ನದಿ ತೀರದ ಗ್ರಾಮಗಳಾದ ದಸೂರ, ಉಮರಜ, ನೀವರಗಿ, ಸಂಖ ಉಮರಾಣಿ, ಹಿಂಗಣಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ನೀರು ದೊರಕುವುದೇ ದುಸ್ತರವಾಗಿದೆ. ನದಿಯಲ್ಲಿ ಆಳವಾದ ಹಳ್ಳ ತೋಡಿ ಅಲ್ಪ ನೀರು ದೊರೆತರೂ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ರಾಸಾಯನಿಕ ಹಾಗೂ ಸತ್ತ ಜಲಚರ ಪ್ರಾಣಿಗಳ ತ್ಯಾಜ್ಯ ಬೆರೆತು ಗಬ್ಬುವಾಸನೆ ಬೀರುತ್ತಿದೆ.