ನವದೆಹಲಿ: ಬಳ್ಳಾರಿ ಜಿಲ್ಲೆಯದೋಣಿಮಲೈಕಬ್ಬಿಣ ಅದಿರು ಪ್ರದೇಶದ ಹರಾಜು ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಮುಂದೂಡಿದೆ.
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮಕ್ಕೆ (ಎನ್ಎಂಡಿಸಿ) ನೀಡಿದ್ದ ಗಣಿಗಾರಿಕೆ ಗುತ್ತಿಗೆ ಅವಧಿ ವಿಸ್ತರಣೆಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಗಣಿಗಾರಿಕೆ ನ್ಯಾಯಮಂಡಳಿಯು ತಡೆ ನೀಡಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ದೋಣಿಮಲೈ ಪ್ರದೇಶದಲ್ಲಿ ಎಂಎಲ್ ಸಂಖ್ಯೆ 2396 ಬ್ಲಾಕ್ನಲ್ಲಿ ಗಣಿ ಗುತ್ತಿಗೆ ನಡೆಸುವ ಸಂಬಂಧ ಆನ್ಲೈನ್ ಹರಾಜು ಪ್ರಕ್ರಿಯೆಗೆ ಆಗಸ್ಟ್ 20ರಂದು ಬಿಡ್ ಆಹ್ವಾನಿಸಲಾಗಿತ್ತು. ಅದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.