಣಕಾಸು ವರ್ಷದಿಂದ 2024–25ನೇ ಹಣಕಾಸು ವರ್ಷದವರೆಗಿನ ಅವಧಿಯಲ್ಲಿ ರಾಜ್ಯವು ಒಟ್ಟು ₹12 ಲಕ್ಷ ಕೋಟಿಗಿಂತ ಹೆಚ್ಚಿನ ಹೊಸ ಹೂಡಿಕೆ ಪ್ರಸ್ತಾವಗಳನ್ನು ಸ್ವೀಕರಿಸಿದೆ.</p>.<p>ರಾಜ್ಯದಲ್ಲಿರುವ ಪ್ರಗತಿಪರವಾದ ಹೂಡಿಕೆ ವಾತಾವರಣ ಇದಕ್ಕೆ ಕಾರಣ ಎಂದು ಎಂಎಸ್ಎಂಇ ರಫ್ತು ಉತ್ತೇಜನಾ ಮಂಡಳಿ ನಡೆಸಿರುವ ಅಧ್ಯಯನವು ಹೇಳಿದೆ.</p>.<p>ರಾಜ್ಯದಲ್ಲಿನ ಹೂಡಿಕೆ ವಾತಾವರಣ, ಮಹತ್ವದ ಮೂಲಸೌಕರ್ಯ ಯೋಜನೆಗಳು, ಮುನ್ನೋಟವಿರುವ ನೀತಿಗಳು, ರಾಜ್ಯದಲ್ಲಿನ ಪ್ರತಿಭೆಯು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್ಡಿಐ) ಆಕರ್ಷಿಸುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p class="title">‘ಈ ಅವಧಿಯಲ್ಲಿ ₹12 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೊಸ ಹೂಡಿಕೆ ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ ₹1.40 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಅನುಷ್ಠಾನವು ಪೂರ್ಣಗೊಂಡಿದೆ. ₹9.49 ಲಕ್ಷ ಕೋಟಿ ಮೌಲ್ಯವ ವಿವಿಧ ಯೋಜನೆಗಳು ಅನುಷ್ಠಾನದ ಬೇರೆ ಬೇರೆ ಹಂತಗಳಲ್ಲಿ ಇವೆ’ ಎಂದು ಮಂಡಳಿಯ ಅಧ್ಯಕ್ಷ ಡಿ.ಎಸ್. ರಾವತ್ ಹೇಳಿದ್ದಾರೆ.</p>.<p class="title">ರಾಜ್ಯದ ಎಂಎಸ್ಎಂಇ ವಲಯವು ಬೆಳವಣಿಗೆಯನ್ನು ದಾಖಲಿಸುತ್ತಿದೆ. ರಾಜ್ಯದಲ್ಲಿ ಎಂಎಸ್ಎಂಇ ವಲಯದ 8.5 ಲಕ್ಷಕ್ಕಿಂತ ಹೆಚ್ಚು ಘಟಕಗಳಿವೆ. ಇವು ಸರಿಸುಮಾರು 70 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 2021–22ನೇ ಹಣಕಾಸು ವರ್ಷದಿಂದ 2024–25ನೇ ಹಣಕಾಸು ವರ್ಷದವರೆಗಿನ ಅವಧಿಯಲ್ಲಿ ರಾಜ್ಯವು ಒಟ್ಟು ₹12 ಲಕ್ಷ ಕೋಟಿಗಿಂತ ಹೆಚ್ಚಿನ ಹೊಸ ಹೂಡಿಕೆ ಪ್ರಸ್ತಾವಗಳನ್ನು ಸ್ವೀಕರಿಸಿದೆ.</p>.<p>ರಾಜ್ಯದಲ್ಲಿರುವ ಪ್ರಗತಿಪರವಾದ ಹೂಡಿಕೆ ವಾತಾವರಣ ಇದಕ್ಕೆ ಕಾರಣ ಎಂದು ಎಂಎಸ್ಎಂಇ ರಫ್ತು ಉತ್ತೇಜನಾ ಮಂಡಳಿ ನಡೆಸಿರುವ ಅಧ್ಯಯನವು ಹೇಳಿದೆ.</p>.<p>ರಾಜ್ಯದಲ್ಲಿನ ಹೂಡಿಕೆ ವಾತಾವರಣ, ಮಹತ್ವದ ಮೂಲಸೌಕರ್ಯ ಯೋಜನೆಗಳು, ಮುನ್ನೋಟವಿರುವ ನೀತಿಗಳು, ರಾಜ್ಯದಲ್ಲಿನ ಪ್ರತಿಭೆಯು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್ಡಿಐ) ಆಕರ್ಷಿಸುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p class="title">‘ಈ ಅವಧಿಯಲ್ಲಿ ₹12 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೊಸ ಹೂಡಿಕೆ ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ ₹1.40 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ಅನುಷ್ಠಾನವು ಪೂರ್ಣಗೊಂಡಿದೆ. ₹9.49 ಲಕ್ಷ ಕೋಟಿ ಮೌಲ್ಯವ ವಿವಿಧ ಯೋಜನೆಗಳು ಅನುಷ್ಠಾನದ ಬೇರೆ ಬೇರೆ ಹಂತಗಳಲ್ಲಿ ಇವೆ’ ಎಂದು ಮಂಡಳಿಯ ಅಧ್ಯಕ್ಷ ಡಿ.ಎಸ್. ರಾವತ್ ಹೇಳಿದ್ದಾರೆ.</p>.<p class="title">ರಾಜ್ಯದ ಎಂಎಸ್ಎಂಇ ವಲಯವು ಬೆಳವಣಿಗೆಯನ್ನು ದಾಖಲಿಸುತ್ತಿದೆ. ರಾಜ್ಯದಲ್ಲಿ ಎಂಎಸ್ಎಂಇ ವಲಯದ 8.5 ಲಕ್ಷಕ್ಕಿಂತ ಹೆಚ್ಚು ಘಟಕಗಳಿವೆ. ಇವು ಸರಿಸುಮಾರು 70 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>