ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ತೃತೀಯತ್ರೈಮಾಸಿಕದಲ್ಲಿ ₹ 123.14 ಕೋಟಿ ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹140.41 ಕೋಟಿ ಲಾಭ ಗಳಿಸಿತ್ತು.
ಪ್ರಸಕ್ತ ಆರ್ಥಿಕ ವರ್ಷದ ಒಂಬತ್ತು ತಿಂಗಳುಗಳ ಅವಧಿಯ (ಡಿಸೆಂಬರ್ 19ರ ಅಂತ್ಯಕ್ಕೆ) ನಿವ್ವಳ ಲಾಭವು
₹ 404.47 ಕೋಟಿಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು
₹ 415.51 ಕೋಟಿಗಳಷ್ಟಿತ್ತು.
ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದ ನಿರ್ವಹಣಾ ಲಾಭವು ₹ 501.79 ಕೋಟಿಯಾಗಿದ್ದು,
ಶೇ 25.33 ವೃದ್ಧಿ ಕಂಡಿದೆ. ಬ್ಯಾಂಕಿನ ಒಟ್ಟು ವ್ಯವಹಾರ ₹1,26,267 ಕೋಟಿಗೆ ತಲುಪಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ 7.83 ರಷ್ಟು ಬೆಳವಣಿಗೆ ಕಂಡಿದೆ.
‘ಬ್ಯಾಂಕ್ ಈಗಾಗಲೇ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳನ್ನು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಗೆ ಅಳವಡಿಸಿ, ಕೇವಲ 5 ರಿಂದ 20 ನಿಮಿಷಗಳ ಅವಧಿಯಲ್ಲಿಯೇ ಮಂಜೂರು ಮಾಡುತ್ತಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ತಿಳಿಸಿದ್ದಾರೆ.
‘ಮುಂಬರುವ ದಿನಗಳಲ್ಲಿ ಈ ವಿಧಾನವನ್ನು ನಾವು ಎಂಎಸ್ಎಂಇ ಸಾಲಗಳಿಗೂ ವಿಸ್ತರಿಸಲಿದ್ದೇವೆ. ಬ್ಯಾಂಕಿನ ಅಭಿವೃದ್ಧಿಯು ಆಶಾದಾಯಕವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.